ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಚಿತ್ತಾರ - ಚುಟುಕು ವಿಚಾರ

By Staff
|
Google Oneindia Kannada News

ಚಿತ್ರ ಚಿತ್ತಾರ - ಚುಟುಕು ವಿಚಾರ
ಪೇಟಾ ಗತ್ತು, ಪೇಡ ಗಮ್ಮತ್ತು
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

‘‘ಕನ್ನಡ ಸಮ್ಮೇಳನವೆಂದ ಮೇಲೆ ಎಲ್ಲೆಲ್ಲೂ ಕನ್ನಡ/ಕರ್ನಾಟಕವೇ ಕಣ್ಣಿಗೆ ಬೀಳಬೇಕು...’’ ಎಂಬ ಆಶಯವಿರುತ್ತದೆ ಹೃದಯದಾಳದ ಕನ್ನಡಪ್ರೀತಿಯಿಂದ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ.

‘‘ಜನರ ಅಪೇಕ್ಷೆ-ನಿರೀಕ್ಷೆಗಳಿಗಿಂತಲೂ ಮೀರಿ ಕನ್ನಡ-ಕರ್ನಾಟಕವನ್ನು ಸಮ್ಮೇಳನದಲ್ಲಿ ಮೇಳೈಸಬೇಕು...’’ ಎಂಬ ಆಶಯವಿರುತ್ತದೆ; ಕನ್ನಡಾಭಿಮಾನವೇ ಏಕೈಕಚಾಲನಾಶಕ್ತಿಯಾಗಿರುವ ಸಮ್ಮೇಳನದ ಆಯೋಜಕರಿಗೆ.

ಕನ್ನಡನಾಡಿನ ಆಚಾರ-ವಿಚಾರ, ಉಡುಗೆ-ಆಹಾರ ಗಳ ಪುನಃಸೃಷ್ಟಿ ಈ ಸಮ್ಮೇಳನದಲ್ಲಿ ಅನೇಕ ವಿಧಗಳಲ್ಲಿ ನಿಮಗೆ ಗೋಚರಿಸಲಿದೆ. ಉತ್ತರಕರ್ನಾಟಕವನ್ನು ಪ್ರತಿನಿಧಿಸುವ ಸವಿಯಾದ ಧಾರವಾಡ ಪೇಡಾ ಸಮ್ಮೇಳನಾರ್ಥಿಗಳಿಗೆ ಸಿಹಿ ಅನುಭವ ಕೊಟ್ಟರೆ ಅಲ್ಲಲ್ಲಿ ಬಹುಸಂಖ್ಯೆಯಲ್ಲಿ ಕಾಣಲಿರುವ ಕಚ್ಚೆ-ಪಂಚೆ-ಮೈಸೂರುಪೇಟಾಧಾರಿಗಳ ದೃಶ್ಯ ಕಣ್ಮನಗಳ ತಣಿಸಲಿದೆ. ರಾಶಿರಾಶಿ ಪೇಡಾ ಮತ್ತು ಪೇಟಾಗಳು ಸಮ್ಮೇಳನದ ವೇಳೆ ಪೂರೈಕೆಗಾಗಿ ಧಾರವಾಡ ಮತ್ತು ಮೈಸೂರಿನಿಂದ ರವಾನೆಯಾಗಿ ಬೆಂಗಳೂರಿಂದ ವಿಮಾನ ಹತ್ತಿವೆ.

ಅಂತೂ ಸುವರ್ಣ ಕರ್ನಾಟಕ ಮಾತ್ರವಲ್ಲ ಸಮಗ್ರ ಕರ್ನಾಟಕವೂ ಸಮ್ಮೇಳನದಲ್ಲಿ ಕಂಗೊಳಿಸಲಿದೆ.

Dharwad Peda and Mysore Peta to grace WKC 2006

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected])

ಸಮ್ಮೇಳನದ ಕೌಂಟ್‌ಡೌನ್‌ ಆರಂಭ : ಇನ್ನು ಕೇವಲ 10 ದಿನ ಬಾಕಿ ಉಳಿದಿವೆ!!!


ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್‌ ಮಿರರ್‌ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X