ಸಿಂಗಪುರದಲ್ಲಿ ಪ್ರತಿಧ್ವನಿಸಿದ ಅಣ್ಣಾ ಹಜಾರೆ ಗುಡುಗು

* ಆಣ್ಣಾ ಹಜಾರೆಯವರ ಆಂದೋಲನ ಸರಿಯಾಗಿದೆ. ಭಯಂಕರವಾಗಿ ಹರಡಿರುವ ಭ್ರಷ್ಟಾಚಾರದ ವಿರುದ್ಧ ಎದ್ದು ನಿಂತಿರುವ 74ರ 'ಯುವಕ'ನಿಗೆ ಎಲ್ಲರ ಬೆಂಬಲ ದೊರೆಯಲೇಬೇಕು. ಜನ ಲೋಕಪಾಲ ಮಸೂದೆ ಜಾರಿಗೆ ಬರಬೇಕು.
* ಆಣ್ಣಾ ಹಜಾರೆಯವರ ನಿಲುವು ತಾತ್ವಿಕ ನೆಲೆಗಟ್ಟಿನಲ್ಲಿ ಸರಿಯಾಗಿದೆ, ಆದರೆ ಅವರ ಜನ ಲೋಕಪಾಲ ವರದಿ ಜಾರಿಗೆ ಬರಲೇಬೇಕೆಂಬುದು ಸಾಂವಿಧಾನಿಕವಾಗಿ ಸರಿಯಾಗಿಲ್ಲ. ಮಸೂದೆಯನ್ನು ಜಾರಿಗೊಳಿಸುವ ಕೆಲಸ ಜನಪ್ರತಿನಿಧಿಗಳದ್ದು. ಅಣ್ಣಾ ಅವರಂತಹ ಪ್ರತ್ಯೇಕ ವ್ಯಕ್ತಿಗಳದ್ದಲ್ಲ.
* ಈ ತರಹದ ಮಸೂದೆಗಳಿಂದ ಏನೂ ಪ್ರಯೋಜನವಿಲ್ಲ. ಭ್ರಷ್ಟರು ಇದರಲ್ಲಿಯೂ ಸಹ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಿ ತಮ್ಮ ಭ್ರಷ್ಟ ವ್ಯವಹಾರಗಳನ್ನು ಮುಂದುವರೆಸುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ಭ್ರಷ್ಟಾಚಾರದ ಕರಾಳ ಹಸ್ತಗಳು ಭಾರತದ ಎಲ್ಲೆಡೆ ಹರಡಿ ಭಾರತದ ಸಾರ್ವತ್ರಿಕ ಪ್ರಗತಿಗೆ ಮುಖ್ಯ ಬಾಧಕವಾಗಿ ನಿಂತಿದೆ. ಸರಕಾರದ ಅತ್ಯಂತ ಕೆಳಗಿನ ಸ್ತರದಿಂದ ತೀರ ಮೇಲಿನ ಸ್ತರಗಳವರೆಗೆ ಹರಡಿರುವ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಕತ್ತರಿಸುವದರ ಬಗ್ಗೆ ಎಲ್ಲರದೂ ಏಕಾಭಿಪ್ರಾಯವಾಗಿದ್ದರೂ ಅಣ್ಣಾ ಅವರ ಜನ ಲೋಕಪಾಲ ಮಸೂದೆಯ ಕರಡು ಮತ್ತು ಅದನ್ನು ಜಾರಿಗೊಳಿಸಲು ಆಗ್ರಹಿಸಿ ಅವರು ಹೂಡಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲ ಮತ್ತು ಸಂಶಯ ಉಂಟಾಗಿರುವದು ಕಂಡು ಬರುತ್ತದೆ.
ಈ ಗೊಂದಲದ ಮುಖ್ಯ ಮೂಲ ಜನರಿಂದ ಚುನಾಯಿತ ಪ್ರತಿನಿಧಿಗಳಲ್ಲದವರು ಭ್ರಷ್ಟಾಚಾರ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು, ಸರಕಾರವನ್ನು ಆಗ್ರಹಿಸುವುದು, ಉಪವಾಸ ಸತ್ಯಾಗ್ರಹ ಮಾಡಿ ಸರಕಾರವನ್ನು ಬ್ಲಾಕ್ ಮೇಲ್ ಮಾಡುವದು ಸರಿಯೇ ಎಂಬ ಪ್ರಶ್ನೆ ಮತ್ತು ಸಂಶಯದ ಮುಖ್ಯ ಮೂಲ, ಯಾವ ತರಹದ ಕಾಯಿದೆಯಾದರೂ ಭ್ರಷ್ಟಾಚಾರವನ್ನು ಮಟ್ಟಗೊಳಿಸುವದು ಸಾಧ್ಯವೇ ಎಂಬ ನಿರಾಶೆಯ ಭಾವದಲ್ಲಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications