ಅಮೆರಿಕದಲ್ಲಿ ಕಣ್ಣಿಗೆ ಹಬ್ಬ ತಂದ ನವರಾತ್ರಿ ಬೊಂಬೆ
ಭಾರತೀಯರು ತಮ್ಮ ತಾಯಿನಾಡು ಬಿಟ್ಟು ಹೊರದೇಶಗಳಿಗೆ ಹೋಗಿ ನೆಲೆಸಿದರೂ ತಮ್ಮತನವನ್ನು ಕಳೆದುಕೊಳ್ಳದೆ, ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುವುದು ಹೊಸತೇನಲ್ಲ. ಅಂತೆಯೇ ಬೆಂಗಳೂರಿನ ಉಷಾ ರಾಮ್ ಪ್ರಸಾದ್ ಅವರು ಸುಮಾರು 25 ವರುಷಗಳಿಗೂ ಹೆಚ್ಚು ಅಮೆರಿಕೆಯಲ್ಲಿ ನೆಲಸಿದ್ದರೂ ಪ್ರತಿ ಹಿಂದೂ ಹಬ್ಬಗಳನ್ನು ಚಾಚು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.
ಇತ್ತೀಚಿಗೆ ನವರಾತ್ರಿ ಹಬ್ಬವನ್ನು ಓಹಿಯೋದ ಪೆರ್ರಿಸ್ ಬರ್ಗ್ ನಗರದಲ್ಲಿ ಅತ್ಯಂತ ವರ್ಣಮಯವಾಗಿ ಬಂಧು ಬಳಗದೊಂದಿಗೆ ಆಚರಿಸಿದ್ದಾರೆ. ಬಂದ ಅತಿಥಿಗಳನ್ನು ತರಹೇವಾರಿ ತಿಂಡಿ ತೀರ್ಥದೊಂದಿಗೆ ಆದರಿಸಿ, ಬಂದಿದ್ದ ಹೆಂಗಳೆಯರಿಗೆ ಅರಿಶಿನ ಕುಂಕುಮಗಳನ್ನೂ ಕೊಟ್ಟು ಸಂಭ್ರಮಿಸಿದ್ದಾರೆ. ನಮ್ಮ ಸಂಸ್ಕೃತಿ, ನಮ್ಮ ಆಚಾರಗಳು ಇದೆ ರೀತಿ ಮುಂದುವರೆಯಲಿ ಎಂದು ಹಾರೈಸುತ್ತಾರೆ.
ಪ್ರತಿಸಲವೂ ಮೆಟ್ಟಲುಗಳನ್ನು ಮಾಡಿ ಪಟ್ಟದ ಬೊಂಬೆಗಳೊಂದಿಗೆ ಇತರೆ ಬೊಂಬೆಗಳನ್ನು ಇಡುವುದೇ ಅಲ್ಲದೆ, ಪ್ರತಿ ವರುಷವು ಬೇರೆ ಬೇರೆ ಕರ್ನಾಟಕದ ವಿಷಯಗಳ ಕುರಿತಾದ ಮಾದರಿಗಳನ್ನು ಮಾಡುತ್ತಾರೆ. ಈ ವರುಷದ ಮಾದರಿಗಳು (ಮಾಡೆಲ್ಸ್), ಒಂದು ಹಿಂದೂ ಸಂಸ್ಕೃತಿಯ ಮದುವೆ. ಎರಡನೆಯದು ಮೈಸೊರಿನ ಜೂ, ಆಟೋ ನಿಲ್ದಾಣ ಮುಂತಾದವು. ನವರಾತ್ರಿ ಸಂದರ್ಭದಲ್ಲಿ ಇಂಥ ಬೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಹಿಂದೂ ಹಬ್ಬಗಳ ಸಂಭ್ರಮದ ಆಚರಣೆ
25 ವರ್ಷದಿಂದ ಅಮೆರಿಕದಲ್ಲೇ ನೆಲೆಸಿದ್ದರೂ ಹಿಂದು ಪರಂಪರೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಯದೇ ಪಾಲಿಸುತ್ತಿರುವ, ಎಲ್ಲ ಹಿಂದೂ ಹಬ್ಬಗಳನ್ನೂ ಸಂಭ್ರಮದಿಂದ ಆಚರಿಸುತ್ತಿರುವ ಉಷಾ ರಾವ್ ದಂಪತಿ.

ಚೆಂದಕಿಂತ ಚೆಂದ ಈ ಬೊಂಬೆಗಳು
ನವರಾತ್ರಿಯ ಪ್ರಮುಖ ಆಕರ್ಷಣೆಯಾದ ಬೊಂಬೆ ಕೂರಿಸುವ ಪದ್ಧತಿಯನ್ನೂ ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿರುವ ಕುಟುಂಬ

ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯ
ಕಡಲೆಕಾಳಿನ ಉಸುಳಿ, ಬೂಂದಿ ಲಾಡು ಸೇರಿದಂತೆ ಬಾಯಲ್ಲಿ ನೀರು ಬರಿಸುವ ಬಗೆ ಬಗೆ ಖಾದ್ಯಗಳು ನವರಾತ್ರಿ ಆಚರಣೆಯ ಪ್ರಮುಖ ಆಕರ್ಷಣೆ

ಹೆಂಗೆಳೆಯರಿಗೆ ಹಬ್ಬದ ಸಂಭ್ರಮ
ಹೆಂಗೆಳೆಯರಿಗೆ ಪ್ರತಿದಿನವೂ ಹಬ್ಬವೇ. ಅದರಲ್ಲೂ ಇಂಥ ಆಅಚರಣೆಗಳು ಬಂದರಂತೂ, ಸಿಂಗರಿಸಿಕೊಂಡು ಅವರು ಸಂಭ್ರಮಿಸುವ ರೀತಿಯೇ ವಿನೂತನ.

ಅಮೆರಿಕದಲ್ಲಿ ಮೈಸೂರು ಮೃಗಾಲಯ
ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಮಾದರಿಯನ್ನು ನಿರ್ಮಿಸಿ, ಅಮೆರಿಕದಲ್ಲೂ ಮೈಸೂರು ಮೃಗಾಲಯವನ್ನು ತಂದಿಟ್ಟಿದ್ದಾರೆ ಉಷಾ ರಾವ್!

ಮನೆಯೊಳಗೆ ಆಟೋ ನಿಲ್ದಾಣ!
ಆಟೊ ನಿಲ್ದಾಣದ ಮಾದರಿ ನಿರ್ಮಿಸಿ, ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್ ಅವರ ಕಸ್ತೂರಿನಿವಾಸ ಮತ್ತು ಹಿಂದಿಯ ಸೂಪರ್ ಹಿಟ್ ಚಿತ್ರ ಶೋಲೆಯ ಪೋಸ್ಟರ್ ಹಾಕಿದ್ದು ಗಮನ ಸೆಳೆಯುತ್ತದೆ!

ಯೋಗಕ್ಕೂ ಮನ್ನಣೆ!
ಪತಂಜಲಿ ಯೋಗಶಾಲೆಯನ್ನು ನಿರ್ಮಿಸಿ, ಭಾರತೀಯರೇ ಪರಿಚಯಿಸಿದ ಯೋಗ ಪದ್ಧತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿರುವುದನ್ನು ನೆನಪಿಸಿದ್ದು ಶ್ಲಾಘನೀಯ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications