ಒಮನ್ನಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ವಾದಿ ದರ್ಬಾತ್

ಅರಬ್ಬಿ ಭಾಷೆಯಲ್ಲಿ ವಾದಿ ಎಂದರೆ ಕಣಿವೆ ಪ್ರದೇಶ ಅಥವ ನದಿ ಪ್ರದೇಶ. ಹೆಚ್ಚು ಮಳೆ ಬಂದಾಗ ನೀರು ಹರಿಯುವ ಕಣಿವೆ ಪ್ರದೇಶವನ್ನು ವಾದಿ ಎಂದು ಕರೆಯುತ್ತಾರೆ. ಒಮಾನ್ ದೇಶದಲ್ಲಿ ಇಂತಹ ನೂರಾರು ವಾದಿಗಳಿವೆ. ಅತಿ ಹೆಚ್ಚು ಮಳೆ ಬಂದಾಗ ಈ ವಾದಿಗಳಲ್ಲಿ ನೀರು ಹರಿಯುತ್ತದೆ. ಇಂತಹ ಕೆಲ ವಾದಿಗಳು ಕೆಲ ಪ್ರದೇಶಗಳಲ್ಲಿ ಜಲಪಾತಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಪ್ರಕೃತಿ ನಿರ್ಮಿತ ಈ ಜಲಪಾತದ ಹೆಸರು ವಾದಿ ದರ್ಬಾತ್.
ವಾದಿ ದರ್ಬಾತ್ ಒಮಾನ್ ದೇಶದ ಧೋಫಾರ್ ಪ್ರಾಂತ್ಯದಲ್ಲಿರುವ ಪ್ರದೇಶ. "ಸಲಾಲ" ದಿಂದ 50 ಕಿ.ಮೀ ದೂರದಲ್ಲಿದ್ದು "ತಾಖ" ಪಟ್ಟಣದಿಂದ "ಮಿರ್ಬಾತ್" ಪಟ್ಟಣ ಕಡೆ ಹೋಗುವ ರಸ್ತೆಯಲ್ಲಿ ಎಡಗಡೆ ವಾದಿ ದರ್ಬಾತ್ ಸಿಗುತ್ತದೆ. "ತಾಖ" ಪಟ್ಟಣದಿಂದ ಸುಮಾರು 7 ಕಿ.ಮೀ ದೂರದ ರಸ್ತೆಯಲ್ಲಿ ಕ್ರಮಿಸಿದರೆ ರಸ್ತೆಯ ಎಡಬದಿಯಲ್ಲಿ ಈ ಜಲಪಾತವನ್ನು ಕಾಣಬಹುದು. ಈ ಜಲಪಾತದಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ. ಆದರೆ ಧೋಫಾರ್ ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚು ಮಳೆಯಾದಾಗ ನಾವು ನೀರನ್ನು ಕಾಣಬಹುದು. ಸಾಮನ್ಯವಾಗಿ ಮಳೆಗಾಲವೆಂದರೆ ಇಲ್ಲಿ ಕರಿಯಲ್ಪಡುವ "ಕರೀಫ್ ಸೀಸನ್"ನಲ್ಲಿ ಮಾತ್ರ ಸ್ವಲ್ಪ ಜಾಸ್ತಿ ಮಳೆಯಾಗುತ್ತದೆ. ಆ ಸಮಯದಲ್ಲಿ ಕೆಲದಿನಗಳ ಮಟ್ಟಿಗೆ ನಾವು ಈ ಜಲಪಾತವನ್ನು ಕಾಣಬಹುದು.
ಅಂದಾಜು ನೂರು ಮೀಟರ್ ಉದ್ದವಿರುವ ಈ ಜಲಪಾತ ನಾಲ್ಕೈದು ಕವಲಾಗಿ ಒಡೆದು ನೀರು ಕೆಳಗೆ ಬೀಳುತ್ತದೆ. ಕಡಿದಾದ ಬಂಡೆಯನ್ನು ಸುತ್ತುವರಿದಿರುವ ಹಚ್ಚ ಹಸಿರು ಮರಗಿಡಗಳ ನಡುವೆ ಬಾಗಿ ಬಳುಕುತ್ತಾ ಧುಮುಕುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚೆದುರಿ ಬೀಳುತ್ತಿರುವ ಸುಂದರ ನೋಟ. ಎಷ್ಟೊಂದು ಜಲಧಾರೆಗಳು ಅದನ್ನು ನೋಡಿಯೇ ಸೌಂದರ್ಯವನ್ನು ಸವಿಯಬೇಕು. ಈ ವಾದಿ ದರ್ಬಾತ್ ಪೂರ್ವಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಇಡೀ ಒಮಾನ್ ನಲ್ಲಿ ಇತ್ತೀಚೆಗೆ ನವೆಂಬರ್ ಮಾಸದಲ್ಲಿ 2, 3 ಮತ್ತು 4ನೇ ದಿನಾಂಕದಂದು ಅತಿ ಹೆಚ್ಚಿನ ಮಳೆಯಾಯಿತು. ಆಗ ಬಹುತೇಕ ಎಲ್ಲ ವಾದಿಗಳು ತುಂಬಿ ಹರಿದು ಜನರಿಗೆ ಹೆಚ್ಚಿನ ನಷ್ಟ ಉಂಟಾಯಿತು. ಆದರೆ ಸಲಾಲ ಸುತ್ತ ಮುತ್ತಲಿನ ಮಳೆಯಿಂದಾಗಿ ವಾದಿ ದರ್ಬಾತ್ ಅತಿ ಸುಂದರ ಜಲಪಾತಕ್ಕೆ ಸಾಕ್ಷಿಯಾಯಿತು. ನೀರು ಹರಿಯುವುದಕ್ಕೆ ಶುರುವಾದಾಗಿನಿಂದ ಪ್ರತಿಯೊಬ್ಬರು ತಮ್ಮ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಜಲಪಾತ ನೋಡುವುದಕ್ಕೆ ಕರೆಯುವವರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದಾಗಿನಿಂದ ಮಸ್ಕತ್, ಸುರ್, ಸೋಹಾರ್, ನಿಜ್ವ ಮತ್ತು ಬರ್ಕಾ ಮುಂತಾದ ಪ್ರದೇಶಗಳಿಂದ ಜನರು ಸಾಲು ಸಾಲಾಗಿ ಬರುತ್ತಿದ್ದಾರೆ. ಮರಳುಗಾಡಿನ ಬಿಸಿಲಿಗೆ ಬೆಂದು ಹೋಗಿದ್ದ ಜನತೆ ಬದಲಾದ ಹವಾಮಾನದ ಕಂಪನ್ನು ಸವಿಯಲು, ಮಳೆ ಬೀಳುತಿದ್ದರೂ ಲೆಕ್ಕಿಸದೆ ಈ ಸುಂದರ ದೃಶ್ಯವನ್ನು ನೋಡಲು ಬರುತ್ತಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications