ಅಕ್ಕ ತಾರಾಮೇಳಕ್ಕೆ ಚಿತ್ರ ಕಲಾವಿದರ ಹಿಂಡು

ಗಾಂಧೀನಗರದಿಂದ ಅಮೆರಿಕಾ ಕನ್ನಡಿಗರ ಸಮ್ಮಿಲನಕ್ಕೆ ತೆರಳುತ್ತಿರುವ ಈ 27 ಕನ್ನಡ ಚಿತ್ರ ಕರ್ಮಿಗಳು ತಮ್ಮ ಸ್ವಂತ ಖರ್ಚುವೆಚ್ಚದಲ್ಲೇ ಭಾಗವಹಿಸಲು ಮುಂದಾಗಿರುವುದು ಗಮನಾರ್ಹ ಸಂಗತಿ ಎಂದು ಅಕ್ಕ ಟ್ರಸ್ಟಿ ಅಮರ್ ನಾಥ್ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ಹೊರಗೆಡವಿದ ಅವರು, ಭರ್ಜರಿ ತಾರಾ ಮೇಳದಲ್ಲಿ ನಟ ನಟಿಯರಿಂದ ನೃತ್ಯದ ಜತೆಗೆ ಹಾಡುಗಳು ಇರುತ್ತವೆ ಎಂದರು. ಅಕ್ಕ ಸಮ್ಮೇಳನದ ಬ್ರಾಂಡ್ ಅಂಬಾಸಡರ್ ಆಗಿರುವ ಪುನೀತ್ ರಾಜ್ ಕುಮಾರ್, ವಿಜಯ ರಾಘವೇಂದ್ರ, ರಮ್ಯಾ, ಐಂದ್ರಿತಾ ರೇ, ಅಂಬರೀಷ್, ಜಗ್ಗೇಶ್, ಕೋಮಲ್, ಬಿ ಸರೋಜಾದೇವಿ, ರಘು ದೀಕ್ಷಿತ್ ಸೇರಿದಂತೆ ಹಲವರು ಕಲಾವಿದರು ತಾರಾ ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಅಂದು ರಾತ್ರಿ 2 ಗಂಟೆ ತನಕ ಸಾಗುತ್ತದೆ ಎಂದು ಗೌಡರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಟ ವಿಜಯ ರಾಘವೇಂದ್ರ ಹಾಗೂ ಚಿತ್ರನಟಿ ಐಂದ್ರಿತಾ ರೇ ಉಪಸ್ಥಿತರಿದ್ದರು. ವಿಜಯ ರಾಘವೇಂದ್ರ ಮಾತನಾಡುತ್ತಾ, ಭರ್ಜರಿ ತಾರಾ ಮೇಳದ ಮನರಂಜನೆ ಕಾರ್ಯಕ್ರಮಕ್ಕೆ ತಾವು ಈಗಾಗಲೆ ರೂಪರೇಷೆಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದೇನೆ ಎಂದರು. ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಮಾತನಾಡುತ್ತಾ, "ಇದೇ ಪ್ರಥಮ ಬಾರಿಗೆ ಅಮೆರಿಕಾಗೆ ಹೋಗುತ್ತಿದ್ದೇನೆ. ನನ್ನ ಬಳಿ ಆರು ತಿಂಗಳ ಕಾಲವಧಿಯ ವೀಸಾ ಇದೆ. ಅಮೆರಿಕಾದಲ್ಲಿ ಡ್ಯಾನ್ಸ್ ಮಾಡುತ್ತೇನೆ" ಎಂದರು. ತಾರಾಮೇಳವಲ್ಲದೆ ಮೂರು ದಿನಗಳ ಕಾರ್ಯಕ್ರಮಗಳನ್ನು ಜೀ ಕನ್ನಡ ವಾಹಿನಿ ಇಡಿಯಾಗಿ ಸೆರೆಹಿಡಿಯಲಿದ್ದು ಅದನ್ನು ತನ್ನ ವಾಹಿನಿಯಲ್ಲಿ ಸಮ್ಮೇಳನದ ನಂತರ ಪ್ರಸಾರ ಮಾಡಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಕ್ಕ ನಿರ್ದೇಶಕ ಹಳೇಕೋಟೆ ವಿಶ್ವಾಮಿತ್ರ, ಅಕ್ಕ ಜಂಟಿ ಕಾರ್ಯದರ್ಶಿ ಯಮುನಾ, ಸಮ್ಮೇಳನದ ಅತಿಥಿ ಸತ್ಕಾರ ಸಮಿತಿಯ ಮುಂದಾಳು ಶರತ್ ಭಂಡಾರಿ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ವ್ಯವಸ್ಥಾಪಕ ಹರೀಶ್ ನಾಯ್ಡು ಹಾಗೂ ಅಕ್ಕ ಭಾರತೀಯ ಸಂಯೋಜನಾಧಿಕಾರಿ ಲಕ್ಷ್ಮೀನಾರಾಯಣ್ ,ಈ ಸಂಜೆ ನಾಗರಾಜ್, ರಾಘವೇಂದ್ರ ರಾಜು, ನಾಗರಾಜ ರೆಡ್ಡಿ, ವೈ.ಕೆ.ಮುದ್ದುಕೃಷ್ಣ, ಲಹರಿ ವೇಲು ಮುಂತಾದವರು ಉಪಸ್ಥಿತರಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications