ಡರ್ಬಿಯಲ್ಲಿ 4ನೇ ಕನ್ನಡ ರಾಜ್ಯೋತ್ಸವದ ರಸನಿಮಿಷಗಳು
ಉಸಿರು ಕನ್ನಡ, ಹೆಸರು ಕನ್ನಡ, ಮಾತು ಕನ್ನಡ, ಮನಸು ಕನ್ನಡ, ಪ್ರೀತಿ ಕನ್ನಡ, ನೆನಪು ಕನ್ನಡ, ಮನುಷ್ಯತ್ವದಲ್ಲಿಯೂ ಕನ್ನಡದ ಕಂಪು... ಎಲ್ಲೆಲ್ಲೂ ಕನ್ನಡದ ಪೆಂಪು!
ಕನ್ನಡ ಮಾತಾಡುತ್ತ, ಕನ್ನಡದಲ್ಲಿಯೇ ಶುಭಾಶಯ ಕೋರುತ್ತ, ಕನ್ನಡವನ್ನೇ ಉಸಿರಾಡಿಸುತ್ತ, ಕನ್ನಡವನ್ನೇ ಹೃದಯದಲ್ಲಿ ತುಂಬಿಕೊಂಡು ಡರ್ಬಿಯಲ್ಲಿ ನೆಲೆಸಿರುವ ಕನ್ನಡಿಗರು ಡಿಸೆಂಬರ್ 9ರಂದು 62ನೇ ಕನ್ನಡ ರಾಜ್ಯೋತ್ಸವವನ್ನು ಹರ್ಷದಿಂದ ಆಚರಿಸಿದರು.

ನಡೆಯೋ ಪ್ರತಿ ಹೆಜ್ಜೆಯೂ ದಾರಿದೀಪ, ನಡತೆ ಅದರ ಸ್ವರೂಪ ಎನ್ನುವುದರ ಮೂಲಕ ದೀಪದ ಬೆಳಕಿನಲ್ಲಿಯೇ ನಮ್ಮ ನಮ್ಮ ವ್ಯಕ್ತಿತ್ವಗಳ ನಿಜವಾದ ಅನಾವರಣ ಆಗಬೇಕು ಎನ್ನುವುದರೊಂದಿಗೆ ಕರ್ನಾಟಕದ ಹಲವು ವೈಶಿಷ್ಟ್ಯ, ವೈವಿಧ್ಯಗಳ ಮೆಲುಕು ಹಾಕಲಾಯಿತು.
ಚೆಂದದ ನಾಡು, ಶ್ರೀಗಂಧದ ಬೀಡು, ರಸಋಷಿಗಳ ಗೂಡು, ಈ ಕನ್ನಡ ನಾಡು ಎನ್ನುತ್ತ, ಡರ್ಬಿಯಲ್ಲಿ 4ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಆತ್ಮೀಯರ ಆಗಮನದಿಂದ ಕಾರ್ಯಕ್ರಮಕ್ಕೆ ಮೆರುಗು ಬಂದಿತ್ತು. ಮಕ್ಕಳ ಹಾಗು ದೊಡ್ಡವರ ನೃತ್ಯ, ಯಕ್ಷಗಾನ, ಪಿಟೀಲು ವಾದನದಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಳೆಗಟ್ಟಿತ್ತು. ನೋಡುಗರು ಮೈಮರೆತು ಕುಣಿದು ಕುಪ್ಪಳಿಸಿದರು. ಹಾಡುಗಳೊಂದಿಗೆ ತಾವೂ ಹಾಡಿದರು, ನೃತ್ಯದೊಂದಿಗೆ ತಾವೂ ನರ್ತಿಸಿದರು.

ಕನ್ನಡದ ಕಂಪು ಸಾಗರದಾಚೆ ಝೇಂಕರಿಸಿದ, ಮೊಳಗಿದ ಸಂತಸ ಎಲ್ಲರಲ್ಲಿಯೂ ಮನೆಮಾಡಿತ್ತು. ಮರೆಯದ ಅನುಭವಗಳನ್ನು, ಕನ್ನಡ ರಾಜ್ಯೋತ್ಸವದ ರಸನಿಮಿಷಗಳನ್ನು ಎಲ್ಲರೂ ತುಂಬಿಕೊಂಡು, ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications