ಅಕ್ಕ ಸ್ಮರಣ ಸಂಚಿಕೆಗೆ ಬರಹ ಆಹ್ವಾನ

ನಿಮಗೆ ತಿಳಿದಿರುವಂತೆ 2010ನೇ ಇಸವಿಯ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ನಿರ್ವಹಣೆಗೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯು ನ್ಯೂ ಜೆರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟವನ್ನು ಆಯ್ಕೆಮಾಡಿದೆ. ಈ ಸಮ್ಮೇಳನವನ್ನು ಎಡಿಸನ್, ನ್ಯೂ ಜೆರ್ಸಿಯಲ್ಲಿರುವ ರಾರಿಟನ್ ಸೆಂಟರರ್ನಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ಆಚರಿಸಲು ಏರ್ಪಾಡುಮಾಡಿದೆ.
ಈ ಸಮ್ಮೇಳನದ ಸವಿನೆನಪಿಗೋಸ್ಕರ ಒಂದು ಸ್ಮರಣ ಸಂಚಿಕೆಯನ್ನು ಪ್ರಕಟಿಸಿ ಅದನ್ನು ಸಮ್ಮೇಳನಕ್ಕೆ ಬಂದವರಿಗೆಲ್ಲಾ ವಿತರಿಸಲಾಗುವುದು. ಗಣ್ಯ ಮಹನೀಯರ ಸಂದೇಶಗಳು, ಹೆಸರಾಂತ ಕವಿಗಳ ಮತ್ತು ಲೇಖಕರ ಕವನಗಳು, ಲೇಖನಗಳು, ಸಣ್ಣಕಥೆಗಳು, ಮತ್ತು ಮಕ್ಕಳ ಬರವಣಿಗೆಗಳನ್ನು ಈ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಅದಕ್ಕೋಸ್ಕರ ಅಕ್ಕ 2010 ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ ಸಮಿತಿ ಈ ಮೂಲಕ ನಿಮ್ಮ ಬರವಣಿಗೆಗಳಿಗೆ ಆಹ್ವಾನ ನೀಡುತ್ತಿದೆ.
ಅಕ್ಕ 2010 ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವ ಲೇಖನ, ಕವನ, ಕಥೆ, ಇತ್ಯಾದಿ ಬರಹಗಳನ್ನು ಆಯ್ಕೆ ಮಾಡುವಾಗ ಈ ಕೆಳಗಿನ ನಿಯಮಗಳು ಅನ್ವಯವಾಗುತ್ತವೆ:
* ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲು ಕಳುಹಿಸಿದ ಬರಹಗಳು ಬೇರೆಲ್ಲೂ ಪ್ರಕಟವಾಗಿರಬಾರದು.
* ಬರಹಗಳು 8ಪುಟಗಳಿಗಿಂತ ಹೆಚ್ಚಾಗಿರಬಾರದು (ಫಾಂಟ್ ಸೈಜ್: 12 (ಕನ್ನಡ), 11 (ಆಂಗ್ಲ), single line spaced) ಬರಹಗಳ ಗುಣಮಟ್ಟ ಹಾಗೂ ವಿಶಿಷ್ಟತೆಗಳಿಗೆ ಅನುಗುಣವಾಗಿ ಕೆಲವು ರಿಯಾಯಿತಿಗಳು ಅನ್ವಯವಾಗುತ್ತವೆ.
* ಕನ್ನಡ ಬರಹಗಳು “ಬರಹ“ದಲ್ಲಿರಬೇಕು, ಮತ್ತು ಆಂಗ್ಲ ಬರಹಗಳು “ಮೈಕ್ರೋಸಾಫ್ಟ್ ವರ್ಡ್“ನಲ್ಲಿರಬೇಕು.
* ಬರಹಗಳನ್ನು ಅಕ್ಕ 2010 ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಗೆಂದು ಆಯ್ಕೆಮಾಡುವಾಗ ಸ್ಮರಣ ಸಂಚಿಕೆ ಸಮಿತಿಯ ತೀರ್ಮಾನವೇ ಅಂತಿಮ.
* ನಿಮ್ಮ ಬರಹಗಳ ಜೊತೆಗೆ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ನಿಮ್ಮ ಬಗ್ಗೆ ಸಂಕ್ಷಿಪ್ತ ವಿವರಣೆ (ಮಕ್ಕಳ ಲೇಖನಗಳಾದರೆ ಅವರ ವಯಸ್ಸು) ಮತ್ತು ನಿಮ್ಮ ಛಾಯಾಚಿತ್ರವನ್ನು ಸೇರಿಸಿ ದಯವಿಟ್ಟು ಮಾರ್ಚ್ 31,2010 ರೊಳಗೆ [email protected] ಗೆ ಈ-ಮೈಲ್ ಮಾಡಿ.
ದಯವಿಟ್ಟು ಈ ಕೆಳಗಿನ ವಿವರಗಳನ್ನು ಗಮನಿಸಿ:
1) ಮಕ್ಕಳ ಲೇಖನಗಳು : ಸ್ಮರಣ ಸಂಚಿಕೆಗೆ ಕಳುಹಿಸಿಕೊಟ್ಟ ಮಕ್ಕಳ ಕೃತಿಗಳನ್ನು ಅವರ ವಯಸ್ಸಿನ ಪ್ರಕಾರ ಎರಡು ವಿಭಾಗ ಮಾಡಲಾಗುವುದು. ಅ) 12 ವರ್ಷ ಮತ್ತು ಅದಕ್ಕಿಂತ ಕಡಿಮೆ, ಆ) 13ರಿಂದ 18 ವರ್ಷದವರೆಗೆ. ಎರಡು ವಿಭಾಗದಿಂದಲೂ ತಲಾ 5 ಕೃತಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನಗಳನ್ನು ಕೊಡಲಾಗುವುದು.
2) ಮಕ್ಕಳ ಪೇಂಟಿಂಗ್ ಗಳು : ಈ ಬಾರಿ ಮಕ್ಕಳ ಪೇಂಟಿಂಗ್ ಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಇದಕ್ಕೆ ವಯಸ್ಸಿನ ವಿಭಾಗ ಮೇಲಿನಂತೆಯೇ ಇರುತ್ತದೆ. ಎರಡು ವಿಭಾಗದಿಂದಲೂ ತಲಾ 5 ಕೃತಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನಗಳನ್ನು ಕೊಡಲಾಗುವುದು
ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿ ನಿಮ್ಮ ಬರಹಗಳನ್ನು ಆದಷ್ಟು ಬೇಗ ಸ್ವೀಕರಿಸುವ ನಿರೀಕ್ಷೆಯಲ್ಲಿದೆ ಹಾಗೂ ತಾವೆಲ್ಲರೂ ಈ ಸಮ್ಮೇಳನಕ್ಕೆ ಆಗಮಿಸಿ ಈ ಸಮ್ಮೇಳನದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ನಿಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಮ್ಮೇಳನಕ್ಕೆ ಸಂಬಂಧಪಟ್ಟಂತಹ ಎಲ್ಲಾ ಮಾಹಿತಿಗಳಿಗೆ ಅಕ್ಕ ಅಂತರ್ಜಾಲ ತಾಣಕ್ಕೆ (www.akkaonline.org) ಭೇಟಿಕೊಡಿ. ವಂದನೆಗಳು.
ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಸ್ಮರಣ ಸಂಚಿಕೆ ಸಮಿತಿ : ಸತೀಶ್ ಹೊಸನಗರ, ಮೀರಾ ಪಿ. ಆರ್, ಲಕ್ಷ್ಮೀಶ್ ಸೀಗೇಹಳ್ಳಿ, ಅಶೋಕ್ ಕಟ್ಟೀಮನಿ, ದಾಶರಥಿ ಗಟ್ಟು, ಶೈಲಾ ಪಾಟಂಕರ್, ರುದ್ರ ಕುಮಾರ್.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications