ಅಕ್ಕ ಸಮ್ಮೇಳನಕ್ಕೆ ನೊಂದಣಿ ದಿನಾಂಕ ವಿಸ್ತರಣೆ

ಅಕ್ಕ ಟ್ರಸ್ಟೀ ಅಮರನಾಥ್ ಗೌಡ ಮತ್ತು ಸಮ್ಮೇಳನ ಕಾರ್ಯಕಾರಿ ಸಮಿತಿಯ ಸಂಚಾಲಕ ಪ್ರಸನ್ನ ಕುಮಾರ್ ಈ ವಿಷಯವನ್ನು ಗುರುವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು. ಸಮ್ಮೇಳನದಲ್ಲಿ ಭಾಗವಹಿಸಲು ಇಷ್ಟಪಡುವ ಕನ್ನಡಿಗರು ಈ ವಿಸ್ತರಣೆ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ಕಡೆಯ ದಿನಾಂಕ ಭಾನುವಾರ 11 ಜುಲೈ, ಕಡೆಯ ಕ್ಷಣ ಅದೇ ದಿನ ಮಧ್ಯರಾತ್ರಿ 12 ಗಂಟೆ.(PST)
ದಿನಾಂಕ ವಿಸ್ತರಣೆಗೆ ಎರಡು ಕಾರಣಗಳಿವೆ. ಮುಂಚೆ ಪ್ರಕಟಿಸಲಾಗಿದ್ದ ಜೂನ್ 30 ಬುಧವಾರ ಬೀಳುತ್ತದೆ. ಅದು ಬಿಡುವಿಲ್ಲದ ಕೆಲಸಗಳ ವಾರದ ನಡುವಿನ ಬಿಗುವಿನದಿನ. ಸಾಮಾನ್ಯವಾಗಿ ಅಮೆರಿಕನ್ನಡಿಗರು ಇಂಟರ್ನೆಟ್ ಅನ್ನು ಖಾಸಗಿ ಉದ್ದೇಶಗಳಿಗಾಗಿ ಪುರುಸೊತ್ತಾಗಿ ಬಳಸುವ ಸಮಯ ವಾರಾಂತ್ಯದ ದಿನಗಳಾಗಿರುತ್ತವೆ. ದಿನಾಂಕ ವಿಸ್ತರಣೆ ಸೌಲಭ್ಯದಿಂದಾಗಿ ಜುಲೈ 3-4 ಹಾಗೂ ಜುಲೈ 10-11 ಶನಿವಾರ ಭಾನುವಾರಗಳ ಎರಡು ಹೆಚ್ಚುವರಿ ವಾರಾಂತ್ಯ ಸಮಯಾನುಕಾಲವನ್ನು ಪ್ರತಿನಿಧಿಗಳಿಗೆ ಕಲ್ಪಿಸುವುದು ಸಮ್ಮೇಳನ ಸಮಿತಿಯ ಉದ್ದಿಶ್ಯ.
ಎರಡನೇ ಕಾರಣವೆಂದರೆ ಜುಲೈ 4ರ ದೀರ್ಘ ವಾರಾಂತ್ಯ ಬಂತೆಂದರೆ ಅಮೆರಿಕ ಕನ್ನಡಿಗರ ವಲಯಗಳಿಗೆ ಒಂದು ರೀತಿ ಜಾತ್ರೆಯ ಸೀಸನ್. ಅಮೆರಿಕೆಯಲ್ಲಿ ನೆಲೆಸಿರುವ ಕನ್ನಡ ಜನಾಂಗದ ನಾನಾ ಗುಂಪುಗಳು ತಮ್ಮ ತಮ್ಮ ಗುಂಪುಗಳ ಸಮ್ಮೇಳನ ಮತ್ತು ಅವರವರ ಅಭಿರುಚಿಗೆ ತಕ್ಕುದಾದ ಸಾಂಸೃತಿಕ ಸಮಾವೇಶಗಳನ್ನು ಹಮ್ಮಿಕೊಳ್ಳುವುದಕ್ಕೆ ಸೂಕ್ತ ಸಮಯ. ಶಾಲೆಗಳಿಗೆ ರಜೆ, ಹವಾಮಾನ ವೈಪರೀತ್ಯಗಳ ಹಾವಳಿ ಇರುವುದಿಲ್ಲ. ಹಾಗಾಗಿ ಎಲ್ಲರೂ ಒಂದಿಲ್ಲೊಂದು ಸಮಾವೇಶದಲ್ಲಿ ಮಗ್ನರಾಗಿರುವಾಗ ಅಕ್ಕ ಸಮ್ಮೇಳನಕ್ಕೆ ನೊಂದಾವಣೆ ಮಾಡಿಕೊಳ್ಳುವುದಕ್ಕೆ ಸಮಯ ಸಾಲದೇ ಹೋಗಬಹುದು.
ಈ ಜುಲೈನಲ್ಲಿ ವೀರಶೈವ ಸೊಸೈಟಿ (VSNA), ಉತ್ತರ ಅಮೆರಿಕ ಸಂಕೇತಿ ಅಸೋಸಿಯೇಷನ್ (NASA), ಬಂಟರ ಸಂಘ (BANA), ಒಕ್ಕಲಿಗರ ಪರಿಷತ್ (VPA), ಮಾಧ್ವ ಜನಾಂಗದವರ ಮೆಟ್ಲು ಪೂಜೆ ಮುಂತಾದ ಹಲಕೆಲವು ಬಗೆಯ ಕಾರ್ಯಕ್ರಮಗಳು ಸಜ್ಜಾಗಿದ್ದು ಬಹುತೇಕ ಕನ್ನಡಿಗರು ಆಯಾ ಮೇಳಗಳಲ್ಲಿ ತೊಡಗಿಕೊಂಡಿರುತ್ತಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಅಕ್ಕ ಸಮ್ಮೇಳನ ನೊಂದಾವಣೆ ದಿನಾಂಕ ವಿಸ್ತರಿಸುವುದು ಸಮಂಜಸ ಎಂದು ನಿರ್ಧರಿಸಲಾಗಿದೆ ಎಂದು ಅಮರ್ ನಾಥ್ ಗೌಡ ಮತ್ತು ಪ್ರಸನ್ನ ಕುಮಾರ್ ವಿವರಿಸಿದರು.
ಜುಲೈ 11ರವರೆಗೆ ನೊಂದಾವಣೆ ಶುಲ್ಕ 175 ಡಾಲರು, ಆನಂತರ ಆಗಸ್ಟ್ 31ರವರೆಗಿನ ಶುಲ್ಕ 200 ಡಾಲರುಗಳು ಆಗಿರುತ್ತವೆ. ಆಗಸ್ಟ್ 31ರ ಮಂಗಳವಾರದ ನಂತರ, ಕೊನೆ ಕ್ಷಣದಲ್ಲಿ ಸಮ್ಮೇಳನಕ್ಕೆ ಏಕಾಏಕಿ ಬರಲು ಬಯಸುವವರಿಗೆ ಸಮ್ಮೇಳನ ಸಭಾಂಗಣದಲ್ಲಿ ಸ್ಥಳ ನೊಂದಾವಣೆ ಅಂದರೆ spot registration ಅವಕಾಶ ಇದೆ. ಆದರೆ ಅದರ ಬೆಲೆ 225 ಡಾಲರುಗಳಾಗಿರುತ್ತವೆ ಎಂದು ಪ್ರಸನ್ನ ಹೇಳಿದರು.
ಹೆಸರು ನೊಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications