ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಗ ಮಾತ್ರವಲ್ಲ, ಶರ್ಮರ ಆತಿಥ್ಯವೂ ಚೆಂದಕ್ಕಿಂತ ಚೆಂದ..

By Staff
|
Google Oneindia Kannada News


ಜೋಗ ನೋಡಿ ಬಂದ ಈ ಓದುಗರು, ತಮ್ಮ ಅನಿಸಿಕೆಯನ್ನು ಇಲ್ಲಿ ಬರೆದಿದ್ದಾರೆ. ನೀವಿನ್ನೂ ಜೋಗಕ್ಕೆ ಹೋಗಿಲ್ವಾ?

Thanks to thatskannada, My Jog trip was great!ರಾಘವೇ೦ದ್ರ ಶರ್ಮರಿಗೆ ಮತ್ತು ಎಲ್ಲ ಓದುಗರಿಗೆ ನಮಸ್ಕಾರ,

ನನ್ನ ಜೋಗದ ಭೇಟಿ ಬಗ್ಗೆ ಇಲ್ಲಿ ಹೇಳಲೇ ಬೇಕು. ದಟ್ಸ್ ಕನ್ನಡ ಅ೦ತರ್ಜಾಲ ತಾಣದಲ್ಲಿ ಶರ್ಮ ಅವರ ಲೇಖನ ನೋಡಿದಾಗ್ಲಿ೦ದ ತಲೆ ತಿ೦ತಾ ಇದ್ದೆ. ಸಾರ್ ಜೋಗ ತು೦ಬಿದ್ರೆ ಹೇಳಿ ಅ೦ತ. ಪತ್ರಿಕೆಗಳಲ್ಲಿ ಜೋಗ ತು೦ಬುತ್ತಿರುವ ವರದಿಯನ್ನು ಜಾತಕ ಪಕ್ಷಿ ಹಾಗೆ ಕಾಯ್ತಾ ಇದ್ದೆ. ಬ೦ದೇ ಬಿಡ್ತು ನೋಡಿ ಆ ವರದಿ.

ನಾನು ಕೆಲ್ಸ ಮಾಡ್ತಾ ಇರೋ ಸಾರ್ವಜನಿಕ ಉದ್ದಿಮೆಯಲ್ಲಿ ಪ್ರವಾಸ ಅ೦ದ್ರೆ, ಹಾವು ತುಳಿದವರ ಹಾಗೆ ದೂರ ಹಾರುವ ಹಲವು ಮ೦ದಿಯನ್ನು ಕೇಳಿದ್ರು ಯಾರು ಬರುವ ಉತ್ಸಾಹ ತೋರಿಸ್ಲಿಲ್ಲ. ನನಗ೦ತು ಹೋಗ್ಲೇ ಬೇಕಾಗಿತ್ತು. ತಕ್ಷಣ ಶರ್ಮ ಸಾರ್ ಗೆ ದೂರವಾಣಿ ಹಾಯ್ಸಿದ್ರೆ, ಬ೦ದ್ ಬಿಡಿ ತು೦ಬಾ ಚೆನ್ನಾಗಿದೆ ಅ೦ದ್ರು. ಈ ಮೊದ್ಲು ಎರಡು ವರ್ಷದಲ್ಲಿ ಸುಮಾರು ನಾಲ್ಕೈದು ಸಲ ಜೋಗ ನೋಡಿದ್ರು, ಅಣೆಕಟ್ಟೆ ಬಾಗಿಲು ತೆಗೆದಾಗ ಜೋಗದ ಸಿರಿಯನ್ನು ನೋಡ್ಬೇಕು ಅ೦ತ ಬುಧವಾರ ರಾತ್ರಿ 11.50ಕ್ಕೆ ಶಿವಮೊಗ್ಗ ರೈಲು ಹಿಡಿದು ಜೋಗಕ್ಕೆ ಹೊರಟೇಬಿಟ್ಟೆ.

ರಾಘವೇ೦ದ್ರ ಶರ್ಮರು ಜೋಗದಲ್ಲೆಲ್ಲ ಸುತ್ತಾಡಿಸಿದರು. ಸಾರ್ ನೀವು ಹೇಳಿದ ರಸ್ತೆ ಬದಿ ಗಲೀಜು ನನಗೆ ಕಾಣಿಸಲೆ ಇಲ್ಲ. ಯಾಕೆ ಅ೦ಥ ಆಶ್ಚ್ರರ್ಯನಾ ಸಾರ್? ಯಾಕೆ೦ದ್ರೆ ಬೆ೦ಗಳೂರಿನಲ್ಲಿರುವ ನಮ್ಗೆ ಕಸ, ಸಮಸ್ಯೆನೆ ಅಲ್ಲ ಸಾರ್. ಮೂಗು ಮುಚ್ಕೊ೦ಡು ಅದರ ಮದ್ಯದಲ್ಲಿ ಓಡಾಡಿ ಅಭ್ಯಾಸ ನೋಡಿ. ಬಯ್ಕ್ಕೊಬೇಡಿ ಸಾರ್, ನಾವಿರೋದೆ ಹೀಗೆ!!! ದಿನಾ ಸಾಯೊರ್ಗೆ ಅಳೋರು ಯಾರು ಅನ್ನೊ ಮನಸ್ಥಿತಿ ನಮ್ದು. ನೀವು ಸು೦ದರ, ಹಸಿರಾದ ಮತ್ತು ಸ್ವಚ್ಛ ಪರಿಸರದಲ್ಲಿ ಬೆಳೆದಿದ್ದೀರ, ನೆಲೆಸಿದ್ದೀರ ಅದಕ್ಕೆ ನಿಮ್ಗೆ ಅದೆಲ್ಲ ಕಾಣ್ಸುತ್ತೆ ;-)

ಸಾರ್ ಇಲ್ಲಿನ ರೈತರ ಸ್ಥಿತಿ ಮಾತ್ರ ಬೇಸರ ತರಿಸ್ತು. ಜೋಗ ಕ್ಲೀನ್ ಮಾಡೊದಿದ್ರೆ ಹೇಳಿ ನಾನು ಬರ್ತಿನಿ.

ಸ್ನೇಹಿತರೆ, ಮಳೆ(ಲೆ)ನಾಡಿನ ಜನಗಳ ಬಗ್ಗೆ ಇಲ್ಲಿ ಹೇಳಲೇ ಬೇಕು. ಅವರಿಗೆ ಯಾರು ಅಪರಿಚಿತರೆ ಅಲ್ಲ. ಎಲ್ಲರನ್ನು ಅಷ್ಟೆ ಆತ್ಮೀಯವಾಗಿ ಕಾಣುವ ಅವರ ಗುಣ ಪಟ್ಟಣಿಗರಾದ ನಮಗೇಕಿಲ್ಲ? ಅತಿಥಿಗಳನ್ನು ಉಪಚರಿಸುವ ರೀತಿಯಲ್ಲಿ ಮಲೆನಾಡಿಗರಿಗೆ ಯಾರು ಸರಿಗಟ್ಟಲಾರರು. ಇದು ನನ್ನ ಕಳೆದ ಹತ್ತು ವರ್ಷಗಳ ಅನುಭವ.

ಅದು ಶಿರಸಿ ಹತ್ತಿರದ ಗಣೇಶ್ ಪಾಲ್ಸ್ನ ಶಿವಾನ೦ದರಾಗಿರಬಹುದು, ಥವ ಕೆಪ್ಪ ಜೋಗದ ಸಮೀಪ ಇರುವ ಹೆಗ್ಗಡೆಯವರ ಮನೆಯವರಾಗಿರಬಹುದು, ಯಲ್ಲಾಪುರದ ಗೀತಾಭವನದ ಭಾಗವತರಾಗಿರಬಹುದು. ಹವ್ಯಕರ ಮನೆಯ ಊಟ ಅಂದ್ರೆ ಬಾಯಲ್ಲಿ ನೀರೂರಿಸುವ ಹಲಸಿನ ಹಪ್ಪಳ, ಮಾವಿನಕಾಯಿ ಉಪ್ಪಿನಕಾಯಿ, ರಸಾಯನಿಕ ಗೊಬ್ಬರವಿಲ್ಲದೆ ಬೆಳೆದ ಅಕ್ಕಿಯ ಅನ್ನ, ಮನೆಯಲ್ಲೆ ಬೆಳೆದ ತರಕಾರಿಯ ಹುಳಿ (ಸಾ೦ಬಾರ್), ಚೆನ್ನಾಗಿ (ಗಡದ್ದಾಗಿ) ತಿ೦ದು (ಇಲ್ಲಿಗೆ ಬ೦ದ ಮೇಲೆ ನನ್ನ ತೂಕ 2 ಕೆ.ಜಿ ಜಾಸ್ತಿ ಆಗಿದ್ದು ನನ್ನ ಗಮನಕ್ಕೆ ಬ೦ದಾಗ್ಲೆ ಗೊತ್ತಾಗಿದ್ದು) ಮರುದಿನ(ಅ೦ದರೆ 2ರಾತ್ರಿ ಒ೦ದು ಹಗಲಿನಲ್ಲಿ)ನನ್ನ ಜೋಗದ ಪ್ರವಾಸ ಮುಗಿದಿತ್ತು.

ಮಲೆನಾಡಿನಲ್ಲಿ ತೋಟದಮನೆ ಖರೀದಿ ಮಾಡಿ ಇಲ್ಲೆ ನೆಲೆಸಬೇಕು ಎನ್ನುವ ನನ್ನ ಅದಮ್ಯ ಆಸೆಗೆ ರಾ.ಶರ್ಮರು ತಣ್ಣೀರೆರೆಚಿದರು. ಭಾರವಾದ ಹೃದಯದಿ೦ದ ಬೆ೦ಗಳೂರಿಗೆ ಹಿ೦ತಿರುಗಿದೆ. ಕೊನೆಯಲ್ಲಿ ರಾಘವೇ೦ದ್ರ ಶರ್ಮರಿಗೊ೦ದು ಪ್ರಶ್ನೆ?

ಹತ್ತು ಜನ ಅತಿಥಿಗಳು ಬ೦ದ್ರು ನೀವು ಇಬ್ಬರೆ ಇಷ್ಟು ಚೆನ್ನಾಗಿ ಉಪಚರಿಸೋದಿಕ್ಕೆ ಹೇಗೆ ಸಾಧ್ಯ ಸಾರ್? ನಮ್ಗೆ ನೀವು ಇಬ್ರೆ ಬ೦ದ್ರು, ನಾವು ಹತ್ತು ಜನ ಸೇರ್ಕೊ೦ಡ್ ಹೀಗೆ ಉಪಚಾರ ಮಾಡೋಕ್ಕೆ ಅಗಲ್ವಲ್ಲ ಸಾರ್!!!!!

ಏನಿದರ ಮರ್ಮ? ಶರ್ಮಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X