ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ ಹನಿಗಳು

By Staff
|
Google Oneindia Kannada News


ವಿಶ್ವಕಪ್‌ ಕನಸಿನ ಮನೆಗೆ ಕಲ್ಲೆಸೆದ ಟೀಮ್‌ಇಂಡಿಯಾ ಬಗ್ಗೆ...

Still people are guessing what went wrong with Indian cricketers!ಒಂದು ಎರಡು
ವಿಶ್ವಕಪ್‌ಗೆ ಹೊರಡು
ಮೂರು ನಾಲ್ಕು
ಜಾಹೀರಾತು ಬೇಕು
ಐದು ಆರು
ಕಡಿಮೆ ಸ್ಕೋರು
ಏಳು ಎಂಟು
ಕಟ್ಟು ಮೂಟೆ ಕಟ್ಟು
ಒಂಬತ್ತು ಹತ್ತು
ಮರ್ಯಾದಿ ಹರಾಜಾಯ್ತು

***

ಭಾರತ ಸೋಲಲು
ಕಾರಣ ಎರಡೇ ಎಂದಿರಾ?
ಬಾಂಗ್ಲಾ ದೇಶ ಕಟ್ಟಿಸಲು
ನೆರವಾದ ಇಂದಿರಾ
ಮತ್ತು
ಆಂಗ್ಲ ಭಾಷೆ(?) ಮಾತನಾಡುವ
ಮಂದಿರಾ

***

ತ್ರೇತಾಯುಗದಲ್ಲಿ
ಲಂಕೆಯ ಸಂಪೂರ್ಣ
ಸುಟ್ಟಿದ್ದರೆ ಹನುಮಂತ,
ನಮ್ಮವರು ಆಡಬಹುದಿತ್ತು
ವಿಶ್ವಕಪ್‌ನಲ್ಲಿ
ಎಂಟರ ಹಂತ

***

ಕಂಡಲ್ಲಿ
ರಾಹುಲ್‌,ಗಂಗೂಲಿ,
ಸಚಿನ್‌, ಚಾಪೆಲ್ಲು
ಜನ ಕೈಗೆತ್ತುಕೊಳ್ಳುತ್ತಿದ್ದರಂತೆ
ಕಲ್ಲು

ಇಂಜಿ, ಅಫ್ರಿದಿ, ಮತ್ತಿತರರು
ನಡುಗುತ್ತಿದ್ದಾರಂತೆ ನೆನೆಸಿಕೊಂಡು,
ಚಢಿಯೇಟು, ಗಲ್ಲು

***

ಹೆಚ್ಚಾಗಿದ್ದೆ ಕಾರಣವಂತೆ
ನಮ್ಮವರಿಗೆ ಬಣ್ಣಬಣ್ಣದ ಜಾಹೀರಾತು
ಮೊದಲ ಪಂದ್ಯದಲ್ಲೇ
ನಿಜ ಬಣ್ಣ ಜಾಹೀರಾಯ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X