...ಎದೆ ಝಲ್‌ ಎಂದಿದೆ !?

ಐ.ಎಂ.ವಿಠ್ಠಲಮೂರ್ತಿ (ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿ)ಯವರಿಗೆ ಬಾಲ್ಟಿಮೋರ್‌ ಕನ್ವೆನ್ಷನ್‌ ಸೆಂಟರ್‌ನ ಭವ್ಯತೆಯನ್ನು ತೋರಿಸುತ್ತಿರುವ ಸಮ್ಮೇಳನ ಸಂಚಾಲಕ ಸುರೇಶ್‌ ರಾಮಚಂದ್ರ, ಸಭಾಂಗಣದ ಭವ್ಯತೆಯನ್ನಷ್ಟೇ ಅಲ್ಲ - ಹಮ್ಮಿಕೊಂಡಿರುವ ಸಮ್ಮೇಳನದ ಅಗಾಧತೆಯನ್ನು ಊಹಿಸಿ 'ಎದೆ ಝಲ್‌ ಎಂದಿದೆ..." ಎನ್ನುತ್ತಿರುವಂತಿದೆ!

ಆದರೆ ಅದು ಸುರೇಶ್‌ ಅವರ ಕನ್ನಡಪ್ರೀತಿಯ ರೋಮಾಂಚನವೇ ಹೊರತು ಅಳುಕಿನ ಒಳದನಿಯಲ್ಲ! ಬಹುಶಃ ಎದೆಮುಟ್ಟಿ ಎದೆತಟ್ಟಿ ತನ್ನ ಕನ್ನಡಾಭಿಮಾನವನ್ನು ವಿಠ್ಠಲಮೂರ್ತಿಗಳೆದುರು ಅವರು ಅರುಹುತ್ತಿರಬಹುದು.

Suresh Ramachandra - Convenor of WKC 2006 with I.M. Vittal Murthy

ಸಮ್ಮೇಳನ ತಯಾರಿಯ ಮೀಟಿಂಗುಗಳಲ್ಲಿ, ಟೆಲಿಕಾನ್ಫರೆನ್ಸ್‌ಗಳಲ್ಲಿ, ಅಥವಾ ಈಮೈಲ್‌ ವಿನಿಮಯಗಳಲ್ಲಾಗಲೀ - ಬಿಸಿಬಿಸಿ ಚರ್ಚೆಗಳು, ವಾದವಿವಾದಗಳು, 'ನನ್ನ ಕುದುರೆಗೆ ಮೂರೇ ಕಾಲು..." ಎಂಬರೀತಿಯ ಮೊಂಡುವಾದಗಳು ಹೀಗೆ ಎಂಥ ಬಿಸಿಯೇರಿದರೂ ಅದ್ಭುತವಾದ ಸೆನ್ಸ್‌-ಆಫ್‌-ಹ್ಯೂಮರ್‌ನಿಂದ, ಸಮಯೋಚಿತವಾದ ಹಾಸ್ಯಚಟಾಕಿಯಿಂದ ಅಥವಾ ಒಂದು ಆಶುಕವಿತೆಯಿಂದ ಅದನ್ನು ಏಕ್‌ದಂ ತಿಳಿಗೊಳಿಸಬಲ್ಲ 'ಕೂಲ್‌" ವ್ಯಕ್ತಿ ಸುರೇಶ್‌ ರಾಮಚಂದ್ರ.

ಹೆಸರಲ್ಲಿರುವ 'ಚಂದ್ರ"ನ ತಂಪು ಸ್ವಭಾವದಲ್ಲೂ ಹಾಸುಹೊಕ್ಕಾಗಿರುವ ಅವರು ಇದಕ್ಕಿಂತ ಹತ್ತುಪಟ್ಟು ದೊಡ್ಡ ಯೋಜನೆಯನ್ನೂ ಕೂಲ್‌ ಆಗಿ ನಿಭಾಯಿಸಬಲ್ಲರು; ಅದರ ಯಶೋಗಾಥೆಯನ್ನು ಎದೆ ತುಂಬಿ ಹಾಡಲೂ ಬಲ್ಲರು. ಏಕೆಂದರೆ ಕನ್ನಡವೆನೆ ಕುಣಿದಾಡುವ ಎದೆಯೇ ಅವರದೂ!

ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್‌ ([email protected])
ಸಹಕಾರ - ಹರಿದಾಸ್‌ ಲಹರಿ ; ವರ್ಜೀನಿಯ ([email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+