ಮಿಲ್ಟನ್ ಕೀನ್ಸ್ ಕನ್ನಡಿಗರ ಚೊಚ್ಚಲ ರಾಜ್ಯೋತ್ಸವ
2014ರ, 1ನೇ ನವೆಂಬರ್, ಯುಕೆಯ ಕನ್ನಡಿಗರಿಗೆ ಕೇವಲ ಒಂದು ಸಾಧಾರಣ ವಾರಾಂತ್ಯವಾಗಿರದೇ, ತಮ್ಮ ನೆಲದ ಕಂಪನ್ನು ಸವಿಯುವ ದಿನವಾಗಿತ್ತು. ಇತ್ತೀಚೆಗಷ್ಟೇ ತನ್ನ ದಶಮಾನೋತ್ಸವ ಸಮಾರಂಭವನ್ನು ಬಹಳ ಸಂಭ್ರಮದಿಂದ ಆಚರಿಸಿದ ಕನ್ನಡಿಗರುಯುಕೆಯ ಹೊಸ ಶಾಖೆಯಾದ 'ಕನ್ನಡಿಗರು ಮಿಲ್ಟನ್ ಕೀನ್ಸ್' ರವರು ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಶಾಖೆಯ ಮುಖಂಡ ಅನಿಲ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಚೊಚ್ಚಲ ಕನ್ನಡ ರಾಜ್ಯೋತ್ಸವದಲ್ಲಿ 200ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿ ಸಡಗರದಿಂದ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ಮಧ್ಯಾಹ್ನ 3ರಿಂದ ಸಂಜೆ 8ರವರೆಗೆ ನಡೆದ ಈ ನಾಡಹಬ್ಬದಲ್ಲಿ ಮಿಲ್ಟನ್ ಕೀನ್ಸ್ ಅಷ್ಟೇ ಅಲ್ಲದೆ ದೂರ ದೂರದಿಂದ ಕನ್ನಡಾಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು. ಪುಟಾಣಿಗಳ 'ಹಚ್ಚೇವು ಕನ್ನಡದ ದೀಪ' ನೃತ್ಯರೂಪಕದೊಂದಿಗೆ ಪ್ರಾರಂಭವಾದ ಸಮಾರಂಭ ತನ್ನ ವೈವಿಧ್ಯಮಯ ಕಾರ್ಯಕ್ರಮಗಳಿಂದ ಜನಮನ ಸೂರೆಗೊಂಡಿತು.

ಕನ್ನಡದ ಹಿರಿಯ ಕಲಾವಿದ 'ಅಭಿನಯ ಚತುರ' ಎಸ್. ಶಿವರಾಂರವರು ಹಾಗು ಮಿಲ್ಟನ್ ಕೇನ್ಸ್ ಕೌನ್ಸಿಲರ್ ಗೀತಾ ಮೋರ್ಲಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು ಕನ್ನಡ ನಾಡು, ನುಡಿ, ಏಕೀಕರಣದ ಸಂದೇಶವನ್ನು ಸಾರಿದರು.
