ಅಕ್ಕ ಸಮ್ಮೇಳನಕ್ಕೆ ನೊಂದಣಿ ದಿನಾಂಕ ವಿಸ್ತರಣೆ

ಅಕ್ಕ ಟ್ರಸ್ಟೀ ಅಮರನಾಥ್ ಗೌಡ ಮತ್ತು ಸಮ್ಮೇಳನ ಕಾರ್ಯಕಾರಿ ಸಮಿತಿಯ ಸಂಚಾಲಕ ಪ್ರಸನ್ನ ಕುಮಾರ್ ಈ ವಿಷಯವನ್ನು ಗುರುವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು. ಸಮ್ಮೇಳನದಲ್ಲಿ ಭಾಗವಹಿಸಲು ಇಷ್ಟಪಡುವ ಕನ್ನಡಿಗರು ಈ ವಿಸ್ತರಣೆ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ಕಡೆಯ ದಿನಾಂಕ ಭಾನುವಾರ 11 ಜುಲೈ, ಕಡೆಯ ಕ್ಷಣ ಅದೇ ದಿನ ಮಧ್ಯರಾತ್ರಿ 12 ಗಂಟೆ.(PST)
ದಿನಾಂಕ ವಿಸ್ತರಣೆಗೆ ಎರಡು ಕಾರಣಗಳಿವೆ. ಮುಂಚೆ ಪ್ರಕಟಿಸಲಾಗಿದ್ದ ಜೂನ್ 30 ಬುಧವಾರ ಬೀಳುತ್ತದೆ. ಅದು ಬಿಡುವಿಲ್ಲದ ಕೆಲಸಗಳ ವಾರದ ನಡುವಿನ ಬಿಗುವಿನದಿನ. ಸಾಮಾನ್ಯವಾಗಿ ಅಮೆರಿಕನ್ನಡಿಗರು ಇಂಟರ್ನೆಟ್ ಅನ್ನು ಖಾಸಗಿ ಉದ್ದೇಶಗಳಿಗಾಗಿ ಪುರುಸೊತ್ತಾಗಿ ಬಳಸುವ ಸಮಯ ವಾರಾಂತ್ಯದ ದಿನಗಳಾಗಿರುತ್ತವೆ. ದಿನಾಂಕ ವಿಸ್ತರಣೆ ಸೌಲಭ್ಯದಿಂದಾಗಿ ಜುಲೈ 3-4 ಹಾಗೂ ಜುಲೈ 10-11 ಶನಿವಾರ ಭಾನುವಾರಗಳ ಎರಡು ಹೆಚ್ಚುವರಿ ವಾರಾಂತ್ಯ ಸಮಯಾನುಕಾಲವನ್ನು ಪ್ರತಿನಿಧಿಗಳಿಗೆ ಕಲ್ಪಿಸುವುದು ಸಮ್ಮೇಳನ ಸಮಿತಿಯ ಉದ್ದಿಶ್ಯ.
ಎರಡನೇ ಕಾರಣವೆಂದರೆ ಜುಲೈ 4ರ ದೀರ್ಘ ವಾರಾಂತ್ಯ ಬಂತೆಂದರೆ ಅಮೆರಿಕ ಕನ್ನಡಿಗರ ವಲಯಗಳಿಗೆ ಒಂದು ರೀತಿ ಜಾತ್ರೆಯ ಸೀಸನ್. ಅಮೆರಿಕೆಯಲ್ಲಿ ನೆಲೆಸಿರುವ ಕನ್ನಡ ಜನಾಂಗದ ನಾನಾ ಗುಂಪುಗಳು ತಮ್ಮ ತಮ್ಮ ಗುಂಪುಗಳ ಸಮ್ಮೇಳನ ಮತ್ತು ಅವರವರ ಅಭಿರುಚಿಗೆ ತಕ್ಕುದಾದ ಸಾಂಸೃತಿಕ ಸಮಾವೇಶಗಳನ್ನು ಹಮ್ಮಿಕೊಳ್ಳುವುದಕ್ಕೆ ಸೂಕ್ತ ಸಮಯ. ಶಾಲೆಗಳಿಗೆ ರಜೆ, ಹವಾಮಾನ ವೈಪರೀತ್ಯಗಳ ಹಾವಳಿ ಇರುವುದಿಲ್ಲ. ಹಾಗಾಗಿ ಎಲ್ಲರೂ ಒಂದಿಲ್ಲೊಂದು ಸಮಾವೇಶದಲ್ಲಿ ಮಗ್ನರಾಗಿರುವಾಗ ಅಕ್ಕ ಸಮ್ಮೇಳನಕ್ಕೆ ನೊಂದಾವಣೆ ಮಾಡಿಕೊಳ್ಳುವುದಕ್ಕೆ ಸಮಯ ಸಾಲದೇ ಹೋಗಬಹುದು.
ಈ ಜುಲೈನಲ್ಲಿ ವೀರಶೈವ ಸೊಸೈಟಿ (VSNA), ಉತ್ತರ ಅಮೆರಿಕ ಸಂಕೇತಿ ಅಸೋಸಿಯೇಷನ್ (NASA), ಬಂಟರ ಸಂಘ (BANA), ಒಕ್ಕಲಿಗರ ಪರಿಷತ್ (VPA), ಮಾಧ್ವ ಜನಾಂಗದವರ ಮೆಟ್ಲು ಪೂಜೆ ಮುಂತಾದ ಹಲಕೆಲವು ಬಗೆಯ ಕಾರ್ಯಕ್ರಮಗಳು ಸಜ್ಜಾಗಿದ್ದು ಬಹುತೇಕ ಕನ್ನಡಿಗರು ಆಯಾ ಮೇಳಗಳಲ್ಲಿ ತೊಡಗಿಕೊಂಡಿರುತ್ತಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಅಕ್ಕ ಸಮ್ಮೇಳನ ನೊಂದಾವಣೆ ದಿನಾಂಕ ವಿಸ್ತರಿಸುವುದು ಸಮಂಜಸ ಎಂದು ನಿರ್ಧರಿಸಲಾಗಿದೆ ಎಂದು ಅಮರ್ ನಾಥ್ ಗೌಡ ಮತ್ತು ಪ್ರಸನ್ನ ಕುಮಾರ್ ವಿವರಿಸಿದರು.
ಜುಲೈ 11ರವರೆಗೆ ನೊಂದಾವಣೆ ಶುಲ್ಕ 175 ಡಾಲರು, ಆನಂತರ ಆಗಸ್ಟ್ 31ರವರೆಗಿನ ಶುಲ್ಕ 200 ಡಾಲರುಗಳು ಆಗಿರುತ್ತವೆ. ಆಗಸ್ಟ್ 31ರ ಮಂಗಳವಾರದ ನಂತರ, ಕೊನೆ ಕ್ಷಣದಲ್ಲಿ ಸಮ್ಮೇಳನಕ್ಕೆ ಏಕಾಏಕಿ ಬರಲು ಬಯಸುವವರಿಗೆ ಸಮ್ಮೇಳನ ಸಭಾಂಗಣದಲ್ಲಿ ಸ್ಥಳ ನೊಂದಾವಣೆ ಅಂದರೆ spot registration ಅವಕಾಶ ಇದೆ. ಆದರೆ ಅದರ ಬೆಲೆ 225 ಡಾಲರುಗಳಾಗಿರುತ್ತವೆ ಎಂದು ಪ್ರಸನ್ನ ಹೇಳಿದರು.
ಹೆಸರು ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications