ಒಮನ್ನಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ವಾದಿ ದರ್ಬಾತ್

ಅರಬ್ಬಿ ಭಾಷೆಯಲ್ಲಿ ವಾದಿ ಎಂದರೆ ಕಣಿವೆ ಪ್ರದೇಶ ಅಥವ ನದಿ ಪ್ರದೇಶ. ಹೆಚ್ಚು ಮಳೆ ಬಂದಾಗ ನೀರು ಹರಿಯುವ ಕಣಿವೆ ಪ್ರದೇಶವನ್ನು ವಾದಿ ಎಂದು ಕರೆಯುತ್ತಾರೆ. ಒಮಾನ್ ದೇಶದಲ್ಲಿ ಇಂತಹ ನೂರಾರು ವಾದಿಗಳಿವೆ. ಅತಿ ಹೆಚ್ಚು ಮಳೆ ಬಂದಾಗ ಈ ವಾದಿಗಳಲ್ಲಿ ನೀರು ಹರಿಯುತ್ತದೆ. ಇಂತಹ ಕೆಲ ವಾದಿಗಳು ಕೆಲ ಪ್ರದೇಶಗಳಲ್ಲಿ ಜಲಪಾತಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಪ್ರಕೃತಿ ನಿರ್ಮಿತ ಈ ಜಲಪಾತದ ಹೆಸರು ವಾದಿ ದರ್ಬಾತ್.
ವಾದಿ ದರ್ಬಾತ್ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿರುವ ಪ್ರದೇಶ. "ಸಲಾಲ" ದಿಂದ 50 ಕಿ.ಮೀ ದೂರದಲ್ಲಿದ್ದು "ತಾಖ" ಪಟ್ಟಣದಿಂದ "ಮಿರ್ಬಾತ್" ಪಟ್ಟಣ ಕಡೆ ಹೋಗುವ ರಸ್ತೆಯಲ್ಲಿ ಎಡಗಡೆ ವಾದಿ ದರ್ಬಾತ್ ಸಿಗುತ್ತದೆ. "ತಾಖ" ಪಟ್ಟಣದಿಂದ ಸುಮಾರು 7 ಕಿ.ಮೀ ದೂರದ ರಸ್ತೆಯಲ್ಲಿ ಕ್ರಮಿಸಿದರೆ ರಸ್ತೆಯ ಎಡಬದಿಯಲ್ಲಿ ಈ ಜಲಪಾತವನ್ನು ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ. ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ನಾವು ನೀರನ್ನು ಕಾಣಬಹುದು. ಸಾಮನ್ಯವಾಗಿ ಮಳೆಗಾಲವೆಂದರೆ ಇಲ್ಲಿ ಕರಿಯಲ್ಪಡುವ "ಕರೀಫ್ ಸೀಸನ್"ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ. ಆ ಸಮಯದಲ್ಲಿ ಕೆಲದಿನಗಳ ಮಟ್ಟಿಗೆ ನಾವು ಈ ಜಲಪಾತವನ್ನು ಕಾಣಬಹುದು.
ಅಂದಾಜು ನೂರು ಮೀಟರ್ ಉದ್ದವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚೆದುರಿ ಬೀಳುತ್ತಿರುವ ಸುಂದರ ನೋಟ. ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್ ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಇಡೀ ಒಮಾನ್ ನಲ್ಲಿ ಇತ್ತೀಚೆಗೆ ನವೆಂಬರ್ ಮಾಸದಲ್ಲಿ 2, 3 ಮತ್ತು 4ನೇ ದಿನಾಂಕದಂದು ಅತಿ ಹೆಚ್ಚಿನ ಮಳೆಯಾಯಿತು. ಆಗ ಬಹುತೇಕ ಎಲ್ಲ ವಾದಿಗಳು ತುಂಬಿ ಹರಿದು ಜನರಿಗೆ ಹೆಚ್ಚಿನ ನಷ್ಟ ಉಂಟಾಯಿತು. ಆದರೆ ಸಲಾಲ ಸುತ್ತ ಮುತ್ತಲಿನ ಮಳೆಯಿಂದಾಗಿ ವಾದಿ ದರ್ಬಾತ್ ಅತಿ ಸುಂದರ ಜಲಪಾತಕ್ಕೆ ಸಾಕ್ಷಿಯಾಯಿತು. ನೀರು ಹರಿಯುವುದಕ್ಕೆ ಶುರುವಾದಾಗಿನಿಂದ ಪ್ರತಿಯೊಬ್ಬರು ತಮ್ಮ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಜಲಪಾತ ನೋಡುವುದಕ್ಕೆ ಕರೆಯುವವರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದಾಗಿನಿಂದ ಮಸ್ಕತ್, ಸುರ್, ಸೋಹಾರ್, ನಿಜ್ವ ಮತ್ತು ಬರ್ಕಾ ಮುಂತಾದ ಪ್ರದೇಶಗಳಿಂದ ಜನರು ಸಾಲು ಸಾಲಾಗಿ ಬರುತ್ತಿದ್ದಾರೆ. ಮರಳುಗಾಡಿನ ಬಿಸಿಲಿಗೆ ಬೆಂದು ಹೋಗಿದ್ದ ಜನತೆ ಬದಲಾದ ಹವಾಮಾನದ ಕಂಪನ್ನು ಸವಿಯಲು, ಮಳೆ ಬೀಳುತಿದ್ದರೂ ಲೆಕ್ಕಿಸದೆ ಈ ಸುಂದರ ದೃಶ್ಯವನ್ನು ನೋಡಲು ಬರುತ್ತಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications