ಕೆಕೆಎನ್ ಸಿಯಿಂದ ಮಕ್ಕಳಿಗಾಗಿ 'ಪ್ರೇರಣ' ನಿಧಿ ಸಂಗ್ರಹ

ಈ ಕಾರ್ಯಕ್ರಮದಿಂದ ಬರುವ ಸಂಪೂರ್ಣ ಹಣವನ್ನು ಬೇ ಏರಿಯಾದಲ್ಲಿರುವ, ಈ ದೇಶದ ದೊಡ್ಡ ಹಾಗು ವಿಶೇಷವಾಗಿ ಉಚಿತ ಚಿಕಿತ್ಸೆ ಮಾಡುವ ಈ ಆಸ್ಪತ್ರೆಗೆ ನೀಡುವ ನಿರ್ಧಾರ ಮಾಡಲಾಗಿದೆ. ದೇಶ ವಿದೇಶದಿಂದ ಹಲವಾರು ಕಾರಣದಿಂದ ಚಿಕಿತ್ಸೆಗೆ ಬರುವ ಮಕ್ಕಳಿಗೆ ಈ ಆಸ್ಪತ್ರೆಯಲ್ಲಿ ವಿಶೇಷ ಹಾಗು ಅತಿ ಸೂಕ್ಷ್ಮ ಚಿಕಿತ್ಸೆ ಮತ್ತೆ ಪರಿಹಾರ ನೀಡಲಾಗುತ್ತದೆ. ದೇಶದ ಆರ್ಥಿಕ ಹಿನ್ನೆಡೆಯಿಂದ ಆಸ್ಪತ್ರೆಗೆ ವಿಶೇಷ ನೆರವಿನ ಅವಶ್ಯಕತೆ ಇದ್ದಿದರಿಂದ ಈ ಒಂದು ಕಾರ್ಯಕ್ರಮದಿಂದ ಚಿಕ್ಕ ಸಹಾಯ ಮಾಡುವ ಪ್ರಯತ್ನ ಕೆ.ಕೆ.ಎನ್.ಸಿ ಯದಾಗಿದೆ.
ಪ್ರೇರಣ ಕಾರ್ಯಕ್ರಮ ಬೇ ಏರಿಯಾದ ಸಂಗೀತ ರಸಿಕರ ದೃಷ್ಟಿಯಿಂದಲೂ ವಿಶೇಷವಾಗಲಿದೆ. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಪಂಡಿತ್ ಹಬಿಬ್ ಖಾನ್, ಮಾಥಿವ್ ಮೊಂಟ್ಫೋರ್ಟ್, ಜಾರ್ಜ ಬ್ರೂಕ್ಸ್, ಸತೀಶ್ ತಾರೆ ಹಾಗು ರಮೇಶ್ ಶ್ರೀನಿವಾಸನ್ ಇವರಿಂದ ಪೂರ್ವ ಹಾಗು ಪಾಶ್ಚಾತ್ಯ ಸಂಗೀತದ ಭರ್ಜರಿ ವಾದ್ಯಗೋಷ್ಠಿಯನ್ನು ನಿರೀಕ್ಷಿಸಬಹುದು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಹಾಗು ಕನ್ನಡಿಗ ಡಾ.ಸಂಜಯ್ ಶಾಂತಾರಾಮ್ ಹಾಗು ಸುಪ್ರಿಯ ದೇಸಾಯಿ ನಿರ್ದೇಶನದ ಪ್ರಸಿದ್ಧ "ಅಲಾದ್ದೀನ್" ನೃತ್ಯರೂಪಕ ಕೂಡ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನೃತ್ಯಗಾರರು ಭಾಗವಹಿಸುತ್ತಿದ್ದಾರೆ.
"ಈ ವಿಶೇಷ ಕಾರ್ಯಕ್ರಮಕ್ಕೆ ದೇಶದ ನಾನಾ ಭಾಗದಿಂದ ಜನರು ಬಂದು ಪಾಲ್ಗೊಳ್ಳಲಿದ್ದಾರೆ. ಹಯ್ವರ್ಡಿನ ಚಬೋತ್ ಕಾಲೇಜ್ ನಲ್ಲಿ ನಡೆಯುವ ಈ ಕಾರ್ಯಕ್ರಮ ವೀಕ್ಷಿಸಲು ಸುಮಾರು 1500 ಜನರಿಗೆ ಅವಕಾಶವಿದೆ. ಈ ಕಾರ್ಯಕ್ರಮದ ಪ್ರಚಾರ, ಟಿಕೆಟ್ ಮಾರಾಟ ಭರ್ಜರಿಯಾಗಿ ಸಾಗಿದೆ. "ಥ್ಯಾಂಕ್ಸ್ ಗಿವಿಂಗ್" ನಿಮಿತ್ತ ಪ್ರೇರಣ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮದ ನಿಯೋಜನೆ ಹಾಗು ಮಕ್ಕಳ ಆಸ್ಪತ್ರೆಗೆ ದಾನ - ನವೆಂಬರ್ ನ ಈ ತಿಂಗಳಲ್ಲಿ ಕನ್ನಡಿಗರಾಗಿ ನಾವು ಮಾಡುತ್ತಿರುವುದು ಅಭಿಮಾನದ ಸಂಗತಿ.
ನೀವು ಟಿಕೆಟ್ ಕೊಳ್ಳಬೇಕಿದ್ದಲ್ಲಿ ಅಥವಾ ದಾನ ಮಾಡಬೇಕಿದ್ದಲ್ಲಿ ಜಾಲತಾಣ www.kknc.org ವೀಕ್ಷಿಸಲು ಮರೆಯದಿರಿ. ಹೆಚ್ಚಿನ ಮಾಹಿತಿಗೆ 510-586-3378ಗೆ ಕರೆ ನೀಡಿ" ಎಂದು ಕೆ.ಕೆ.ಎನ್.ಸಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಭಿಜೀತ್ ಪ್ರಹ್ಲಾದ್ ತಿಳಿಸಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications