ವಸಂತನ ಸ್ವಾಗತ ಕೋರಿದ ಕನೆಕ್ಟಿಕಟ್ ಕನ್ನಡಿಗರು
ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ, ಸಂಭ್ರಮದಿಂದ ಏಪ್ರಿಲ್ 28, ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ಹೊಯ್ಸಳ ಕನ್ನಡ ಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಯುಗಾದಿ-2012 ಕಾರ್ಯಕ್ರಮದಲ್ಲಿ ಸಡಗರ, ಸಂಭ್ರಮದಿಂದ ಭಾಗವಹಿಸಿದರು.
ಗಾಯತ್ರಿ ಭಟ್ ಮತ್ತು ಭಾಗ್ಯ ಕೊಮರ್ಲಾ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಈ ಯುಗಾದಿ ಕಾರ್ಯಕ್ರಮ ಸರಿಯಾಗಿ ಮಧ್ಯಾನ್ಹ 3.30ಕ್ಕೆ ಪ್ರಾರಂಭವಾಯಿತು. ಕನ್ನಡ ಕೂಟದ ಅಧ್ಯಕ್ಷ ವೇಣು ಗುಡ್ದೆರ ಎಲ್ಲರನ್ನು ಸ್ವಾಗತಿಸಿದರು. ಯಶವಂತ್ ಗಡ್ಡಿಯವರು ಹಾಡಿದ ಕನ್ನಡ ನಾಡಗೀತೆ "ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ಹಾಡತೊಡಗಿದರು.
ಪ್ರಿಯ ಹರ್ಯಾಡಿ ನಿರೂಪಣೆಯಲ್ಲಿ ನಡೆದ "ಹಲೋ ನಮಸ್ತೆ - ಮಕ್ಕಳ ಫ್ಯಾಷನ್ ಶೋ"ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ನಾವೇನು ದೊಡ್ದವರಿಗಿಂತ ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ವಿಧ ವಿಧದ ಬಟ್ಟೆಗಳನ್ನು ಧರಿಸಿ ಸೊಗಸಾಗಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ಶಾರದಾ ಭಟ್ ನಿರೂಪಣೆಯಲ್ಲಿ ಚಿಕ್ಕ ಪುಟಾಣಿಗಳು ಫ್ಯಾನ್ಸಿ ಡ್ರೆಸ್ ಹಾಕಿ ಬಂದಿದ್ದು ಎಲ್ಲರ ಮನ ಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು
* ಜಾಣ ಪುಟಾಣಿಗಳು - ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ - ಗುರುಶಿಷ್ಯರು ಚಲನಚಿತ್ರದ ಹಾಡಿಗೆ ಮಕ್ಕಳ ನೃತ್ಯ - ನಿರೂಪಣೆ ಸರಿತಾ ಸದಾನಂದ್ ಮತ್ತು ಸೌಮ್ಯ ಸುಂದರೇಶ್.
* ನಿಂಬೀಯ ಬನದ ಮ್ಯಾಗಲ - ಕೋಲಾಟ ನೃತ್ಯ - ನಿರೂಪಣೆ ಸ್ನೇಹ ಸೋಸಲೆ.
* ಶಾಂತಿ ಮಂತ್ರಂ - ಯೋಗ ನೃತ್ಯ - ನಿರೂಪಣೆ ರಶ್ಮಿ ರಾಮಲಿಂಗಯ್ಯ.
* ಪ್ರಚಂಡ ಪುಟಾಣಿಗಳಿಂದ ಕರಾಟೆ ನೃತ್ಯ - ನಿರೂಪಣೆ ಸ್ವರ್ಣ ಮೋದಿ ಮತ್ತು ವಿಶಾಖ್ ತಲಂಕಿ.
* ಹೊಸ ವರುಷಕ್ಕೆ ಹೊಸ ಹರುಷ - ಫಿಲಂ ಡಾನ್ಸ್ - ನಿರೂಪಣೆ ಪ್ರಿಯ ಹರ್ಯಾಡಿ ಮತ್ತು ರೂಪ ಕುಮಾರ್.
ಲಘು ವಿರಾಮದಲ್ಲಿ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಮೇಲೆ...
* ಮೇಲ್ಕೋಟೆ ರಾಮಸ್ವಾಮಿ ಅವರಿಂದ ಸೊಗಸಾದ ಭಕ್ತಿಗೀತೆಗಳು.
* ವಿಚಿತ್ರ ಮಂಜರಿ - 3 - ದಿನೇಶ್ ಹರ್ಯಾಡಿ ಮತ್ತು ತಂಡದವರಿಂದ.
* ಮಕ್ಕಳಿಂದ "ಆಲಸಿ ತೆನಾಲಿ ರಾಮನಲ್ಲಿ ಆದ ಪರಿವರ್ತನೆ" ಒಂದು ಚಿಕ್ಕ ನಾಟಕ - ನಿರೂಪಣೆ ಅಂಜು ಸೋಮನಾಥ್.
* ಲೈಫು ಇಷ್ಟೇನೆ - ಹೇಗೆ ಪ್ರಕೃತಿಯಲ್ಲಿ ಪ್ರತಿವರ್ಷವೂ ಲೈಫ್ ಸೈಕಲ್ ಬರುವುದೋ.. ಅದೇ ರೀತಿ ನಮ್ಮ ಮನುಜರ ಬಾಳಲ್ಲೂ... ಎಂಬ ಸುಂದರ ಸಾರಾಂಶವನ್ನು ಸಾರುವ "ಲೈಫು ಇಷ್ಟೇನೆ" ನೃತ್ಯ ಭರಿತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಎಲ್ಲರ ಮನ ಗೆದ್ದಿದ್ದು ಸುಂದರೇಶ್, ಸದಾನಂದ್, ರಘು, ಸಂತೋಷ್, ಶಶಿ ಹಾಗು ಅವರ ತಂಡದಿಂದ.
* ಹೃದಯಾಸೆ ಭಾಷೆ ಕನ್ನಡ - ಸಿನೆಮಾ ಸಾಹಿತ್ಯದಿಂದ ಶಿಲಾ ಶಾಸನದವರೆಗೆ... ಪ್ರೇಕ್ಷಕರೊಂದಿಗೆ ಪ್ರಶ್ನೋತ್ತರಗಳ ಸಂವಾದ. ನಿರೂಪಣೆ ಇಂದು ದೊಡ್ಡಮನೆ ಮತ್ತು ಯಶವಂತ್ ಗಡ್ಡಿಯವರಿಂದ.
ಮಲ್ಲಿ ನಾಟಕ : ನಾವು ಬಳ್ಳಾರಿ ಬಿಗ್ ಪೀಪಲ್, ನಾವು ಗಂಡೆದೆ ನಾಡು ಹುಬ್ಬಳ್ಳಿ ಮಂದಿ, ನಾವು ಬಿಜಾಪುರ ಮಂದಿ, ನಾವು ಬೆಂಗಳೂರು ಜನ, ನಾವು ಮಂಡ್ಯದ ಗಂಡುಗಳು... ಪ್ರಾತಿನಿಧ್ಯ ನಮಗೆ ಹೆಚ್ಚಿಗೆ ಕೊಡಬೇಕು ಅಂತ ನಡೆಯೋ ಒಳಜಗಳಗಳಲ್ಲಿ ಬಡವಾಗುತ್ತಿದೆ ಇಂದು ನಮ್ಮ ಕಸ್ತೂರಿ ಕನ್ನಡ. ಈ ಎಲ್ಲ ಒಳಜಗಳ, ಪ್ರತಿಷ್ಠೆ, ಬಿಗುಮಾನ ಬಿಟ್ಟು ಎಲ್ಲ ಕನ್ನಡಿಗರು ಒಗ್ಗೂಡಿ ಕನ್ನಡಕ್ಕಾಗಿ ದುಡಿದರೆ... ಆಗ "ಆಗುವುದು ನಮ್ಮ ಕನ್ನಡ ನಾಡು ಸಿರಿಗಂಧದ ಬೀಡು" ಎಂಬ ಸುಂದರ ಸಾರಾಂಶವುಳ್ಳ ಮಲ್ಲಿ ಸಣ್ಣಪ್ಪನವರ್ ನಿರ್ದೇಶನದಲ್ಲಿ "ಅಮೆರಿಕಾದಲ್ಲಿ 3D ಕನ್ನಡ ಕೂಟ" ನಾಟಕ ಭರ್ಜರಿಯಾಗಿ ಪ್ರದರ್ಶನಗೊಂಡಿತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್













Click it and Unblock the Notifications