ಶಿವರಾಂರವರು ತಮ್ಮ ಚಿತ್ರಬದುಕನ್ನು ಮೆಲುಕು ಹಾಕುತ್ತ ತಾವು ನಟಿಸಿದ 'ಪ್ರೇಮಾಯಣ', 'ಶರಪಂಜರ' ಮುಂತಾದ ಚಿತ್ರಗಳ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರು. ತಮ್ಮ ತಿಳಿಹಾಸ್ಯ ಭರಿತ ಭಾಷಣದಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 'ಸಮರ್ಥನಂ' ಅಂಗವಿಕಲ ಮಕ್ಕಳು ಪ್ರದರ್ಶಿಸಿದ ನೃತ್ಯರೂಪಕಗಳು ನೆರೆದಿದ್ದ ಜನಸಮೂಹವನ್ನು ಮೂಕವಿಸ್ಮಿತರಾಗಿಸಿದರೆ, ಚಿ. ಬಾಲಸುಬ್ರಮಣ್ಯಂ ನೀಡಿದ ಮಿಮಿಕ್ರಿ, ಹಾಡುಗಳು ಜನರನ್ನು ಬೆರಗುಗೊಳಿಸಿದವು. ಇದೇ ಸಂದರ್ಭದಲ್ಲಿ ಸಮರ್ಥನಂ ಟ್ರಸ್ಟ್ ಗೆ ಕನ್ನಡಿಗರುಯುಕೆಯ ವತಿಯಿಂದ £1,200 ಧನಸಂಗ್ರಹ ಮಾಡಿ, ದಾನ ನೀಡುವುದರಲ್ಲಿ ನೆರವಾದ ಎಲ್ಲ ಸಭಿಕರೂ ಹಾಗೂ ಅತಿಥಿಗಳು ತಮ್ಮ ಭಾಷಾಭಿಮಾನವನ್ನಷ್ಟೇ ಅಲ್ಲದೆ ಹೃದಯ ವೈಶಾಲ್ಯವನ್ನು ಮೆರೆದರು.

ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನ. ಲಕ್ಷ್ಮಿ ನವೀನ ಅವರ 'ದೇವಿ ನಮನ' ನೃತ್ಯರೂಪಕ, ದೀಪ್ತಿ ನವೀನ ಹಾಗು ತಂಡದವರು ಹಾಡಿದ 'ವಿಶ್ವ ವಿನೂತನ' ಗೀತೆ, ಕು. ಅನರ್ಘ್ಯ ಹಾಡಿದ 'ಹಿಂದೂಸ್ಥಾನವು ಎಂದು ಮರೆಯದ' ಗೀತೆ, ನೀಲಿಮಾ ರಾವ್ ಹಾಗೂ ಅರುಣ್ ಕುಕ್ಕೆಯವರ ಯುಗಳ ಗೀತೆ, ನಿರೂಪಕರಾದ ಗಿರೀಶ್ ಹಾಗೂ ನವೀನ ಹಾಡಿದ 'ಕಾಲವನ್ನು ತಡೆಯೋರು' ಹಾಡುಗಳು ನೆರೆದಿದ್ದ ಜನರ ಮನಮುದಗೊಳಿಸಿದವು. ಪ್ರೇಕ್ಷಕರಿಗೆ ಮನರಂಜನೆಯ ರಸದೂಟವಲ್ಲದೆ, ಲಘು ಉಪಹಾರ, ಹೋಳಿಗೆ ತುಪ್ಪ, ಹಾಗೂ ಉಚಿತ ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.
ಗಿರೀಶ್ ಹಾಗೂ ನವೀನರ ಅಚ್ಚುಕಟ್ಟಾದ ನಿರೂಪಣೆಯಿಂದ ತಮ್ಮ ಪ್ರಥಮ ಪ್ರಯತ್ನದಲ್ಲೇ ಒಂದು ಯಶಸ್ವೀ ಕಾರ್ಯಕ್ರಮವನ್ನು ಆಯೋಜಿಸಿದ್ದ ಹೆಮ್ಮೆ ಮಿಲ್ಟನ್ ಕೀನ್ಸ್ ಕನ್ನಡಿಗರು ತಂಡದ್ದಾದರೆ, ಹೇಮಂತ ಋತುವಿನ ಕುಳಿರ್ಗಾಳಿಯ ವಾರಾಂತ್ಯ ಸಂಜೆಯನ್ನು ಕನ್ನಡ ಭಾಷೆ, ಸಂಸ್ಕೃತಿಯ ಸೊಗಡನ್ನು ಅನುಭವಿಸಿ, ತಾಯ್ನಾಡನ್ನು ನೆನಪಿಸಿ ಮೈಮರೆತ ಸಂತೃಪ್ತಿ ಕನ್ನಡಾಭಿಮಾನಿಗಳಲ್ಲಿತ್ತು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications