ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಕಬ್ಬಿಗರು ಹರಿಸಲಿರುವ ಕಬ್ಬಿನರಸ...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ಸಮಾನಾಂತರ ವೇದಿಕೆಯಲ್ಲಿ ಆರು ಮತ್ತು ಮುಖ್ಯವೇದಿಕೆಯಲ್ಲಿ ಒಂದು - ಹೀಗೆ ಏಳು ವಿವಿಧ ಅಧಿವೇಶನಗಳು (ಸೆಷನ್ಸ್) ಸಾಹಿತ್ಯಸಂಬಂಧದ್ದೇ ಇವೆ. ಅವುಗಳ ರೂಪುರೇಷೆಯನ್ನು ಸಮ್ಮೇಳನಸಮಿತಿಸದಸ್ಯರ ಸಭೆಯಲ್ಲಿ ಪ್ರಕಟಿಸಿ ಮಾತಾಡುತ್ತಿದ್ದಾರೆ ಡಾ।ಮೈ.ಶ್ರೀ.ನಟರಾಜ. ಅವರ ಟಿ-ಶರ್ಟ್ ಮೇಲೆ ಇರೋದು ಕನ್ನಡದ ಏಳು ಜ್ಞಾನಪೀಠಿಗಳ ಚಿತ್ರ ಎಂಬುದು ನಿಮ್ಮ ವಿಶೇಷ ಗಮನಕ್ಕೆ. ನೀವು ಫೋಟೊಗಳನ್ನು ಇನ್ನೂ ಸೂಕ್ಷ್ಮವಾಗಿ ನೋಡುವವರಾದರೆ, ನಟರಾಜ ಅವರ ಬಲಹಸ್ತದ ಭಂಗಿಗೂ ಗೋಡೆ ಮೇಲಿರುವ ನಟರಾಜನ ಪಟದಲ್ಲಿನ ಅಭಯಹಸ್ತದ ಭಂಗಿಗೂ ಇರುವ ಸಾಮ್ಯವನ್ನೂ ಗಮನಿಸಿರುತ್ತೀರಿ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 21 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :












Click it and Unblock the Notifications