ಕುಮಾರ್ ಮರ್ಡೂರ್ ಸಿಂಗಪುರದಲ್ಲಿ ಹರಿಸಿದ ಸಂಗೀತಸುಧೆ

ಕಾರ್ಯಕ್ರಮವನ್ನು ವಿಲಂಬಿತ ಲಯದಲ್ಲಿ ರಾಗ್ ಪೂರಿಯಾ ಧನಶ್ರೀಯ "ಆವತೊ ರಿತು ಮನ್" ಚೀಜ಼್ನೊಂದಿಗೆ ಪ್ರಾರಂಭಿಸಿದ ಮರ್ಡೂರ್ ಅವರು ನಂತರ ತೀನ್ ತಾಲ್ನಲ್ಲಿ "ಪಾಯಲಿಯಾ ಝನಕಾರ್" ಎಂಬ ಪ್ರಖ್ಯಾತ ಸಾಂಪ್ರದಾಯಿಕ ಬಂದಿಶ್ ಅನ್ನು ಪ್ರಸ್ತುತಪಡಿಸಿದರು. ಎರಡನೆಯದಾಗಿ ರಾಗ ನಾಯಕಿ ಕಾನಡಾದ ಸುಂದರ ರಚನೆಯೊಂದನ್ನು ಹಾಡಿದರು. ನಂತರ "ಮನ್ ಪೂಲಾ ಪೂಲಾ, ಕೈಸಾ ನಾತಾರೆ" ಎಂಬ ಕಬೀರ್ ಭಜನೆಯೊಂದನ್ನು ಮಾಂಡ್ ರಾಗದಲ್ಲಿ ದಿವ್ಯವಾಗಿ ಗಾಯನ ಮಾಡಿದ ಕುಮಾರ್, ಕಾರ್ಯಕ್ರಮವನ್ನು "ಹರೀ ಮೇರೋ ಜೀವನ್ ಪ್ರಾಣಾಧಾರ್" ಎಂಬ ಭಟಿಯಾರ್ ರಾಗದ ಸಂತ ಮೀರಾಳ ಭಕ್ತಿ ಪೂರ್ವಕ ಕೀರ್ತನೆಯೊಂದಿಗೆ ಸಂಪೂರ್ಣಗೊಳಿಸಿದರು.
ಸುಮಾರು ಒಂದೂವರೆ ತಾಸು ನಡೆದ ಈ ಕಾರ್ಯಕ್ರಮದಲ್ಲಿ ಧಾರವಾಡದ ಫಲವತ್ತಾದ ರಸ ಭೂಮಿಯಿಂದ ಬಂದ ಸಂಗೀತ ರತ್ನ, ಕಿರಾಣಾ ಘರಾನಾದ ಕುಮಾರ್ ಮರ್ಡೂರ್ ಅವರು ತಮ್ಮ ಸಿಹಿ ಕಂಠದಿಂದ ಅನೇಕ ತಾನ್ಗಳನ್ನು ಸುಲಲಿತವಾಗಿ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನ ತಣಿಸಿದರು. ಪ್ರೇಕ್ಷಕರ ಅಮೋಘ ಕರತಾಡನ ಕುಮಾರ್ ಮರ್ಡೂರ್ ಅವರ ಪಾಂಡಿತ್ಯಕ್ಕೆ ಹಾಗೂ ಸಿಂಗಪುರದ ಕಲಾರಸಿಕರ ಕಲಾಪ್ರೇಮಕ್ಕೆ ಹಿಡಿದ ಕನ್ನಡಿಯಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಮಾರ್ ಮರ್ಡೂರ್ ಅವರಿಗೆ ಪಕ್ಕವಾದ್ಯದಲ್ಲಿ ಜೊತೆ ನೀಡಿದವರು ಮಿಹಿರ್ ಕುಂಡು (ತಬಲ), ಜಸ್ರಾಜ್ ಶಿಂತ್ರೆ (ಹಾರ್ಮೋನಿಯಮ್) ಮತ್ತು ಕುಮಾರಿ ಪ್ರಿಯಾಂಕ (ತಾನ್ಪುರ).
ಕುಮಾರ್ ಮರ್ಡೂರ್ ಕಿರುಪರಿಚಯ : ಧಾರವಾಡದ ಕುಮಾರ್ ಮರ್ಡೂರ್ ಅವರಿಗೆ ಅವರ ತಂದೆ ಪಂಡಿತ್ ಸೋಮನಾಥ್ ಮರ್ಡೂರ್ ಅವರೇ ಮೊದಲ ಗುರು. ಪದ್ಮಭೂಷಣ ಡಾ. ಪುಟ್ಟರಾಜ್ ಗವಾಯಿ ಹಾಗೂ ಡಾ. ಬಸವರಾಜ್ ರಾಜಗುರು ಅವರ ಅಗ್ರ ಶಿಷ್ಯರಾದ ಸೋಮನಾಥ್ ಮರ್ಡೂರ್ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಿದ ಯುವಗಾಯಕರಾದ ಕುಮಾರ್ ಮರ್ಡೂರ್ ಅವರು ನಂತರ ದಿ. ಸವಾಯಿ ಗಂಧರ್ವರ ಶಿಷ್ಯ ಪಂಡಿತ್ ಫಿರೋಜ಼್ ದಸ್ತೂರ್ ಅವರ ಬಳಿ ವಿಧ್ಯುಕ್ತವಾಗಿ ಸಂಗೀತಾಭ್ಯಾಸ ಮಾಡಿದರು.
ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡದಲ್ಲಿ ಸಂಗೀತದ ಮಾಸ್ಟರ್ಸ್ ಡಿಗ್ರಿಯನ್ನು ಮುಗಿಸಿದ ಕುಮಾರ್ ಮರ್ಡೂರ್ ಅವರು ಪ್ರಸಕ್ತ ಕೋಲ್ಕತ್ತಾದ ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಕಿರಿಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಸಮ್ಮತ ಕಲಾವಿದರಾದ ಮರ್ಡೂರ್ ಅವರು ಸವಾಯಿ ಗಂಧರ್ವ ಭೀಮಸೇನ್ ಮಹೋತ್ಸವ 2011, ಸವಾಯಿ ಗಂಧರ್ವ ಹಬ್ಬ (ಕುಂದಗೋಳ, ಕರ್ನಾಟಕ), ಪಂಡಿತ್ ವಿಷ್ಣು ದಿಗಂಬರ್ ಜಯಂತಿ ಸಮಾರೋಹ (ನ್ಯೂಡೆಲ್ಲಿ) ಸೇರಿದಂತೆ ಹಲವಾರು ಪ್ರಮುಖ ಹಬ್ಬಗಳಲ್ಲಿ ಪ್ರದರ್ಶನ ನೀಡಿದ್ದು, ಅಮೇರಿಕ, ಮಲೇಶಿಯ ಮತ್ತು ಥೈಲ್ಯಾಂಡ್ಗಳಲ್ಲಿ ಕೂಡ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. (ಛಾಯಾಚಿತ್ರ: ವಸಂತ ಕುಲಕರ್ಣಿ, ಸಿಂಗಪುರ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications