ಸ್ಕಾಟ್ಲಂಡ್ ಕರ್ನಾಟಕ ಸಂಘದ ಕನ್ನಡ ಡಿಂಡಿಮ

2001ರಲ್ಲಿ ಆರಂಭಗೊಂಡ ಸಂಘ, ಸ್ಕಾಟ್ಲಂಡಿನಲ್ಲಿ ಕನ್ನಡದ ಕಂಪನ್ನು ಬೀರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವರ್ಷದಲ್ಲಿ ಎರಡು ಪ್ರಮುಖ (ಉಗಾದಿ ಮತ್ತು ದೀಪಾವಳಿ) ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಜನತೆಯನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದೆ. ಸ್ಕಾಟ್ಲಂಡಿನ ಸುತ್ತಮುತ್ತಲಿನ ಕರ್ನಾಟಕದ ಜನರು ಈ ಕಾರ್ಯಕ್ರಮವನ್ನು ಪ್ರೊತ್ಸಾಹಿಸಬೇಕೆಂದು ಸಂಘದ ಕಾರ್ಯಕರ್ತರು ದಟ್ಸ್ ಕನ್ನಡ ಮೂಲಕ ವಿನಂತಿಸಿಕ್ಕೊಳ್ಳುತ್ತಿದ್ದಾರೆ.
ಕಾರ್ಯಕ್ರಮದ ದಿನ ಮತ್ತು ಜಾಗ ನೆನಪಿರಲಿ
ಶನಿವಾರ : 27 ನವೆಂಬರ್, 2010
ಸಮಯ : ಮಧ್ಯಾಹ್ನ 3ರಿಂದ 9
ಜಾಗ : Westerton Hall, 84, Maxwell Avenue, Bearsden, GLASGOW – G61 1NZ.
ಕರ್ನಾಟಕದ ನಾಡು ನುಡಿಯ ಮೇಲಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಕಾಟ್ಲಂಡಿನ ಕರ್ನಾಟಕ ಪ್ರೇಮಿಗಳು ತಮ್ಮ ಪ್ರತಿಭೆಯ ಮೂಲಕ ಪರಿಚಯಿಸಲಿದ್ದಾರೆ.
ಮುಖ್ಯ ಕಾರ್ಯಕ್ರಮದ ವಿವರ ಹೀಗಿದೆ
* ಲಕ್ಷ್ಮಿ ಪೂಜೆ
* ಸ್ಕಾಟಿಶ್ ಕರ್ನಾಟಕ ಸಂಘದ ವೆಬ್ ಸೈಟ್ ಪರಿಚಯ
* ಕನ್ನಡ ಭಾವಗೀತೆ ಮತ್ತು ನೃತ್ಯ
* ಕನ್ನಡ ಹಾಸ್ಯ ತುಣುಕುಗಳು
* ಮಕ್ಕಳ ವಿಶೇಷ ಕಾರ್ಯಕ್ರಮಗಳು ಹಾಗು ಚಿಣ್ಣರಿಗಾಗಿ ಆಟಗಳು
* ಕನ್ನಡ ರಸ ಪ್ರಶ್ನೆ ಮತ್ತು ಆಂತ್ಯಾಕ್ಷರ
* ಹಬ್ಬದ ಭೋಜನ
ಕಾರ್ಯಕ್ರಮಕ್ಕೆ 10 ಪೌಂಡು ಹಾಗು 5 ವರುಷ ಮೇಲಿನ ಮಕ್ಕಳಿಗೆ ಮತ್ತು ವಿದ್ಯಾರ್ಥಿ ಮಿತ್ರರಿಗೆ 5 ಪೌಂಡು ನಿಗದಿಪಡಿಸಲಾಗಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಘದ ಮಿತ್ರರನ್ನು ಸಂಪರ್ಕಿಸಿ.
ಡಾ.ಪ್ರಭಾಕರ ಭಟ್ಟ್ - [email protected]
ಡಾ.ಜೈರಾಮ್ ಶಾಸ್ತ್ರಿ - [email protected]
ಶಶಿಧರ ರಾಮಚಂದ್ರ - [email protected]
ಪ್ರೇಮ್ ಕುಮಾರ್ - [email protected]
ಗಂಗಾಧರ ಆಲದಕಟ್ಟಿ - [email protected]
ಮಹೇಶ ಮಧ್ಯಸ್ಥ - [email protected]
ನಿಮಗೆ ಪರಿಚಯವಿರುವ ಸ್ನೇಹಿತರಿಗೆ ವಿಷಯ ಮುಟ್ಟಿಸಿ. ಆಭಿಮಾನಿಗಳೆಲ್ಲಾ ಬಂದು, ಸ್ಕಾಟ್ಲಂಡಿನ ಕರ್ನಾಟಕ ಜನರನ್ನು ಬೆಸೆಯುವ ಸಂಕಲ್ಪಕ್ಕೆ ಟೊಂಕ ಕಟ್ಟಿರುವ ಸಂಘದ ಕೈಗಳಿಗೆ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications