ಡರ್ಬಿಯಲ್ಲಿ 4ನೇ ಕನ್ನಡ ರಾಜ್ಯೋತ್ಸವದ ರಸನಿಮಿಷಗಳು
ಉಸಿರು ಕನ್ನಡ, ಹೆಸರು ಕನ್ನಡ, ಮಾತು ಕನ್ನಡ, ಮನಸು ಕನ್ನಡ, ಪ್ರೀತಿ ಕನ್ನಡ, ನೆನಪು ಕನ್ನಡ, ಮನುಷ್ಯತ್ವದಲ್ಲಿಯೂ ಕನ್ನಡದ ಕಂಪು... ಎಲ್ಲೆಲ್ಲೂ ಕನ್ನಡದ ಪೆಂಪು!
ಕನ್ನಡ ಮಾತಾಡುತ್ತ, ಕನ್ನಡದಲ್ಲಿಯೇ ಶುಭಾಶಯ ಕೋರುತ್ತ, ಕನ್ನಡವನ್ನೇ ಉಸಿರಾಡಿಸುತ್ತ, ಕನ್ನಡವನ್ನೇ ಹೃದಯದಲ್ಲಿ ತುಂಬಿಕೊಂಡು ಡರ್ಬಿಯಲ್ಲಿ ನೆಲೆಸಿರುವ ಕನ್ನಡಿಗರು ಡಿಸೆಂಬರ್ 9ರಂದು 62ನೇ ಕನ್ನಡ ರಾಜ್ಯೋತ್ಸವವನ್ನು ಹರ್ಷದಿಂದ ಆಚರಿಸಿದರು.

ನಡೆಯೋ ಪ್ರತಿ ಹೆಜ್ಜೆಯೂ ದಾರಿದೀಪ, ನಡತೆ ಅದರ ಸ್ವರೂಪ ಎನ್ನುವುದರ ಮೂಲಕ ದೀಪದ ಬೆಳಕಿನಲ್ಲಿಯೇ ನಮ್ಮ ನಮ್ಮ ವ್ಯಕ್ತಿತ್ವಗಳ ನಿಜವಾದ ಅನಾವರಣ ಆಗಬೇಕು ಎನ್ನುವುದರೊಂದಿಗೆ ಕರ್ನಾಟಕದ ಹಲವು ವೈಶಿಷ್ಟ್ಯ, ವೈವಿಧ್ಯಗಳ ಮೆಲುಕು ಹಾಕಲಾಯಿತು.
ಚೆಂದದ ನಾಡು, ಶ್ರೀಗಂಧದ ಬೀಡು, ರಸಋಷಿಗಳ ಗೂಡು, ಈ ಕನ್ನಡ ನಾಡು ಎನ್ನುತ್ತ, ಡರ್ಬಿಯಲ್ಲಿ 4ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಆತ್ಮೀಯರ ಆಗಮನದಿಂದ ಕಾರ್ಯಕ್ರಮಕ್ಕೆ ಮೆರುಗು ಬಂದಿತ್ತು. ಮಕ್ಕಳ ಹಾಗು ದೊಡ್ಡವರ ನೃತ್ಯ, ಯಕ್ಷಗಾನ, ಪಿಟೀಲು ವಾದನದಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಳೆಗಟ್ಟಿತ್ತು. ನೋಡುಗರು ಮೈಮರೆತು ಕುಣಿದು ಕುಪ್ಪಳಿಸಿದರು. ಹಾಡುಗಳೊಂದಿಗೆ ತಾವೂ ಹಾಡಿದರು, ನೃತ್ಯದೊಂದಿಗೆ ತಾವೂ ನರ್ತಿಸಿದರು.

ಕನ್ನಡದ ಕಂಪು ಸಾಗರದಾಚೆ ಝೇಂಕರಿಸಿದ, ಮೊಳಗಿದ ಸಂತಸ ಎಲ್ಲರಲ್ಲಿಯೂ ಮನೆಮಾಡಿತ್ತು. ಮರೆಯದ ಅನುಭವಗಳನ್ನು, ಕನ್ನಡ ರಾಜ್ಯೋತ್ಸವದ ರಸನಿಮಿಷಗಳನ್ನು ಎಲ್ಲರೂ ತುಂಬಿಕೊಂಡು, ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications