ಕೇಂಬ್ರಿಜ್ ಕನ್ನಡ ಬಳಗದ ರಾಜ್ಯೋತ್ಸವ- ದೀಪಾವಳಿ
"ಬಾಳುವುದೇತಕೆ ನುಡಿ ಎಲೆ ಜೀವ, ಸಿರಿಗನ್ನಡದಲಿ ಕವಿತೆಯ ಹಾಡೆ, ಸಿರಿಗನ್ನಡದೇಳಿಗೆಯನು ನೋಡೆ, ಕನ್ನಡ ತಾಯಿಯ ಸೇವೆಯ ಮಾಡೆ" ಎನ್ನುವ ಕು.ವೆಂ.ಪು ಅವರ ಕವಿತೆಯ ಸಾಲುಗಳಂತೆ ಕನ್ನಡಕ್ಕಾಗಿ ಕಟ್ಟಲಾಗಿರುವ ಕೇಂಬ್ರಿಜ್ ಕನ್ನಡ ಬಳಗದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿತ್ತು.
ಕೇಂಬ್ರಿಜ್ ನಗರದ ಪ್ರಾಥಮಿಕ ಶಾಲೆಯೊಂದರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅಬಾಲವೃದ್ಧರಾದಿಯಾಗಿ ಇನ್ನೂರಕ್ಕೂ ಮಿಕ್ಕಿ ಜನ ಪಾಲ್ಗೊಂಡಿದ್ದು ವಿಶೇಷ ಕಳೆ ತಂದಿತ್ತು. ಪುಟಾಣಿ ಅನಘಾಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಹಾಡು, ನೃತ್ಯ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಿನಿಮಾ ಗೀತೆಗಳು, ಏಕಪಾತ್ರಾಭಿನಯ, ನಗೆ ನಾಟಕ, ಇತ್ಯಾದಿಗಳಿಂದ ತುಂಬಿ ಸಭಿಕರ ಮನಗೆದ್ಡಿತು.

ಕಡೆಯ ಒಂದು ಗಂಟೆ ವಿಜಯೀಂದ್ರ -ಶ್ರೀದೇವಿ ಅವರ ಯುಗಳ ಗಾಯನ ಮಧುರ ಗೀತೆಗಳಿಂದ ಕೇಳುಗರ ಮನತಣಿಸಿತು. 50ರ ದಶಕದಿಂದ ಇಂದಿನವರೆಗೂ ಅಷ್ಟೇ ಜನಪ್ರಿಯವಾಗಿರುವ ಪ್ರಸಿದ್ಧವಾದ ಹಾಡುಗಳನ್ನು ಹಾಡಿ ಎಲ್ಲರ ಮೈ ಮನಗಳನ್ನು ಕುಣಿಸಿದರು. [ಕನ್ನಡ ಕುರಿತು ಯುಕೆ ಕನ್ನಡತಿಯ ಲೇಖನ]
ಉತ್ತಮ ಊಟ-ಉಪಚಾರಗಳ ವ್ಯವಸ್ಥೆ, ಉತ್ಕೃಷ್ಟ ಧ್ವನಿ ವರ್ಧಕದ ಅನುಕೂಲ ಹಾಗೂ ಕಾರ್ಯಕರ್ತರ ತೆರೆಮರೆಯ ಶ್ರಮ ಈ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಿತೆಂದರೆ ಉತ್ಪೇಕ್ಷೆಯಲ್ಲ. ಡಾ. ಚಂದ್ರಪ್ಪ, ಡಾ.ವಿಜಯ ಲಕ್ಷ್ಮಿ, ಶಶಿಧರ, ವೆಂಕಟೇಶ್ ರಂಗನಾಥ್, ರವಿಕಿರಣ್ ಮಾನ್ಯ ಮತ್ತು ಹಲವರು ಈ ಕಾರ್ಯಕ್ರಮ ಹಾಗೂ ಕನ್ನಡ ಕೂಟದ ಬೆನ್ನೆಲುಬುಗಳು. ಶಶಿಧಾ ಸ್ವಾಗತ ಭಾಷಣ ಮಾಡಿದರು, ಅಪೂರ್ವ ಹಾಗು ಪ್ರಿಯ ಕಾರ್ಯಕ್ರಮ ನಿರೂಪಿಸಿದರೆ ಡಾ. ಚಂದ್ರಪ್ಪ ವಂದನಾರ್ಪಣೆ ಅರ್ಪಿಸಿದರು.

ಕೇಂಬ್ರಿಜ್ ಕನ್ನಡ ಬಳಗ ಅನೌಪಚಾರಿಕವಾಗಿ ಶುರುವಾಗಿದ್ದು 2014ರ ಏಪ್ರಿಲ್ ತಿಂಗಳಲ್ಲಿ. ನಂತರ ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ ಕನ್ನಡ ಬಳಗ ತನ್ನ ಚಟುವಟಿಕೆ ಆರಂಭಿಸಿದೆ. ಬಳಗದಲ್ಲಿ ಸುಮಾರು 200 ಸದಸ್ಯರಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications