Get Updates
Get notified of breaking news, exclusive insights, and must-see stories!

ನಿಜವಾದ ಪ್ರಶಂಸೆ ಸಲ್ಲಬೇಕಾದದ್ದು ಸ್ವಯಂಸೇವಕರಿಗೆ

AKKA idol winners
'ಅಕ್ಕ ಐಡಲ್' ವಿಷಯದಲ್ಲೂ ಹಾಗೇ ಆಯ್ತು. ಸ್ಪರ್ಧಾವಿಜೇತರಿಂದ ಮುಖ್ಯವೇದಿಕೆಯಲ್ಲಿ ಮತ್ತೊಮ್ಮೆ ಹಾಡಿಸಿದ್ದೇನೋ ಒಳ್ಳೆಯ ವಿಚಾರ. ಆದರೆ ಸಮಿತಿ ಸದಸ್ಯರ ಪರಿಚಯ ಒಮ್ಮೆ ವಿಡಿಯೋರೂಪದಲ್ಲಿ, ಮತ್ತೊಮ್ಮೆ ವೇದಿಕೆಗೆ ಅವರನ್ನೆಲ್ಲ ಕರೆತಂದು- ಹೀಗೆ ಅತಿ ಎನಿಸುವಂತೆಯೇ ಆಯ್ತು. ಪ್ರೇಕ್ಷಕರ ಸಹನೆಯ ಕಟ್ಟೆ ಒಡೆಯಿತು. ಸಮ್ಮೇಳನದ ಯಶಸ್ಸಿಗೆ ಬೇರೆಬೇರೆ ಸಮಿತಿಗಳಲ್ಲಿ ನಿಸ್ವಾರ್ಥಿಗಳಾಗಿ ದುಡಿಯುವ ಸ್ವಯಂಸೇವಕರು ಕಾರಣರಾಗುತ್ತಾರೆ, ಆದರೆ "ಶೋ"ಭಾಗ್ಯವನ್ನು ಕೆಲವರು ಮಾತ್ರ ಗಿಟ್ಟಿಸಿಕೊಳ್ಳುತ್ತಾರೆ. ಅದು ಯಾರಿಗೇ ಆದರೂ ಚಂದವೆನಿಸುವುದಿಲ್ಲ, ಹಾಗಾಗಿ ಪ್ರೇಕ್ಷಕರ ಪ್ರತಿಕ್ರಿಯೆ ಸರಿಯಾಗಿಯೇ ಇತ್ತು ಎಂದು ಹಲವರ ಅಂಬೋಣ.

ಒಟ್ಟಾರೆಯಾಗಿ ಗಮನಕ್ಕೆ ಬಂದ ವಿಚಾರವೆಂದರೆ ಈ ಸಮ್ಮೇಳನದಲ್ಲಿ ಆತಿಥೇಯ ನೃಪತುಂಗ ಸಂಘದ ಸದಸ್ಯರ ಕಾರ್ಯಕ್ರಮಗಳು ತುಂಬಾ ದೊಡ್ಡದೊಡ್ಡವು ಎಲ್ಲವೂ ಮುಖ್ಯಸಭಾಂಗಣದಲ್ಲೇ ಇದ್ದವು, ಅಷ್ಟೆಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರೇ ನೂರಾರು ಜನವಾದ್ದರಿಂದ ಬಹುಶಃ ಸಮ್ಮೇಳನ ತಯಾರಿಗಳ ವೇಳೆ ಮತ್ತು ಸಮ್ಮೇಳನದ ಮೂರು ದಿನಗಳಲ್ಲೂ ಅವರಿಗೆಲ್ಲ ತಂತಮ್ಮ ಕಾರ್ಯಕ್ರಮಪ್ರದರ್ಶನವೇ ಪ್ರಾಮುಖ್ಯ ಪಡೆದು ಸಮ್ಮೇಳನವನ್ನು ಚಂದಗಾಣಿಸಲು ಮೈಮುರಿದು ದುಡಿದ ಸ್ವಯಂಸೇವಕರು ಕೇವಲ ಬೆರಳೆಣಿಕೆಯವರಷ್ಟೇ ಆದರು. ನಿಜವಾದ ಪ್ರಶಂಸೆ, ಕೃತಜ್ಞತೆ ಸಲ್ಲಬೇಕಾದ್ದು ಅಂಥವರಿಗೆ.

ಇದನ್ನು 'ಶಿವಪೂಜೆಯಲ್ಲಿ ಕರಡಿ' ಅಂತಾದ್ರೂ ಅನ್ನಿ, ಕಿಟಕಿಯಲ್ಲಿ ಹೋದದ್ದು ಗವಾಕ್ಷೀಲಿ ಬಂತು ಅಂತಾದ್ರೂ ಅನ್ನಿ, ರಾಜಕಾರಣಿಗಳ ರಗಳೆ ಇಲ್ಲದ ಸಮ್ಮೇಳನ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕೊನೆಗೂ ಒಬ್ಬ ರಾಜಕಾರಣಿ ಕಾಣಿಸಿಕೊಂಡರು ಮಂಡ್ಯದ ಸಂಸದ ಚೆಲುವರಾಯ ಸ್ವಾಮಿ. ಮತ್ತೆ ಯಥಾಪ್ರಕಾರ ಅವರನ್ನು ವೇದಿಕೆಗೆ ಕರೆದು ಹಾರತುರಾಯಿ, ಒಣಭಾಷಣ. ಸಮ್ಮೇಳನಕ್ಕೆ ಅವರ ಕೊಡುಗೆ ಏನಿದೆಯೋ ಗೊತ್ತಿಲ್ಲ ಆದರೂ ಇಂಥವರಿಗೆ ಡೊಗ್ಗುಸಮಾಮು ಹಾಕುತ್ತಾರೆ ಎಂದು ಪ್ರೇಕ್ಷಕರ ಗೊಣಗಾಟ.

'ಅಕ್ಕ'ದ 7ನೇ ಸಮ್ಮೇಳನ ಅಟ್ಲಾಂಟದಲ್ಲಿ ಎಂದು ಸುಮಾರು ಒಂದೂವರೆ ವರ್ಷದ ಹಿಂದೆ ನಿರ್ಧಾರವಾದಾಗಿಂದ ಭಾನುವಾರ ಸಂಜೆ ಈ ಸಮ್ಮೇಳನವು ಯಶಸ್ವಿಯಾಗಿ ಸಮಾಪನಗೊಳ್ಳುವ ಕ್ಷಣದವರೆಗೂ ಇದು ನಮ್ಮ ಮನೆಯ ಸಮಾರಂಭ ಎನ್ನುವಷ್ಟು 'ಹಚ್ಚಿಕೊಂಡು'ಸಮ್ಮೇಳನವನ್ನು ನಿರ್ವಹಿಸಿದ ಮುಖ್ಯ ಸಂಚಾಲಕ, ಅಟ್ಲಾಂಟದ ಹಿರೀಕ ಡಾ. ರಾಮಸ್ವಾಮಿ ದಂಪತಿಯ ಮುಖದಲ್ಲಿ ಧನ್ಯತೆ ತುಂಬಿತುಳುಕುತ್ತಿತ್ತು. ಸಮಾರೋಪ ಸಮಾರಂಭದಲ್ಲಿ ವೇದಿಕೆಯ ಮೇಲಿಂದಲೇ ಅಷ್ಟುದೊಡ್ಡ ಸಭೆಗೆ ಸಾಷ್ಟಾಂಗ ನಮಸ್ಕಾರ ಮಾಡಿದ ರಾಮಸ್ವಾಮಿಯವರ ಆ ಜೆಸ್ಚರ್‌‍ನಲ್ಲಿದ್ದದ್ದು ಆ ಸಾರ್ಥಕ ಭಾವವೇ ಹೊರತು ಸೋಗಿನ ವೇಷವಲ್ಲ. ಕನ್ನಡಮಾತೆ ಭುವನೇಶ್ವರಿ ಆ ಹಿರಿಜೀವಗಳನ್ನು ಚಿರಕಾಲ ಸುಖಶಾಂತಿಯಿಂದಿಟ್ಟಿರಲಿ ಎಂದು ಸಮ್ಮೇಳನಾರ್ಥಿಗಳೆಲ್ಲರ ಒಮ್ಮತದ ಹಾರೈಕೆ.

ಆಯ್ತು, 'ಅಕ್ಕ'ದ ಏಳನೇ ಸಮ್ಮೇಳನ ಅಟ್ಲಾಂಟದಲ್ಲಿ ಸುಫಲಸಂಪೂರ್ಣವಾಯ್ತು. ಸಮ್ಮೇಳನಕ್ಕೆಂದು ದೂರದ ಊರುಗಳಿಂದ ಬಂದಿದ್ದವರೆಲ್ಲ ಸೋಮವಾರ ಬೆಳಿಗ್ಗೆ ಹೊಟೆಲ್ ರೂಮ್ ಚೆಕ್‌ಔಟ್ ಮಾಡಿ ಏರ್‌‍ಪೋರ್ಟ್‌ನತ್ತ ಸಾಗಿದರು, ಸಮ್ಮೇಳನದ ಸಿಹಿಸಿಹಿ ನೆನಪುಗಳನ್ನು ಮನತುಂಬ ತುಂಬಿಸಿಕೊಂಡು. ಇನ್ನು ಎಂಟನೆಯ ಸಮ್ಮೇಳನ ಎಲ್ಲಿ? ಈ ಪ್ರಶ್ನೆಗೆ ಉತ್ತರ ತಿಳಿಯಲು ಕಾದುನೋಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+