ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಕೋಲು ಕುಣಿದವೇ ಅವರ ಕಾಲು ದಣಿದವೇ?
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ಸಮ್ಮೇಳನದಲ್ಲಿ ಆತಿಥೇಯ ಕಾವೇರಿ ಕನ್ನಡ ಸಂಘದಿಂದ ‘‘ಕಾವೇರಿ ಸಂಗಮ’’ ಹೆಸರಲ್ಲಿ ಮಹಾಪ್ರದರ್ಶನವೊಂದು ಸಿದ್ಧವಾಗುತ್ತಿದ್ದು, ಈ ಚಿತ್ರದಲ್ಲಿರುವ ಕೋಲಾಟದ ಗುಂಪು ಆ ಮೆಗಾಪ್ರೊಗ್ರಾಮ್ನದೇ ಒಂದು ಭಾಗ. ಸಮ್ಮೇಳನದ ಕಾರ್ಯಕ್ರಮಗಳಿಗೆಲ್ಲ ಕಳಶಪ್ರಾಯವಾಗಿ ಬರಬೇಕೆಂದು ಮಹತ್ವಾಕಾಂಕ್ಷೆಯಿರುವ ‘‘ಕಾವೇರಿ ಸಂಗಮ’’ದಲ್ಲಿ ವಿವಿಧ ವಯೋಮಾನದವರೆಲ್ಲ ಭಾಗವಹಿಸುತ್ತಿದ್ದು ಪ್ರತ್ಯೇಕ ಗುಂಪುಗಳ ಪ್ರಾಕ್ಟೀಸ್ ಸೆಷನ್ಸ್ ಭರದಿಂದ ಸಾಗಿವೆ.

ಹಾಗೆ ಕೋಲಾಟ ಪ್ರಾಕ್ಟೀಸ್ನಲ್ಲಿರುವ ಈ ವರ್ಷದ ‘ಕಾವೇರಿ ಪ್ರಥಮ ಮಹಿಳೆ’ ಜ್ಯೋತಿ ಮಾದೇಶ್ ಅದೇನೊ ಯೋಚನೆ ಮಾಡತೊಡಗಿದ್ದಾರಲ್ಲ!? ಸ್ಟೆಪ್ಸ್ ಸರಿಯಾಗಿ ಬರುತ್ತಿಲ್ಲವೆಂದೇ? ಅಥವಾ ಕೋಲಾಟದ ನಡುವೆಯೇ ಸೆಲ್ಫೋನ್ ಕಾಲ್ಆಟ ಆಡಬೇಕಾಯಿತೇ?
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 23 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications