ಸಿಂಗಪುರದಲ್ಲಿ ಪ್ರತಿಧ್ವನಿಸಿದ ಅಣ್ಣಾ ಹಜಾರೆ ಗುಡುಗು

* ಆಣ್ಣಾ ಹಜಾರೆಯವರ ಆಂದೋಲನ ಸರಿಯಾಗಿದೆ. ಭಯಂಕರವಾಗಿ ಹರಡಿರುವ ಭ್ರಷ್ಟಾಚಾರದ ವಿರುದ್ಧ ಎದ್ದು ನಿಂತಿರುವ 74ರ 'ಯುವಕ'ನಿಗೆ ಎಲ್ಲರ ಬೆಂಬಲ ದೊರೆಯಲೇಬೇಕು. ಜನ ಲೋಕಪಾಲ ಮಸೂದೆ ಜಾರಿಗೆ ಬರಬೇಕು.
* ಆಣ್ಣಾ ಹಜಾರೆಯವರ ನಿಲುವು ತಾತ್ವಿಕ ನೆಲೆಗಟ್ಟಿನಲ್ಲಿ ಸರಿಯಾಗಿದೆ, ಆದರೆ ಅವರ ಜನ ಲೋಕಪಾಲ ವರದಿ ಜಾರಿಗೆ ಬರಲೇಬೇಕೆಂಬುದು ಸಾಂವಿಧಾನಿಕವಾಗಿ ಸರಿಯಾಗಿಲ್ಲ. ಮಸೂದೆಯನ್ನು ಜಾರಿಗೊಳಿಸುವ ಕೆಲಸ ಜನಪ್ರತಿನಿಧಿಗಳದ್ದು. ಅಣ್ಣಾ ಅವರಂತಹ ಪ್ರತ್ಯೇಕ ವ್ಯಕ್ತಿಗಳದ್ದಲ್ಲ.
* ಈ ತರಹದ ಮಸೂದೆಗಳಿಂದ ಏನೂ ಪ್ರಯೋಜನವಿಲ್ಲ. ಭ್ರಷ್ಟರು ಇದರಲ್ಲಿಯೂ ಸಹ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಿ ತಮ್ಮ ಭ್ರಷ್ಟ ವ್ಯವಹಾರಗಳನ್ನು ಮುಂದುವರೆಸುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ಭ್ರಷ್ಟಾಚಾರದ ಕರಾಳ ಹಸ್ತಗಳು ಭಾರತದ ಎಲ್ಲೆಡೆ ಹರಡಿ ಭಾರತದ ಸಾರ್ವತ್ರಿಕ ಪ್ರಗತಿಗೆ ಮುಖ್ಯ ಬಾಧಕವಾಗಿ ನಿಂತಿದೆ. ಸರಕಾರದ ಅತ್ಯಂತ ಕೆಳಗಿನ ಸ್ತರದಿಂದ ತೀರ ಮೇಲಿನ ಸ್ತರಗಳವರೆಗೆ ಹರಡಿರುವ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಕತ್ತರಿಸುವದರ ಬಗ್ಗೆ ಎಲ್ಲರದೂ ಏಕಾಭಿಪ್ರಾಯವಾಗಿದ್ದರೂ ಅಣ್ಣಾ ಅವರ ಜನ ಲೋಕಪಾಲ ಮಸೂದೆಯ ಕರಡು ಮತ್ತು ಅದನ್ನು ಜಾರಿಗೊಳಿಸಲು ಆಗ್ರಹಿಸಿ ಅವರು ಹೂಡಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲ ಮತ್ತು ಸಂಶಯ ಉಂಟಾಗಿರುವದು ಕಂಡು ಬರುತ್ತದೆ.
ಈ ಗೊಂದಲದ ಮುಖ್ಯ ಮೂಲ ಜನರಿಂದ ಚುನಾಯಿತ ಪ್ರತಿನಿಧಿಗಳಲ್ಲದವರು ಭ್ರಷ್ಟಾಚಾರ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು, ಸರಕಾರವನ್ನು ಆಗ್ರಹಿಸುವುದು, ಉಪವಾಸ ಸತ್ಯಾಗ್ರಹ ಮಾಡಿ ಸರಕಾರವನ್ನು ಬ್ಲಾಕ್ ಮೇಲ್ ಮಾಡುವದು ಸರಿಯೇ ಎಂಬ ಪ್ರಶ್ನೆ ಮತ್ತು ಸಂಶಯದ ಮುಖ್ಯ ಮೂಲ, ಯಾವ ತರಹದ ಕಾಯಿದೆಯಾದರೂ ಭ್ರಷ್ಟಾಚಾರವನ್ನು ಮಟ್ಟಗೊಳಿಸುವದು ಸಾಧ್ಯವೇ ಎಂಬ ನಿರಾಶೆಯ ಭಾವದಲ್ಲಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications