ನಗು, ಅಳು, ಆಶಯ, ಭಯ ಪ್ರತೀ ವರ್ಷದ ಹೊಣೆ!
ಅಮೆರಿಕಾದ ಖ್ಯಾತ ಕವಿಯತ್ರಿ (Ella Wheeler Wilcox)ಯ ಹೊಸ ವರ್ಷದ ಬಗೆಗಿನ ಕವನವು ತುಂಬಾ ಆಕರ್ಷಿಸಿತು. ವರ್ಷದ ಏರಿಳಿತಗಳು ಹೇಗೆ ನಮ್ಮ ಬದುಕಿನ ಸಹಜ ಕ್ಷಣಗಳಾಗಿತ್ತವೆ, ಕೊನೆಯಲ್ಲಿ ನಗು, ಅಳು, ಆಶಯ ಹಾಗೂ ಭಯಗಳು ಪ್ರತೀ ವರ್ಷದ ಹೊಣೆಯೆಂದು ಸಾರಿ ಹೇಳುವ ಸುಂದರ ಕವನ. ಇದೇ ಕವನವನ್ನು ಕನ್ನಡಕ್ಕೆ ಅನುವಾದಿಸುವ ನನ್ನದೊಂದು ಸಣ್ಣ ಪ್ರಯತ್ನ. ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ - ವೆಂಕಟ್, ಸಿಂಗಪುರ
The Year
Ella Wheeler Wilcox (1850-1919)
What can be said in New Year rhymes,
That's not been said a thousand times?
The new years come, the old years go,
We know we dream, we dream we know.
We rise up laughing with the light,
We lie down weeping with the night.
We hug the world until it stings,
We curse it then and sigh for wings.
We live, we love, we woo, we wed,
We wreathe our brides, we sheet our dead.
We laugh, we weep, we hope, we fear,
And that's the burden of the year.

ಹೊಸ ವರ್ಷ
ಹೇಳುವುದಾದರು ಏನು? ಹೊಸವರ್ಷದ ಪ್ರಾಸದಲಿ
ಹೇಳಲಾಗದೆ ಮತ್ತೆ, ಹುದುಗಿ ಹೋದ ಕಾಲದಲಿ
ಬರುವವು ನವ ವರುಷಗಳು, ಕಳೆದವು ಹಾಗೆ ಹಲವು
ಕನಸ ಕಾಣುವುದ ತಿಳಿದೆವು, ಕನಸುಗಳ ಅರಿತೆವು
ಮೆರೆದೆವು ಯಶಸ್ಸಿನ ಬೆಳಕಲಿ ನಗುತ
ಕುಗ್ಗಿ ಕುಳಿತು ಸೋಲಿನ ಕತ್ತಲಲಿ ಅಳುತ
ವ್ಯಾಮೋಹದಿ ಬಿಗಿದಪ್ಪಿದೆವು ಜಗವ, ಕುಟುಕುವರೆಗೆ
ಶಾಪ ಹಾಕಿ ನಿಂತು, ನಿಟ್ಟುಸಿರ ನೋಟದಿ ಪ್ರೀತಿಯೆಡೆಗೆ
ಒಬ್ಬರೊಬ್ಬರ ಪ್ರೀತಿಸಿ, ಓಲೈಸಿ, ಒಂದುಗೂಡಿ ಬದುಕುತ
ಸುಂದರ ಕ್ಷಣಗಳಿಗೆ ಹೂಮಾಲೆ ಹಾಕಿ, ಸತ್ತವರ ಮರೆಮಾಚುತ
ನಗುತಾ, ಅಳುತಾ, ಆಶಯದಿ, ಭಯದಲಿ ಬಾಳುತಾ
ಕಳೆದ ವರ್ಷದ ಹೊಣೆ, ಹೊರೆಯು ಇದೇ ಎನ್ನುತಾ!
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications