ಕೇಂಬ್ರಿಜ್ ಕನ್ನಡ ಬಳಗದ ರಾಜ್ಯೋತ್ಸವ- ದೀಪಾವಳಿ
"ಬಾಳುವುದೇತಕೆ ನುಡಿ ಎಲೆ ಜೀವ, ಸಿರಿಗನ್ನಡದಲಿ ಕವಿತೆಯ ಹಾಡೆ, ಸಿರಿಗನ್ನಡದೇಳಿಗೆಯನು ನೋಡೆ, ಕನ್ನಡ ತಾಯಿಯ ಸೇವೆಯ ಮಾಡೆ" ಎನ್ನುವ ಕು.ವೆಂ.ಪು ಅವರ ಕವಿತೆಯ ಸಾಲುಗಳಂತೆ ಕನ್ನಡಕ್ಕಾಗಿ ಕಟ್ಟಲಾಗಿರುವ ಕೇಂಬ್ರಿಜ್ ಕನ್ನಡ ಬಳಗದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿತ್ತು.
ಕೇಂಬ್ರಿಜ್ ನಗರದ ಪ್ರಾಥಮಿಕ ಶಾಲೆಯೊಂದರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅಬಾಲವೃದ್ಧರಾದಿಯಾಗಿ ಇನ್ನೂರಕ್ಕೂ ಮಿಕ್ಕಿ ಜನ ಪಾಲ್ಗೊಂಡಿದ್ದು ವಿಶೇಷ ಕಳೆ ತಂದಿತ್ತು. ಪುಟಾಣಿ ಅನಘಾಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಹಾಡು, ನೃತ್ಯ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಿನಿಮಾ ಗೀತೆಗಳು, ಏಕಪಾತ್ರಾಭಿನಯ, ನಗೆ ನಾಟಕ, ಇತ್ಯಾದಿಗಳಿಂದ ತುಂಬಿ ಸಭಿಕರ ಮನಗೆದ್ಡಿತು.

ಕಡೆಯ ಒಂದು ಗಂಟೆ ವಿಜಯೀಂದ್ರ -ಶ್ರೀದೇವಿ ಅವರ ಯುಗಳ ಗಾಯನ ಮಧುರ ಗೀತೆಗಳಿಂದ ಕೇಳುಗರ ಮನತಣಿಸಿತು. 50ರ ದಶಕದಿಂದ ಇಂದಿನವರೆಗೂ ಅಷ್ಟೇ ಜನಪ್ರಿಯವಾಗಿರುವ ಪ್ರಸಿದ್ಧವಾದ ಹಾಡುಗಳನ್ನು ಹಾಡಿ ಎಲ್ಲರ ಮೈ ಮನಗಳನ್ನು ಕುಣಿಸಿದರು. [ಕನ್ನಡ ಕುರಿತು ಯುಕೆ ಕನ್ನಡತಿಯ ಲೇಖನ]
ಉತ್ತಮ ಊಟ-ಉಪಚಾರಗಳ ವ್ಯವಸ್ಥೆ, ಉತ್ಕೃಷ್ಟ ಧ್ವನಿ ವರ್ಧಕದ ಅನುಕೂಲ ಹಾಗೂ ಕಾರ್ಯಕರ್ತರ ತೆರೆಮರೆಯ ಶ್ರಮ ಈ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಿತೆಂದರೆ ಉತ್ಪೇಕ್ಷೆಯಲ್ಲ. ಡಾ. ಚಂದ್ರಪ್ಪ, ಡಾ.ವಿಜಯ ಲಕ್ಷ್ಮಿ, ಶಶಿಧರ, ವೆಂಕಟೇಶ್ ರಂಗನಾಥ್, ರವಿಕಿರಣ್ ಮಾನ್ಯ ಮತ್ತು ಹಲವರು ಈ ಕಾರ್ಯಕ್ರಮ ಹಾಗೂ ಕನ್ನಡ ಕೂಟದ ಬೆನ್ನೆಲುಬುಗಳು. ಶಶಿಧಾ ಸ್ವಾಗತ ಭಾಷಣ ಮಾಡಿದರು, ಅಪೂರ್ವ ಹಾಗು ಪ್ರಿಯ ಕಾರ್ಯಕ್ರಮ ನಿರೂಪಿಸಿದರೆ ಡಾ. ಚಂದ್ರಪ್ಪ ವಂದನಾರ್ಪಣೆ ಅರ್ಪಿಸಿದರು.

ಕೇಂಬ್ರಿಜ್ ಕನ್ನಡ ಬಳಗ ಅನೌಪಚಾರಿಕವಾಗಿ ಶುರುವಾಗಿದ್ದು 2014ರ ಏಪ್ರಿಲ್ ತಿಂಗಳಲ್ಲಿ. ನಂತರ ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ ಕನ್ನಡ ಬಳಗ ತನ್ನ ಚಟುವಟಿಕೆ ಆರಂಭಿಸಿದೆ. ಬಳಗದಲ್ಲಿ ಸುಮಾರು 200 ಸದಸ್ಯರಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications