ಅಂತರ್ಜಾತಿ ವಿವಾಹ ಸಮಾಜಕ್ಕೆ ಮಾರಕವೇ?

ಮದುವೆಯನ್ನು ಯಾರು ಯಾರೊಂದಿಗೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡಿಸುತ್ತದೆ. ಇದು ಗಂಡು-ಹೆಣ್ಣಿಗೆ ಸಂಬಂಧಪಟ್ಟ ವಿಷಯ. ಆಯ್ಕೆ ಅವರವರಿಗೆ ಬಿಟ್ಟದ್ದು, ಜೀವನ ಸಂಗಾತಿಗಳು ಅವರು, ಬಾಳಬೇಕಾದವರೂ ಅವರೇ. ಕಷ್ಟ, ಸುಖದಲ್ಲಿ ಮುಳುಗಿ, ತೇಲಿಸುವವರೂ ಅವರೇ.
ಎಲ್ಲಾ ಧರ್ಮಗಳಲ್ಲಿಯೂ ಸಂಪೂರ್ಣ ಹಕ್ಕು, ಅಧಿಕಾರ ಅವರಿಗೆ ಕೊಡಲಾಗಿದೆ. ಆದರೆ, ಬಹುತೇಕವಾಗಿ ತಂದೆ, ತಾಯಂದಿರು ಹೀಗೆ ಮಾಡುತ್ತಿಲ್ಲ. ವರದಕ್ಷಿಣೆಯ ಆಸೆಗಾಗಿ ತಮ್ಮ ಇಚ್ಛಾನುಸಾರವೇ ನಡೆಯಬೇಕು. ಅವರು ನಿಶ್ಚಯಿಸಿದವರನ್ನೇ ತಮ್ಮ ಮಕ್ಕಳು ಒಪ್ಪಿಕೊಳ್ಳಬೇಕು.
ಹೀಗಾಗದೆ ಇದ್ದರೆ ತಂದೆ-ತಾಯಿ ಮತ್ತು ಮಕ್ಕಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ಬೇರೆ, ಬೇರೆ ಆಗುವ ಸಂದರ್ಭಗಳು ಹೆಚ್ಚಾಗುತ್ತಿವೆ. ಜನ್ಮ ಕೊಟ್ಟು ಬೆಳೆಸಿದ ಮಗ-ಮಗಳು, ತಂದೆ-ತಾಯಿಯರನ್ನು ತ್ಯಜಿಸಿ ಕೇವಲ ಒಬ್ಬ ಹೆಣ್ಣಿನ ಮೋಹದ ಬಲೆಯಲ್ಲಿ ಬಿದ್ದ ಎಂಬ ಆರೋಪವನ್ನು ಎದುರಿಸಬೇಕು.
ಹೀಗೆಯೇ, ಒಬ್ಬ ಹುಡುಗನಿಗೋಸ್ಕರ ಎಲ್ಲವನ್ನು ಬಿಟ್ಟಳೆಂದು ಹೆಣ್ಣು ಆರೋಪಕ್ಕೆ ಸಿಕ್ಕಿ ಅನುಭವಿಸಬೇಕು. ಹೀಗೆ ಯೋಚಿಸುವುದು ಸರಿಯಲ್ಲ. ವಯಸ್ಸಾದ ಮಗನಿಗೆ, ಮಗಳಿಗೆ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು.
ಬುದ್ಧಿ ಹೇಳುವ ಹಕ್ಕು, ಅಧಿಕಾರ ಪೋಷಕರಿಗಿದೆ. ಒಪ್ಪದೆ ಹೋದರೆ ಆಶೀರ್ವಾದ ಮಾಡಬೇಕು.ಇದರ ಬದಲು ಮನೆತನದ ಮರ್ಯಾದೆ ಎಂಬ ಕಾರಣ ಸುಪಾರಿ ಕೊಲೆಗಾರರಿಗೆ ತಾಂಬೂಲ ಕೊಟ್ಟು, ಹಣ ಕೊಟ್ಟು ತಮ್ಮ ಮಗಳನ್ನು ಮತ್ತು ಮಗಳು-ಅಳಿಯನನ್ನೂ ಕೊಲ್ಲಿಸುವುದು ಸೂಕ್ತವೇ ? ಇದು ಕಾನೂನು ಹಾಗೂ ಧರ್ಮದ ವಿರುದ್ಧ. ಇದೊಂದು ಪಾಪ ಮತ್ತು ಅಪರಾಧ.
ತಮ್ಮ ಮಗಳನ್ನು ಕೊಲ್ಲಿಸಿದರು ಎಂಬ ಅಪಕೀರ್ತಿಗೆ, ಜೈಲಿಗೆ ಗು ರಿಯಾಗುತ್ತಾರೆ ಪೋಷಕರು. ಈಗ ಯಾರ ಮರ್ಯಾದೆ ಹೋಯಿತು ? ಮಗಳದೋ ಅಥವಾ ಪೋಷಕರದೋ? ನರಕಕ್ಕೆ ಹೋಗುವವರಾರು ? ಸಮಾಜದಲ್ಲಿ ಪ್ರತಿ ದಿನ ನಿಂದನೆಗೆ ಗುರಿಯಾಗುವವರು ಯಾರು ? ಪೋಷಕರೇ ಸಾವಧಾನದಿಂದ ಈ ಪ್ರಶ್ನೆಗಳ ಕಡೆ ಗಮನ ಕೊಡಿ .
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications