ಮಿಲ್ಟನ್ ಕೀನ್ಸ್ ಕನ್ನಡಿಗರ ಚೊಚ್ಚಲ ರಾಜ್ಯೋತ್ಸವ
2014ರ, 1ನೇ ನವೆಂಬರ್, ಯುಕೆಯ ಕನ್ನಡಿಗರಿಗೆ ಕೇವಲ ಒಂದು ಸಾಧಾರಣ ವಾರಾಂತ್ಯವಾಗಿರದೇ, ತಮ್ಮ ನೆಲದ ಕಂಪನ್ನು ಸವಿಯುವ ದಿನವಾಗಿತ್ತು. ಇತ್ತೀಚೆಗಷ್ಟೇ ತನ್ನ ದಶಮಾನೋತ್ಸವ ಸಮಾರಂಭವನ್ನು ಬಹಳ ಸಂಭ್ರಮದಿಂದ ಆಚರಿಸಿದ ಕನ್ನಡಿಗರುಯುಕೆಯ ಹೊಸ ಶಾಖೆಯಾದ 'ಕನ್ನಡಿಗರು ಮಿಲ್ಟನ್ ಕೀನ್ಸ್' ರವರು ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಶಾಖೆಯ ಮುಖಂಡ ಅನಿಲ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಚೊಚ್ಚಲ ಕನ್ನಡ ರಾಜ್ಯೋತ್ಸವದಲ್ಲಿ 200ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿ ಸಡಗರದಿಂದ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ಮಧ್ಯಾಹ್ನ 3ರಿಂದ ಸಂಜೆ 8ರವರೆಗೆ ನಡೆದ ಈ ನಾಡಹಬ್ಬದಲ್ಲಿ ಮಿಲ್ಟನ್ ಕೀನ್ಸ್ ಅಷ್ಟೇ ಅಲ್ಲದೆ ದೂರ ದೂರದಿಂದ ಕನ್ನಡಾಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು. ಪುಟಾಣಿಗಳ 'ಹಚ್ಚೇವು ಕನ್ನಡದ ದೀಪ' ನೃತ್ಯರೂಪಕದೊಂದಿಗೆ ಪ್ರಾರಂಭವಾದ ಸಮಾರಂಭ ತನ್ನ ವೈವಿಧ್ಯಮಯ ಕಾರ್ಯಕ್ರಮಗಳಿಂದ ಜನಮನ ಸೂರೆಗೊಂಡಿತು.

ಕನ್ನಡದ ಹಿರಿಯ ಕಲಾವಿದ 'ಅಭಿನಯ ಚತುರ' ಎಸ್. ಶಿವರಾಂರವರು ಹಾಗು ಮಿಲ್ಟನ್ ಕೇನ್ಸ್ ಕೌನ್ಸಿಲರ್ ಗೀತಾ ಮೋರ್ಲಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು ಕನ್ನಡ ನಾಡು, ನುಡಿ, ಏಕೀಕರಣದ ಸಂದೇಶವನ್ನು ಸಾರಿದರು.
ಶಿವರಾಂರವರು ತಮ್ಮ ಚಿತ್ರಬದುಕನ್ನು ಮೆಲುಕು ಹಾಕುತ್ತ ತಾವು ನಟಿಸಿದ 'ಪ್ರೇಮಾಯಣ', 'ಶರಪಂಜರ' ಮುಂತಾದ ಚಿತ್ರಗಳ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರು. ತಮ್ಮ ತಿಳಿಹಾಸ್ಯ ಭರಿತ ಭಾಷಣದಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 'ಸಮರ್ಥನಂ' ಅಂಗವಿಕಲ ಮಕ್ಕಳು ಪ್ರದರ್ಶಿಸಿದ ನೃತ್ಯರೂಪಕಗಳು ನೆರೆದಿದ್ದ ಜನಸಮೂಹವನ್ನು ಮೂಕವಿಸ್ಮಿತರಾಗಿಸಿದರೆ, ಚಿ. ಬಾಲಸುಬ್ರಮಣ್ಯಂ ನೀಡಿದ ಮಿಮಿಕ್ರಿ, ಹಾಡುಗಳು ಜನರನ್ನು ಬೆರಗುಗೊಳಿಸಿದವು. ಇದೇ ಸಂದರ್ಭದಲ್ಲಿ ಸಮರ್ಥನಂ ಟ್ರಸ್ಟ್ ಗೆ ಕನ್ನಡಿಗರುಯುಕೆಯ ವತಿಯಿಂದ £1,200 ಧನಸಂಗ್ರಹ ಮಾಡಿ, ದಾನ ನೀಡುವುದರಲ್ಲಿ ನೆರವಾದ ಎಲ್ಲ ಸಭಿಕರೂ ಹಾಗೂ ಅತಿಥಿಗಳು ತಮ್ಮ ಭಾಷಾಭಿಮಾನವನ್ನಷ್ಟೇ ಅಲ್ಲದೆ ಹೃದಯ ವೈಶಾಲ್ಯವನ್ನು ಮೆರೆದರು.

ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನ. ಲಕ್ಷ್ಮಿ ನವೀನ ಅವರ 'ದೇವಿ ನಮನ' ನೃತ್ಯರೂಪಕ, ದೀಪ್ತಿ ನವೀನ ಹಾಗು ತಂಡದವರು ಹಾಡಿದ 'ವಿಶ್ವ ವಿನೂತನ' ಗೀತೆ, ಕು. ಅನರ್ಘ್ಯ ಹಾಡಿದ 'ಹಿಂದೂಸ್ಥಾನವು ಎಂದು ಮರೆಯದ' ಗೀತೆ, ನೀಲಿಮಾ ರಾವ್ ಹಾಗೂ ಅರುಣ್ ಕುಕ್ಕೆಯವರ ಯುಗಳ ಗೀತೆ, ನಿರೂಪಕರಾದ ಗಿರೀಶ್ ಹಾಗೂ ನವೀನ ಹಾಡಿದ 'ಕಾಲವನ್ನು ತಡೆಯೋರು' ಹಾಡುಗಳು ನೆರೆದಿದ್ದ ಜನರ ಮನಮುದಗೊಳಿಸಿದವು. ಪ್ರೇಕ್ಷಕರಿಗೆ ಮನರಂಜನೆಯ ರಸದೂಟವಲ್ಲದೆ, ಲಘು ಉಪಹಾರ, ಹೋಳಿಗೆ ತುಪ್ಪ, ಹಾಗೂ ಉಚಿತ ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.
ಗಿರೀಶ್ ಹಾಗೂ ನವೀನರ ಅಚ್ಚುಕಟ್ಟಾದ ನಿರೂಪಣೆಯಿಂದ ತಮ್ಮ ಪ್ರಥಮ ಪ್ರಯತ್ನದಲ್ಲೇ ಒಂದು ಯಶಸ್ವೀ ಕಾರ್ಯಕ್ರಮವನ್ನು ಆಯೋಜಿಸಿದ್ದ ಹೆಮ್ಮೆ ಮಿಲ್ಟನ್ ಕೀನ್ಸ್ ಕನ್ನಡಿಗರು ತಂಡದ್ದಾದರೆ, ಹೇಮಂತ ಋತುವಿನ ಕುಳಿರ್ಗಾಳಿಯ ವಾರಾಂತ್ಯ ಸಂಜೆಯನ್ನು ಕನ್ನಡ ಭಾಷೆ, ಸಂಸ್ಕೃತಿಯ ಸೊಗಡನ್ನು ಅನುಭವಿಸಿ, ತಾಯ್ನಾಡನ್ನು ನೆನಪಿಸಿ ಮೈಮರೆತ ಸಂತೃಪ್ತಿ ಕನ್ನಡಾಭಿಮಾನಿಗಳಲ್ಲಿತ್ತು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications