ಕಾಂಟ್ಯಾಕ್ಟ್ ಮಾಡಿದಾಗ ಏನು ಟೆಲ್ಲಲಿ?

ಅದೊಂದು ವಿದ್ಯಾವಂತ ಹಿರಿಯ ನಾಗರಿಕರ ಸಂಘಟನೆ. ಅಲ್ಲಿ ಉಪನ್ಯಾಸ ನೀಡಲು ನನ್ನ ವಿಶ್ವಾಸಿಯೊಬ್ಬರಿಂದ ನನಗೆ ಕೋರಿಕೆ ಬಂತು. ಪ್ರತಿ ತಿಂಗಳೂ ನಿರ್ದಿಷ್ಟ ದಿನದಂದು ಏರ್ಪಡಿಸುವ ಉಪನ್ಯಾಸವನ್ನು ಪಿನ್ ಡ್ರಾಪ್ ಸೈಲೆನ್ಸ್ನಿಂದ ಶ್ರೋತೃಗಳು ಆಲಿಸುತ್ತಾರೆಂದೂ ಕನಿಷ್ಠಪಕ್ಷ ಒಂದೂವರೆ ಗಂಟೆ ಮಾತನಾಡಬೇಕಾಗುತ್ತದೆಂದೂ ವಿಷಯದ ಆಯ್ಕೆ ನನ್ನದೇ ಎಂದೂ ತಿಳಿದಾಗ ಸಂತೋಷದಿಂದ ಒಪ್ಪಿಕೊಂಡೆ. ಆರು ವಿಷಯಗಳನ್ನು ಸೂಚಿಸಿದೆ. ಎಲ್ಲವೂ ಗಂಭೀರ ವಿಷಯಗಳು. ಒಂದನ್ನು ಸಂಘಟಕರು ಆಯ್ಕೆಮಾಡಿದರು. ಆ ವಿಷಯದ ಬಗ್ಗೆ ತಯಾರಿ ನಡೆಸತೊಡಗಿದೆ.
ನನಗೆ ಚೆನ್ನಾಗಿ ಗೊತ್ತಿರುವ ವಿಷಯವೇ ಆದಾಗ್ಗ್ಯೂ ಗಟ್ಟಿಯಾದ ಪೂರ್ವಸಿದ್ಧತೆ ಇಲ್ಲದೆ ನಾನು ಮಾತನಾಡಲು ವೇದಿಕೆ ಹತ್ತುವುದಿಲ್ಲ. ಅಂತೆಯೇ ಈ ವಿಷಯದ ಬಗ್ಗೆಯೂ ಮೂರು ದಿನ ಕುಳಿತು ಸಿದ್ಧತೆ ಮಾಡಿಕೊಂಡೆ. ಹತ್ತಾರು ಪುಟಗಳಷ್ಟು ಸಾಮಗ್ರಿ ತಯಾರು ಮಾಡಿಕೊಂಡೆ.
ಆ ಮಧ್ಯೆ ಸಂಘಟನೆಯ ಕಾರ್ಯದರ್ಶಿಯವರು ನನ್ನ ಮನೆಗೆ ಬಂದು ಆಹ್ವಾನವನ್ನು ಖಾತ್ರಿಮಾಡಿ, ನನ್ನ ಬರುವಿಕೆಯನ್ನು ಖಾತ್ರಿಪಡಿಸಿಕೊಂಡುಹೋದರು. ಹಿಂದಿನ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಕೂಡ ನಡೆಸಿದ್ದಾಗಿ ಅವರು ಹೇಳಿದರಲ್ಲದೆ ನಿಗದಿತ ಸಮಯಕ್ಕೆ ಉಪನ್ಯಾಸ ಆರಂಭವಾದರೂ ಹಲವು ಶ್ರೋತೃಗಳು ಅರ್ಧ ಗಂಟೆಯಷ್ಟು ತಡವಾಗಿ ಬರುತ್ತಾರೆಂದೂ ಸೂಚನೆ ನೀಡಿದರು.
ನಾನು ಮಾತನಾಡಬೇಕಿದ್ದ ವಿಷಯ ಗಹನವೂ ಗಂಭೀರವೂ ಆಗಿರುವುದಾದ್ದರಿಂದ ಎಲ್ಲರೂ ಪೂರ್ಣ ಉಪನ್ಯಾಸವನ್ನು ಕೇಳಲಿ ಎಂಬ ಉದ್ದೇಶದಿಂದ ಹಾಗೂ ಕಳೆದ ತಿಂಗಳಿನಂತೆ ಈ ತಿಂಗಳೂ ಶ್ರೋತೃಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡೂ ದೊರೆಯಲಿ ಎಂಬ ಆಶಯದಿಂದ ನನ್ನ ಉಪನ್ಯಾಸ ಕಾರ್ಯಕ್ರಮದಲ್ಲೂ ಆರಂಭದಲ್ಲಿ ಕೊಂಚ ಹೊತ್ತು ಸುಗಮ ಸಂಗೀತ ಏರ್ಪಡಿಸುವ ಸಲಹೆ ಕೊಟ್ಟೆ. ಪ್ರಸಿದ್ಧ ಗಾಯಕರಾದ ನನ್ನ ಮಿತ್ರರೊಬ್ಬರನ್ನು ಹಾಡಲು ವಿನಂತಿಸಿಕೊಂಡೆ ಕೂಡ. ಅವರು ಒಪ್ಪಿದರು. ಆದರೆ, ಪಕ್ಕವಾದ್ಯಗಳ ಕಲಾವಿದರಿಬ್ಬರಿಗೆ ಕಿಂಚಿತ್ ಗೌರವಧನ ನೀಡಲು ಸಂಘಟಕರು ಒಪ್ಪದಿದ್ದುದರಿಂದ ಗಾಯನದ ವ್ಯವಸ್ಥೆ ತಪ್ಪಿಹೋಯಿತು. ನಾನು ಸುಮ್ಮನಾದೆ.
ಉಪನ್ಯಾಸದ ದಿನ ಸಮೀಪಿಸುತ್ತಿದ್ದಂತೆ ನನಗೆ ಕಾರ್ಯದರ್ಶಿಯವರಿಂದ ದೂರವಾಣಿ ಕರೆ ಬಂತು. ಫಲಾನಾ ಕಾರಣದಿಂದ ಉಪನ್ಯಾಸವನ್ನು ರದ್ದುಮಾಡಬೇಕಾಗಿದೆಯೆಂದೂ ಮರುವಾರ ಸಂಘದ ವಾರ್ಷಿಕೋತ್ಸವ ಇದೆಯೆಂದೂ ಅದಕ್ಕೆ ಇಂಥಿಂಥವರು ಅತಿಥಿಗಳಾಗಿ ಬರುತ್ತಾರೆಂದೂ ಆಗಲೇ ನಾನೂ ಬಂದು ಮಾತಾಡಿಬಿಡಬೇಕೆಂದೂ ಹೇಳಿದರು!
".......ಅವರು ಬರ್ತಾರೆ, ಆಗ ಬಂದು ನೀವೂ ಸ್ವಲ್ಪ ಮಾತಾಡಿಬಿಡಿ", ಎಂದರು!
ಸಂಘಟಕರು ಮತ್ತು ಶ್ರೋತೃಗಳ ಆಸಕ್ತಿಯಮೇಲೆ ಅತೀವ ವಿಶ್ವಾಸ ಹೊಂದಿ ಒಂದೂವರೆ ಗಂಟೆಯ ಭಾಷಣಕ್ಕೆ ಸಿದ್ಧತೆ ಮಾಡಿಕೊಂಡಿದ್ದ ನನಗೆ, 'ನೀವೂ ಸ್ವಲ್ಪ ಮಾತಾಡಿಬಿಡಿ', ಎಂಬ ಸಂಘಟಕರ ಕ್ಯಾಷುವಲ್ ಅಪ್ರೋಚ್ ಕಂಡು ಆಘಾತವಾಯಿತು! ನೀವು ಹೇಳಿದ ಆ ಬದಲಾದ ದಿನ ನಾನು ಪ್ರವಾಸದಲ್ಲಿರುತ್ತೇನೆಂದು ಅಷ್ಟೇ ಉತ್ತರಿಸಿದೆ. (ಆ ದಿನ ನಾನು ಪ್ರವಾಸದಲ್ಲಿರುವುದು ನಿಜ.)
"ಸರಿ ಹಾಗಾದ್ರೆ, ಐ ವಿಲ್ ಕಾಂಟ್ಯಾಕ್ಟ್ ಯೂ ಅಗೈನ್", ಎಂದು ಕಾರ್ಯದರ್ಶಿಗಳು ಮಾತು ಮುಗಿಸಿದರು. ಅವರು ಮತ್ತೆ ಕಾಂಟ್ಯಾಕ್ಟ್ ಮಾಡಿದಾಗ ಅವರಿಗೆ ಏನು ಟೆಲ್ಲಲಿ ಎಂದು ಯೋಚಿಸುತ್ತಿದ್ದೇನೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications