ರಾಜ್, ಉದಯಶಂಕರ್ ಇಂದೇನಾದರೂ ಇದ್ದಿದ್ದರೆ...

ಆ ಸೆಕೆಗೋ, ಟ್ರಾಫಿಕ್ ಜಾಮ್ಗೋ... ಸ್ವಲ್ಪ ತಲೆ ನೋವು ಬಂದಂತಾಗಿ, ಕೈಗೆ ಸಿಕ್ಕ "ಕನ್ನಡ ಹಾಡುಗಳು" ಎಂದು ಬರೆದಿದ್ದ ಸೀಡಿಯನ್ನು ಹಾಕಿ ಸಿಡಿ ಪ್ಲೇಯರ್ ಆನ್ ಮಾಡಿದ್ದೆ.
"ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ-ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ? ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?"
ಸಿ.ಅಶ್ವಥ್ ಅವರ ಸೊಗಸಾದ ಧ್ವನಿ ಸುರುಳಿಯಲ್ಲಿ ಕೇಳಿಬಂದ ಈ ಹಾಡಿಗೆ, ಅರ್ಥಗರ್ಭಿತವಾದ, ಆ ಹಾಡು ಕೇಳಿದೊಡನೆಯೇ ಹೆಣ್ಣು-ಸ್ತ್ರೀ ಅಂದರೆ ಮನದಲ್ಲೇ ಒಂದು ಗೌರವ, ಪೂಜ್ಯ ಭಾವನೆ ಬರುವಂತೆ.... ಸ್ತ್ರೀ ಅನ್ನು ಹೊಗಳಿರುವ ಅವರ ಪರಿ ಕೇಳಿ ಭಾವವಶನಾಗಿದ್ದೆ. ಎರಡೆರಡು ಬಾರಿ ಅದೇ ಹಾಡನ್ನು ರಿಪೀಟ್ ಮಾಡಿ ಕೇಳಿದ್ದೆ.
ಅಷ್ಟೊತ್ತಿಗೆ, ಹಿಂಬದಿಯಲ್ಲಿ ಅಜ್ಜಿಯ ಜೊತೆ ಕೂತಿದ್ದ 5 ವರ್ಷದ ಅಣ್ಣನ ಮಗಳು ಯಾವುದೋ ಹಾಡನ್ನು ಸಣ್ಣದಾಗಿ ಹೇಳುತ್ತಿದುದನ್ನು ನೋಡಿ, ಜೋರಾಗಿ ಹೇಳು ಪುಟ್ಟ.. ನಾವು ಕೇಳ್ತಿವಿ ಅಂದೊಡನೆಯೆ ಹಾಡು ಹೇಳಲು ಸ್ಟಾರ್ಟ್ ಮಾಡಿಯೇ ಬಿಟ್ಟಿದ್ದಳು!
"ಮೈ ನೇಮ್ ಬಸಂತಿ ..
ಬನ್ರೋಪ್ಪ ನನ್ನ ಬೆನ್ನತ್ತಿ!
ನೂರು ಬಾಯ್ ಫ್ರೆಂಡ್ಸ್
ಆರು ಹಸ್ಬೆಂಡ್ಸ್
ಓಡಿ ಹೋಗವ್ರೆ...ನಾನು ಏನು ತಾನೇ ಮಾಡ್ಲಿ ?"....ಬ್ಲಾ ಬ್ಲಾ ಬ್ಲಾ
ಹೇ.. ಹೇ.. ಸಾಕು ಮಾಡೇ ನಿನ್ನ ಈ ಒಂಚೂರು ಅರ್ಥ ಇಲ್ಲದ ಹಾಡನ್ನು, ಯಾರೇ ಹೇಳಿಕೊಟ್ಟಿದ್ದು ನಿಂಗೆ ಈ ಹಾಡನ್ನು ಅಂತಾ ಅಜ್ಜಿ ಗದರಿಯೇಬಿಟ್ಟಿದ್ದರು. ಯಾರು ಇಲ್ಲಜ್ಜಿ, ಇದು ಹೊಸ ಸಿನಿಮಾ "ಪ್ರೇಂ ಅಡ್ಡಾ"ದ ಹಾಡು (ಚಿತ್ರಗಳು), ನೀವೇ ಬೇಕಾದರೆ ಕೇಳಿ ಅಂತ ಯಾವುದು ಒಂದು ಸಿಡಿ ತೆಗೆದು, ಅಂಕಲ್ ಇದನ್ನು ಪ್ಲೇ ಮಾಡಿ ಅಂತ ಕೈಯಲ್ಲಿ ಇಟ್ಟೇ ಬಿಟ್ಟಿದ್ದಳು.
ಹಮ್... ಅಬ್ಬ ..ಈಗ ತಾನೇ ಹೆಣ್ಣನ್ನು ಸುಶೀಲತೆಯಿಂದ ವರ್ಣನೆ ಮಾಡಿದ ಆ ಹಾಡೆಲ್ಲಿ? ಹೆಣ್ಣು ಅಂದರೆ ಒಂದು ಭೋಗದ ವಸ್ತು ಅನ್ನೋ ಹಾಗೆ ವರ್ಣಿಸಿ, ಉತ್ತರ ಕರ್ನಾಟಕದ ಬೈಗುಳವನ್ನು ಸಹಾ ಹಾಡಿನಲ್ಲಿ ಸೇರಿಸಿ "ಸೂಪರ್ ಕ್ಯಾಚಿ ಸಾಂಗ್" ಅಂತಾ ಬರೀ ಅಶ್ಲೀಲತೆಯಿಂದ ವರ್ಣನೆ ಮಾಡಿದ ಈ ಹಾಡೆಲ್ಲಿ?
ಏನು ಕಾಲ ಕೆಟ್ಟು ಹೋಯಿತು? ಅರ್ಧ ಈ ಸಿನೆಮಾದೋರಿಂದಾನೆ... ನಮ್ಮ ಯುವಜನತೆ ಇರಲಿ, ಚಿಕ್ಕ ಮಕ್ಕಳು ಸಹಾ ಕೆಟ್ಟು ಅಡ್ಡ ದಾರಿ ಹಿಡಿತಾ ಇದ್ದಾರೆ. ಅದಕ್ಕೆ ದಿನ ಬೆಳಿಗ್ಗೆ ಎದ್ದು ನೋಡಿದರೆ ಅಲ್ಲಿ ಹೆಣ್ಣಿನ ಶೋಷಣೆ, ಇಲ್ಲಿ ಹೆಣ್ಣಿನ ಮಾನಭಂಗ, ಬರೀ ಇವೆ ನ್ಯೂಸ್ ಪೇಪರ್/ಟಿವಿಯಲ್ಲಿ ಹವಾಮಾನ ವೈಪರಿತ್ಯದ ಒಂದೆಡೆ ಇದ್ದರೆ, ಈ ಸಿನೆಮಾದೋರ ಕೆಟ್ಟ ಹಾಡುಗಳು ಬೇರೆ. ಕೆಟ್ಟಕಾಲ ಬರ್ತಾ ಇದೆ, ಇನ್ನು ಏನು ಗತಿ ಕಾದೈತೋ ದೇವರೇ ಬಲ್ಲ, ಅಂತಾ ಅಜ್ಜಿ ಬೈಗುಳ ಕೇಳಿ, ಸರಿಯಾಗಿ ಹೇಳಿದಿರಿ ಅಜ್ಜಿ ಎಂದು ನಾನು ಕೂಡ ತಲೆಯಾಡಿಸಿದ್ದೆ.
ಬೇಗನೆ ಹಣವನ್ನು ಕ್ಯಾಚ್ ಮಾಡಲಿಕ್ಕೊಸ್ಕರ ಹೆಚ್ಚು ಹೆಚ್ಚಾಗಿ ಈ ತರಹದ "ಕ್ಯಾಚಿ" ಸಾಂಗ್ಸ್ ಅನ್ನು ರಚಿಸಿ ಸಮಾಜವನ್ನು ಹದಗೆಡಿಸುತ್ತಿರುವುದನ್ನು ನೋಡಿದರೆ, ನೋಡುವ/ಕೇಳುವ ಜನರ ಟ್ರೆಂಡ್ ಚೇಂಜ್ ಆಗಿದಿಯೋ? ಅಥ್ವಾ ಈ ಸಿನೆಮಾದೋರ ಟ್ರೆಂಡ್ ಚೇಂಜ್ ಆಗಿದಿಯೋ? ಅಥವಾ ನಾವು ಚೇಂಜ್ ಆಗಬೇಕೋ? ಒಂದು ಅರಿಯದೆ ಸಿಡಿ ಪ್ಲೇಯರ್ ಬಂದ್ ಮಾಡಿದ್ದೆ.
"ಓ ಎಂಥ ಸೌಂದರ್ಯ ಕಂಡೆ ... ಓಓಓ ಎಂಥ ಸೌಂದರ್ಯ ಕಂಡೆ.. ಆದಿ ಶಕ್ತಿಯೋ, ಮಹಾಲಕ್ಷ್ಮಿಯೋ ..ವಾಣಿಯೋ ಕಾಣೆ ನಾ..." ಅಂತಾ ಹಾಡಿದ್ದ ನಮ್ಮ ಗಾನಗಂಧರ್ವ ಡಾ| ರಾಜ್ ಕುಮಾರ್, ಕನ್ನಡದ ಸುಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಹಾಡು ರಚಿಸುತ್ತಿದ್ದ ಸಾಹಿತ್ಯರತ್ನ ಚಿ.ಉದಯಶಂಕರ್ ಮೊದಲಾದವರು ಇಂದೇನಾದರೂ ಇದ್ದಿದ್ದರೆ...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications