ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಪೇಟಾ ಗತ್ತು, ಪೇಡ ಗಮ್ಮತ್ತು
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
‘‘ಜನರ ಅಪೇಕ್ಷೆ-ನಿರೀಕ್ಷೆಗಳಿಗಿಂತಲೂ ಮೀರಿ ಕನ್ನಡ-ಕರ್ನಾಟಕವನ್ನು ಸಮ್ಮೇಳನದಲ್ಲಿ ಮೇಳೈಸಬೇಕು...’’ ಎಂಬ ಆಶಯವಿರುತ್ತದೆ; ಕನ್ನಡಾಭಿಮಾನವೇ ಏಕೈಕಚಾಲನಾಶಕ್ತಿಯಾಗಿರುವ ಸಮ್ಮೇಳನದ ಆಯೋಜಕರಿಗೆ.
ಕನ್ನಡನಾಡಿನ ಆಚಾರ-ವಿಚಾರ, ಉಡುಗೆ-ಆಹಾರ ಗಳ ಪುನಃಸೃಷ್ಟಿ ಈ ಸಮ್ಮೇಳನದಲ್ಲಿ ಅನೇಕ ವಿಧಗಳಲ್ಲಿ ನಿಮಗೆ ಗೋಚರಿಸಲಿದೆ. ಉತ್ತರಕರ್ನಾಟಕವನ್ನು ಪ್ರತಿನಿಧಿಸುವ ಸವಿಯಾದ ಧಾರವಾಡ ಪೇಡಾ ಸಮ್ಮೇಳನಾರ್ಥಿಗಳಿಗೆ ಸಿಹಿ ಅನುಭವ ಕೊಟ್ಟರೆ ಅಲ್ಲಲ್ಲಿ ಬಹುಸಂಖ್ಯೆಯಲ್ಲಿ ಕಾಣಲಿರುವ ಕಚ್ಚೆ-ಪಂಚೆ-ಮೈಸೂರುಪೇಟಾಧಾರಿಗಳ ದೃಶ್ಯ ಕಣ್ಮನಗಳ ತಣಿಸಲಿದೆ. ರಾಶಿರಾಶಿ ಪೇಡಾ ಮತ್ತು ಪೇಟಾಗಳು ಸಮ್ಮೇಳನದ ವೇಳೆ ಪೂರೈಕೆಗಾಗಿ ಧಾರವಾಡ ಮತ್ತು ಮೈಸೂರಿನಿಂದ ರವಾನೆಯಾಗಿ ಬೆಂಗಳೂರಿಂದ ವಿಮಾನ ಹತ್ತಿವೆ.
ಅಂತೂ ಸುವರ್ಣ ಕರ್ನಾಟಕ ಮಾತ್ರವಲ್ಲ ಸಮಗ್ರ ಕರ್ನಾಟಕವೂ ಸಮ್ಮೇಳನದಲ್ಲಿ ಕಂಗೊಳಿಸಲಿದೆ.

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 10 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications