ಅಸ್ಸಾಂನ ಶೇ. 95ರಷ್ಟು ಯುವಕರಿಗೆ ಮಾನಸಿಕ ಆರೋಗ್ಯ ಸಮಸ್ಯೆ: ಯುನಿಸೆಫ್
ಗುವಾಹಟಿ, ನವೆಂಬರ್ 22: ಅಸ್ಸಾಂನ ಸುಮಾರು ಶೇ. 95ರಷ್ಟು ಯುವಕರು ಸೈಬರ್ಬುಲ್ಲಿಂಗ್ ಮತ್ತು ದೈಹಿಕ ಶಿಕ್ಷೆಯಿಂದ ಬಳಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಯುನಿಸೆಫ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ನಡೆಸಿದ ಸಮೀಕ್ಷೆಯು ಬಹಿರಂಗಪಡಿಸಿದೆ.
3.1 ಕೋಟಿ ಜನಸಂಖ್ಯೆಯಿರುವ (2011 ರ ಜನಗಣತಿ) ಅಸ್ಸಾಂನ ರಾಜ್ಯದಲ್ಲಿ 19 ಪ್ರತಿಶತದಷ್ಟು ಜನರು 15 ರಿಂದ 24 ವರ್ಷ ವಯಸ್ಸಿನವರಾಗಿದ್ದಾರೆ. ಯುನಿಸೆಫ್ ನಡೆಸಿದ ಸಮೀಕ್ಷೆಗೆ ಪಾಲ್ಗೊಂಡ ಶೇ. 60ರಷ್ಟು ಯುವಕರು ತಮ್ಮ ಸಾಮಾಜಿಕ ಸಂಬಂಧಗಳ ಮೇಲೆ ಪರಿಣಾಮ ಬೀರಿದ್ದಾರೆ. ಶೇ. 24ರಷ್ಟು ಇದು ಒತ್ತಡ, ಆತಂಕ ಮತ್ತು ಭಯಕ್ಕೆ ಕಾರಣವಾಗಿದೆ. ಶೇ. 17ರಷ್ಟು ಜನರು ದೈಹಿಕವಾಗಿ ಹಾನಿಗೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.
ಈ ವರ್ಷ ಜುಲೈನಲ್ಲಿ ಪ್ರಾರಂಭಿಸಲಾದ ಯು ರಿಪೋರ್ಟ್ ಸಮೀಕ್ಷೆಯನ್ನು ಅಸ್ಸಾಂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎಎಸ್ಸಿಪಿಸಿಆರ್) ಸುರಕ್ಷಾ ಎಂಬ ಅಭಿಯಾನವನ್ನು ಬೆಂಬಲಿಸಲು ಸಿದ್ಧಪಡಿಸಲಾಗಿದೆ. ಇದು ಮಕ್ಕಳ ಮೇಲಿನ ದೌರ್ಜನ್ಯದ ಸ್ವರೂಪಗಳು ಮತ್ತು ಪರಿಹಾರ ಕಾರ್ಯವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಯು ರಿಪೋರ್ಟ್ ಯುನಿಸೆಫ್ನಿಂದ ರಚನೆಯಾದ ಸಾಮಾಜಿಕ ವೇದಿಕೆಯಾಗಿದ್ದು, ಎಸ್ಎಂಎಸ್, ಫೇಸ್ಬುಕ್ ಮತ್ತು ಟ್ವಿಟ್ಟರ್ ಮೂಲಕ ಸಕ್ರಿಯವಾಗಿದೆ. ಅಲ್ಲಿ ಯುವಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಗುವಾಹಟಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮೈಥಿಲಿ ಹಜಾರಿಕಾ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಯುವಜನರ ಉಪಸ್ಥಿತಿಯು ಗಣನೀಯವಾಗಿ ಹೆಚ್ಚಾಗಿರುವುದರಿಂದ ಸೈಬರ್ ಬುಲ್ಲಿಂಗ್ ಸಾಮಾನ್ಯವಾಗಿದೆ. ಇದು ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯ ಮೂಲಕವೂ ಸಾವಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಸಾಮಾಜಿಕವಾಗಿ ಪರಕೀಯತೆ, ಶಕ್ತಿಹೀನತೆಯ ಭಾವನೆ, ಆತಂಕ, ಖಿನ್ನತೆ ಮತ್ತು ಒಂಟಿತನದ ಸಾಮಾನ್ಯ ಅಭಿವ್ಯಕ್ತಿಗಳಾಗಿವೆ. ಖಿನ್ನತೆಯಿರುವ ಯುವಕರು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವುದು ಅವನ/ಅವಳ ತಪ್ಪು ಎಂದು ಆಗಾಗ್ಗೆ ನಂಬುತ್ತಾರೆ. ಇಲ್ಲಿ ಅವರು ತನ್ನ ಹತ್ತಿರವಾದ ಕುಟುಂಬಕ್ಕೆ ವಿಷಯವನ್ನು ತಿಳಿಸುವುದು ಮುಖ್ಯವಾಗಿದೆ ಎಂದು ಹಜಾರಿಕಾ ಪಿಟಿಐಗೆ ತಿಳಿಸಿದ್ದಾರೆ.

ಮಾನಸಿಕ ಆರೋಗ್ಯದ ಮೇಲೆ ಶಾಶ್ವತ ಪರಿಣಾಮ
ಸಾಮಾಜಿಕ ಕಾರ್ಯಕರ್ತೆ ಮತ್ತು ಸಲಹೆಗಾರ್ತಿಯಾಗಿರುವ ಅರ್ಚನಾ ಬೋರ್ತಕೂರ್ ಅವರು ಸೈಬರ್ಸ್ಪೇಸ್ನಲ್ಲಿ ಟ್ರೋಲ್ ಮಾಡುವುದು ಯುವಜನರ ಮಾನಸಿಕ ಆರೋಗ್ಯದ ಮೇಲೆ ಶಾಶ್ವತ ಪರಿಣಾಮ ಬೀರಬಹುದು. ಆಗ ಅವರು ತಕ್ಷಣ ಪೊಲೀಸರು, ಸಲಹೆಗಾರರ ಮೊರೆ ಹೋಗಬೇಕು ಅಲ್ಲದೆ ಕಾನೂನು ಸಹಾಯವನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ
ಯುನಿಸೆಫ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ನಡೆಸಿದ ಸಮೀಕ್ಷೆಯಲ್ಲಿ ಅಸ್ಸಾಂನ 24 ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ 9,500 ಎನ್ಎಸ್ಎಸ್ ಸ್ವಯಂಸೇವಕರು ಸೈಬರ್ಬುಲ್ಲಿಂಗ್ ಮತ್ತು ದೈಹಿಕ ಶಿಕ್ಷೆಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಮತ್ತು ಅದರ ಫಲಿತಾಂಶಗಳನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಇಲ್ಲಿ ಅರ್ಧದಷ್ಟು ಯುವಕರು ಅಪರಿಚಿತ ವ್ಯಕ್ತಿಯಿಂದ ಆನ್ಲೈನ್ನಲ್ಲಿ ಬೆದರಿಕೆ ಎದುರಿಸುತ್ತಿದ್ದಾರೆ. ಶೇ. 12 ಪ್ರತಿಶತದಷ್ಟು ಜನರು ಸಹಪಾಠಿಯಿಂದ ಮತ್ತು 14 ಪ್ರತಿಶತದಷ್ಟು ಸ್ನೇಹಿತರಿಂದ ಹಿಂಸೆಗೆ ಒಳಗಾಗಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಶೇ. 25ರಷ್ಟು ಮಂದಿ ಸಕ್ರಿಯ
ಫೇಸ್ಬುಕ್ನಲ್ಲಿ ಶೇ. 36ರಷ್ಟು ಯುವಕರು ಸಕ್ರಿಯವಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಶೇಕಡಾ 25 ರಷ್ಟು ಮಂದಿ ಇದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳುಗಳನ್ನು ಹರಡುವುದು, ಅಸಭ್ಯ ಫೋಟೋಗಳು ಅಥವಾ ವಿಡಿಯೊಗಳು (ಶೇ. 35) ಆನ್ಲೈನ್ನಲ್ಲಿ ಬೆದರಿಕೆ ಒಡ್ಡುವುದು. ಸಾಮಾನ್ಯ ಕಾರಣವಾಗಿ ದೈಹಿಕ ರೂಪದೊಂದಿಗೆ ಬೆದರಿಸುವ ಅತ್ಯಂತ ಸಾಮಾನ್ಯವಾದ ಸಂಗತಿಗಳಾಗಿವೆ.

ಟ್ಯೂಷನ್ಗಳು, ಮೈದಾನಗಳಲ್ಲಿ ದೈಹಿಕ ಹಿಂಸೆ
ಯುನಿಸೆಫ್ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 35 ರಷ್ಟು ಯುವಕರು ಮನೆಯಲ್ಲಿ ದೈಹಿಕ ಶಿಕ್ಷೆಯನ್ನು ಅನುಭವಿಸಿದ್ದಾರೆ. 25 ಶೇಕಡಾ ಶಾಲೆಯಲ್ಲಿ, ಶೇಕಡಾ 14 ರಷ್ಟು ಖಾಸಗಿ ಟ್ಯೂಷನ್ಗಳು ಮತ್ತು ಕ್ರೀಡಾ ಮೈದಾನಗಳಲ್ಲಿ ಇತರ ಸ್ಥಳಗಳಲ್ಲಿ ದೈಹಿಕ ಶಿಕ್ಷೆಗೆ ಗುರಿಯಾಗಿದ್ದಾರೆ. ಶೇಕಡಾ ಇಪ್ಪತ್ತಾರು ಜನರು ಎಲ್ಲಾ ಮೂರು ಹಂತಗಳಲ್ಲಿ ಈ ನೋವು ಅನುಭವಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications