ಟಿಎನ್ ಸೀತಾರಾಮ್ ಜೊತೆ ಮುಕ್ತಮುಕ್ತ ಸಂವಾದ
ಭಾನುವಾರ ಸಂಜೆ 'ಮಾಧ್ಯಮ ಮಂಥನ' ಎಂಬೊಂದು ಗೋಷ್ಠಿಯೂ ಇತ್ತು. ಸಮ್ಮೇಳನದ ವಿಶೇಷ ಅತಿಥಿಯಾಗಿ ಬಂದಿರುವ ಪ್ರಜಾವಾಣಿಯ ಹಿರಿಯ ಸಂಪಾದಕ ಪದ್ಮರಾಜ ದಂಡಾವತಿ ಅವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ. ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರೆದ ಅನುಭವವಿರುವ ಡುಂಡಿರಾಜ್ ಅವರನ್ನೂ ಗೋಷ್ಠಿಯಲ್ಲಿ ಸೇರಿಸಲಾಗಿತ್ತು. ಭಾಗವಹಿಸಿದ್ದವರ ಸಂಖ್ಯೆ ಹೆಚ್ಚಿಲ್ಲದಿದ್ದರೂ ಆಸಕ್ತ ಪ್ರೇಕ್ಷಕರು ಒಳ್ಳೊಳ್ಳೆಯ ಪ್ರಶ್ನೆಗಳನ್ನು ಕೇಳುವುದರ ಮೂಲಕ ಗೋಷ್ಠಿ ಯಶಸ್ವಿಯಾಯಿತು. "ಈಗಿನ ಮಾಧ್ಯಮಗಳು ಜನಪರವಾಗಿವೆಯೇ ಅಥವಾ ಜನಹಿತವನ್ನು ನಿರ್ಲಕ್ಷಿಸುತ್ತಿವೆಯೇ?" ಎನ್ನುವ ಪ್ರಶ್ನೆಗೆ ಪದ್ಮರಾಜ ದಂಡಾವತಿಯವರು "ಮಾಧ್ಯಮಗಳು ಎಂದಿಗೂ ಜನವಿರೋಧಿಯಾಗಿರುವುದಿಲ್ಲ, ಜನರ ಧ್ವನಿಯಾಗಿಯೇ ಇರುತ್ತವೆ" ಎಂಬ ಉತ್ತರ ನೀಡಿದರೂ ಪ್ರೇಕ್ಷಕರು ಅದನ್ನು ಹಾಗೆಯೇ ಸ್ವೀಕರಿಸಲಿಕ್ಕೆ ಸಿದ್ಧರಿರಲಿಲ್ಲ. ಜನವಿರೋಧಿಯಾಗಿಲ್ಲ ಎಂದಮಾತ್ರಕ್ಕೇ ಜನಪರವಾಗಿವೆ ಎಂದು ಅರ್ಥಮಾಡಿಕೊಳ್ಳುವಂತಿಲ್ಲ ಎಂದು ಪ್ರೇಕ್ಷಕರ ಅಭಿಮತ. ಚಂದ್ರಶೇಖರ ಕಂಬಾರ, ಟಿ.ಎನ್.ಸೀತಾರಾಮ್ ಸಹ ಪ್ರೇಕ್ಷಕರಾಗಿ ಭಾಗವಹಿಸಿದ್ದ ಗೋಷ್ಠಿಯ ಒಂದುಗಂಟೆ ಸಮಯ ಅರ್ಥಪೂರ್ಣವೆನಿಸಿತು.
ಕಾವ್ಯಬಾಗಿನ : ಈ ಸಲದ ಅಕ್ಕ ಸಮ್ಮೇಳನದಲ್ಲಿ ಪ್ರಸ್ತುತಗೊಂಡ ಒಂದು ಹೊಸ ಪ್ರಯೋಗ. ಶ್ರೀನಿವಾಸ ಕಪ್ಪಣ್ಣ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಮತ್ತೊಂದು ಸುಂದರ ಕಾರ್ಯಕ್ರಮ. ಕನ್ನಡದ ಪ್ರಖ್ಯಾತ ಕವಿಗಳ ರಚನೆಗಳು, ಜನಪದ ಗೀತೆಗಳು ಮತ್ತೊಂದು ರಂಗಗೀತೆ- ಹೀಗೆ ಆರು ವಿವಿಧ ಹಾಡುಗಳಿಗೆ ಬೆಂಗಳೂರಿನಲ್ಲಿ ಖ್ಯಾತ ಕೊರಿಯೋಗ್ರಫರ್ ಮಾಯಾ ರಾವ್ ಅವರಿಂದ ನೃತ್ಯ ಸಂಯೋಜಿಸಿ, ಅದರ ವಿಡಿಯೋಗಳನ್ನು ಅಮೆರಿಕದ ಆರು ಬೇರೆಬೇರೆ ಸಂಸ್ಥಾನಗಳ ಕನ್ನಡಕೂಟಗಳಿಗೆ ಕಳಿಸಿ ಅಮೆರಿಕನ್ನಡಿಗರಿಂದ ನೃತ್ಯ ಮಾಡಿಸಿದ ವಿನೂತನ ಕಾರ್ಯಕ್ರಮ. ಭಾನುವಾರ ರಾತ್ರಿ ಪ್ರೈಮ್ಟೈಮ್ ಮನರಂಜನೆಯಲ್ಲಿ ಅದು ಚೆನ್ನಾಗಿ ಮೂಡಿಬಂತು.
ಭಾನುವಾರ ಪ್ರೈಮ್ಟೈಮ್ ಮನರಂಜನೆಯಲ್ಲಿ ಕೆಲವೊಂದು ಐಟಮ್ಗಳು ತೀರಾ ಉದ್ದವಾಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಾಯ್ತು. ಅಟ್ಲಾಂಟದ ಸ್ಥಳೀಯ ಕನ್ನಡಿಗರು ಏರ್ಪಡಿಸಿದ್ದ 'ಶೃಂಗಾರ ಫ್ಯಾಶನ್ ಶೋ'ಅಂತೊಂದು ಕಾರ್ಯಕ್ರಮದಲ್ಲಿ ಫೂಟ್ ಟ್ಯಾಪಿಂಗ್ ಸಂಗೀತಕ್ಕೆ ಥಳಕು ಬಳುಕಿನ ರೂಪದರ್ಶಿಗಳ ವೈಯಾರದ ನಡಿಗೆ, ಅದೇನೋ ಚೆನ್ನಾಗಿಯೇ ಇತ್ತು, ಆದರೆ ಕನ್ನಡದಲ್ಲೊಮ್ಮೆ, ಇಂಗ್ಲಿಷ್ನಲ್ಲೊಮ್ಮೆ ಎರಡೆರಡು ಬಾರಿ ನಿರೂಪಣೆ, ಫ್ಯಾಷನ್ ಶೋದಲ್ಲಿ ಭಾಗವಹಿಸಿದವರಿಗಿಂತಲೂ ಆ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಸಮಿತಿಯ ಸದಸ್ಯರ ಪರಿಚಯ ವಿವರಗಳನ್ನೇ ನಿರೂಪಕರು ಪ್ಯಾರಗ್ರಾಫ್ಗಟ್ಟಲೆ ಎರಡು ಭಾಷೆಗಳಲ್ಲಿ ಎರಡೆರಡು ಸಲ ಓದತೊಡಗಿದಾಗ "ಸಾಕಪ್ಪಾ ಸಾಕು, ಮುಂದಿನ ಕಾರ್ಯಕ್ರಮ ಶುರು ಮಾಡಿ' ಎಂದು ಸಭೆಯಿಂದ ಒಕ್ಕೊರಲ ದನಿ. ಕೊನೆಗೂ ಅದನ್ನು ಮೊಟಕುಗೊಳಿಸಿ ಮುಂದಿನ ಕಾರ್ಯಕ್ರಮ ಆರಂಭವಾಯಿತು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್













Click it and Unblock the Notifications