ಅಕ್ಕ ಕನ್ನಡ ಸಮ್ಮೇಳನಕ್ಕೆ 'ಫೆಸ್ಟ್ ಫಾರ್ ಬೆಸ್ಟ್'

ಗುಡ್ ನ್ಯೂಸ್ ಎಂದರೆ, ಅರ್ಚನಾ ಉಡುಪ ಮತ್ತು ಮಧು ನಟರಾಜ್ ತಂಡದ ತಲಾ 15 ಕಲಾವಿದರಿಗೆ ಕಳೆದ ಗುರುವಾರ ವೀಸಾ ಸಿಕ್ತು. ಇವರಲ್ಲದೆ ಇತರ 50 ಮಂದಿಗೆ ಚೆನ್ನೈನ ಅಮೆರಿಕಾ ರಾಯಭಾರಿ ಕಚೇರಿಯಿಂದ P3 ವೀಸಾ ದೊರೆತಿದೆ ಎಂದು ಅಕ್ಕ ಟ್ರಸ್ಟೀ ಅಮರ್ ನಾಥ್ ಗೌಡ ಒನ್ ಇಂಡಿಯಾಗೆ ತಿಳಿಸಿದರು.
ಇದಲ್ಲದೆ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದ ಇನ್ನೊಂದು ತಂಡಕ್ಕೂ ವೀಸಾ ಪ್ರಾಪ್ತವಾಗಿದ್ದು ಎಲ್ಲರೂ ಅಮೆರಿಕಾ ಪ್ರಯಾಣಕ್ಕೆ ಸಿದ್ಧರಾಗಿದ್ದಾರೆ ಎಂದು ಗೌಡರು ಹೇಳಿದರು. 3 ದಿನಗಳ ಸಮ್ಮೇಳನ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಅಮೆರಿಕಾ ಪೂರ್ವ ಕರಾವಳಿಯ ಅಟ್ಲಾಂಟ ನಗರದಲ್ಲಿ ಮೇಳೈಸುತ್ತದೆ.
"ಫೆಸ್ಟ್ ಫಾರ್ ಬೆಸ್ಟ್" ತಂಡದ ಕಲ್ಪನೆ ಮತ್ತು ನಿರ್ಮಾಣ ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ಮತ್ತು ಐಎಎಸ್ ಅಧಿಕಾರಿ ಐ.ಎಂ. ವಿಠಲಮೂರ್ತಿ ಅವರ ಜೋಡಿ ಪ್ರಯತ್ನ. ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ವಿಶಿಷ್ಟವಾದ ಕನ್ನಡ ಸಂಸ್ಕೃತಿ ಸೌರಭ ಬೀರುವ ಉದ್ದೇಶ ಇವರಿಬ್ಬರದ್ದು.
ಸಮ್ಮೇಳನದ ಮೂರು ದಿನಗಳ ಉದ್ದಕ್ಕೂ ಮನರಂಜನೆಯ ಮಹಾಪೂರವೇ ಇರುತ್ತದೆ. ಗೋಷ್ಠಿ, ಭಾಷಣ, ಉಪನ್ಯಾಸ, ವಸ್ತು ಪ್ರದರ್ಶನ ಹಾಗೂ ಮಾರಾಟದ ಜತೆಗೆ ಅಮೆರಿಕಾದ ಮೂಲೆಮೂಲೆಗಳಿಂದ ಆಗಮಿಸುವ ಕನ್ನಡ ಕುಟುಂಬಗಳು ಪರಸ್ಪರ ಕಲೆಯುವುದಕ್ಕೆ ಸಮ್ಮೇಳನ ವಿರಳ ಅವಕಾಶ ಒದಗಿಸುತ್ತದೆ.
ಬಂಧುಮಿತ್ರರನ್ನು ಮುದ್ದಾಂ ಕಂಡು ಉಭಯಕುಶಲೋಪರಿ ಮಾಡುವುದು, ಮಧುರ ನೆನಪುಗಳ ಬುತ್ತಿ ಬಿಚ್ಚಿ ಮೆಲುಕುಹಾಕುವುದು ಹಿತವಾಗಿರತ್ತೆ. ಎಲ್ಲದಕ್ಕಿಂತ ಮುಖ್ಯ ಮೆನು, ಸಮ್ಮೇಳನ ಸಭಾಂಗಣದಲ್ಲಿ, ಹೋಟೆಲ್ ಲಾಬಿಗಳಲ್ಲಿ, ಸ್ಟಾರ್ ಬಕ್ಸ್ ಕಾಫಿ ಶಾಪುಗಳಲ್ಲಿ ಸಾಂಪ್ರದಾಯಿಕ ಕರ್ನಾಟಕ ಉಡುಗೆತೊಡುಗೆ ಧರಿಸಿ ಜತೆಗಾರ ಕನ್ನಡಿಗರೊಂದಿಗೆ ಪುಷ್ಕಳವಾಗಿ ಕನ್ನಡದಲ್ಲಿ ಹರಟೆ ಕೊಚ್ಚುವುದು.
ಕಪ್ಪಣ್ಣ ಮತ್ತು ವಿಠಲಮೂರ್ತಿ ಅವರ ಮುಂದಾಳತ್ವದ ಫೆಸ್ಟ್ ಫಾರ್ ಬೆಸ್ಟ್ ತಂಡದಲ್ಲಿರುವವರ 42 ಮಂದಿ ಸಾಂಸ್ಕೃತಿಕ ರಾಯಭಾರಿಗಳ ಹೆಸರುಗಳು ಇಂತಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications