ಸಮ್ಮೇಳನದ ಭಾರ ಹೊತ್ತ ಐದರ ಪೋರ

ಈ ಬಾರಿ ಟ್ರೈ ಸ್ಟೇಟ್ಸ್ ತ್ರಿವೇಣಿ ಕನ್ನಡ ಸಂಘದಲ್ಲಿ ನಾಟಕ ಇದೆ, ಅದರ ಮುಂದಿನ ವಾರ ಹೊಯ್ಸಳ ಸಂಘದಲ್ಲಿ ಭಾರತದ ಬಂದಿರುವ ಗಾಯಕಿಯ ಭರ್ಜರಿ ಹಾಡುಗಾರಿಕೆ ಇದೆಯಂತೆ, ಅಲ್ಲಿಗೆ ಹೋಗಬೇಕು. ಡಿಸೆಂಬರ್ ನಲ್ಲಿ ನ್ಯೂಯಾರ್ಕಿನಲ್ಲಿ ಕನ್ನಡ ಮಕ್ಕಳ ನಾಟಕಕ್ಕೆ ಹೋಗಲೇಬೇಕು.. ಹೀಗೆ, ಕನ್ನಡತನವನ್ನು ಹುಡುಕಿಕೊಂಡು ನಿತ್ಯ ಸುತ್ತಾಡುತ್ತಿರಬೇಕು. ಇದು ಹತ್ತಾರು ವರಷಗಳಿಂದ ನಡೆದುಬಂದ ಪರಿಪಾಠ. ಆದರೆ, ಎಷ್ಟು ದಿನ ಅಂತ ಅಲ್ಲಿ ಇಲ್ಲಿ ಹೋಗಿಬಂದು ಮಾಡುವುದಕ್ಕೆ ಸಾಧ್ಯ. ನಾವೇ ಒಂದು ಕನ್ನಡ ಸಂಘ ಕಟ್ಟಿದರೆ ಆಯ್ತು, ಅದೇನು ಮಹಾ, ಎಂದುಕೊಂಡರು ಅವರು.
ಒಂದು ದಿನ ಮನೆಗೆ ಹುಡುಗ ಹಾಲು ತರದಿದ್ದರೆ, ಅದಕ್ಕೇನಂತೆ ನಾವೇ ಒಂದು ಡೈರಿ ಶುರುಮಾಡೋಣ ಎನ್ನುವಂತಹವರು ಅಲ್ಲಿದ್ದರು. ಅವರಿಗೆಲ್ಲ ಪ್ರಸನ್ನಕುಮಾರ್ ಎಂಬ ಮಧ್ಯವಯಸ್ಕನೇ ನಾಯಕ. ಸರಿ, ಆಗಷ್ಟೇ ಫ್ಲಾರಿಡಾ ಅಕ್ಕ ಸಮ್ಮೇಳನ (2004) ಮುಗಿದು ಎಲ್ಲರೂ ನ್ಯೂ ಜೆರ್ಸಿಗೆ ವಾಪಸ್ಸಾಗಿದ್ದರು. ಕನ್ನಡದ ಪರಿಮಳ ಇನ್ನೂ ಹಸಿಹಸಿಯಾಗಿ ನವುರಾಗಿತ್ತು. ಒಂದು ಸಂಜೆ ಎಲ್ಲರೂ ಕುಳಿತು ಸಭೆ ಮಾಡಿ ಕನ್ನಡ ಸಂಘ ಕಟ್ಟಿಬಿಡುವ ನಿರ್ಧಾರಕ್ಕೆ ಬಂದರು. ಅಲ್ಲಿ ಒಂದು ಬೃಂದಾವನವೇ ನಿರ್ಮಾಣವಾಯಿತು. ನ್ಯೂ ಜೆರ್ಸಿ ಕನ್ನಡಿಗರ ನಂದಗೋಕುಲದಂತಿರುವ ಬೃಂದಾವನಕ್ಕೆ ಮೊನ್ನೆ ಡಿಸೆಂಬರ್ 5ಕ್ಕೆ ಐದು ವರ್ಷ ತುಂಬಿ ಆರಕ್ಕೆ ಬಿತ್ತು.
ಕರ್ನಾಟಕದ ಶಾಲೆಗಳ ಲೆಕ್ಕದಲ್ಲಿ ಬೃಂದಾವನ ನರ್ಸರಿಗೆ ಹೋಗುವ ಬಾಲಕ. ಐದು ವರ್ಷ ಎಂಟು ತಿಂಗಳು ತುಂಬದೆ ಒಂದನೆ ತರಗತಿಗೆ ಸೇರುವಂತಿಲ್ಲ. ಆದರೆ ಇದೊಂದು ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಬಾಲಕನನ್ನು ಪದವಿ ಪರೀಕ್ಷೆಗೆ ಒಡ್ಡಲಾಗಿದೆ. ಅಮೆರಿಕಾದ ಅತ್ಯಂತ ಕಿರಿಯ ಕನ್ನಡ ಸಂಘ ಬೃಂದಾವನ ಬೃಹತ್ ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಭಾರ ಹೊತ್ತು ನಿಲ್ಲುತ್ತಿದೆ. ಈ ಸಮ್ಮೇಳನಕ್ಕೆ ಐದರ ಪೋರನಾಗಿದ್ದಾಗಲೇ ಪವರ್ಫುಲ್ ನಟನೆಯಿಂದ ಸ್ಟಾರ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಬೃಂದಾವನ ಸಂಘ ಮಾಜಿ ಅಧ್ಯಕ್ಷ ಮತ್ತು ಅಕ್ಕ ಸಮ್ಮೇಳನದ ಸಂಯೋಜಕ ತ್ರಿವಳಿಗಳಲ್ಲಿ ಒಬ್ಬರಾಗಿರುವ ಪ್ರಸನ್ನ ಕುಮಾರ್ ಅವರನ್ನು ನಾನು ಮೊನ್ನೆ ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶಕ್ಕಾಗಿ, ನೋಡುತ್ತಿರಿ ದಟ್ಸ್ ಕನ್ನಡ ಎನ್ಆರ್ಐ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications