ಅಟ್ಲಾಂಟದಲ್ಲಿ ನಮಿತಾ, ಗಣೇಶ್ ದೇಸಾಯಿ ಗಾನಸುಧೆ

ಕರ್ನಾಟಕದಲ್ಲಿ ಈಗಾಗಲೇ "ಮೂಡಲಮನೆ" ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನಮಿತಾ ದೇಸಾಯಿಯವರ ಕಿರುಪರಿಚಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗಣೇಶನಮನದಿಂದ ಪ್ರಾರಂಭವಾದ ಅವರ ನೃತ್ಯ ಕಾರ್ಯಕ್ರಮ 50 ನಿಮಿಷಗಳ ಕಾಲ ಆಬಾಲವೃದ್ಧರಾಗಿ ಎಲ್ಲರನ್ನೂ ಹಿಡಿದಿಟ್ಟು ಎಲ್ಲರ ಮನ ರಂಜಿಸಿತು. ಶೃಂಗಾಪುರಾಧೀಶ್ವರಿ ಶಾರದೆಯಾಗಿ ಒಮ್ಮೆ ಮೈತಳೆದರೆ ಮತ್ತೊಮ್ಮೆ ಕಡಗೋಲನ್ನು ಪುಟ್ಟ ಕೃಷ್ಣನ ಕೈಯಿಂದ ಬೇಡುವ ತಾಯಿ ಯಶೋದೆಯಾಗಿ ಅತ್ಯಂತ ಸುಲಭವಾಗಿ ಪರಕಾಯ ಪ್ರವೇಶ ಮಾಡಿದರು.
ಅಲ್ಲದೆ ವೀಕ್ಷಕರನ್ನು ಸಹ ತಮ್ಮ ಅಭಿನಯದ ಮೂಲಕ ತಮ್ಮ ಲೋಕಕ್ಕೆ ಸೆಳೆದೊಯ್ದರು. ಹೆಚ್ಚಿನ ನೃತ್ಯಗಳ ನೃತ್ಯ ಸಂಯೋಜನೆ ನಮಿತಾ ದೇಸಾಯಿಯವರ ಗುರು ಶ್ರೀಮತಿ ಭಾನುಮತಿಯವರದ್ದಾಗಿತ್ತು. ಗಣೇಶ್ ದೇಸಾಯಿಯವರು ಹಾಡಿದ "ಉತ್ತಮರ ಸಂಗ ಎನಗಿತ್ತು ಸಲಹೋ" ಕೃತಿಗೆ ಸ್ವತಃ ತಾವೇ ನೃತ್ಯ ಸಂಯೋಜಿಸಿದ್ದ ನಮಿತಾ ದೇಸಾಯಿಯವರು ಅದನ್ನು ನರ್ತಿಸಿದಾಗ ದಾಸರ ಮನಸ್ಸಿನ ಭಾವ ಸಂಪೂರ್ಣವಾಗಿ ಹೊರಬಂದಿತ್ತು.

"ಮಂಕುತಿಮ್ಮನ ಕಗ್ಗ" ದಿಂದ ಸಾಕಷ್ಟು ಕಗ್ಗಗಳನ್ನು ಹಾಡಿ ನಡುವೆ ಐರಸಂಗ ಅವರ ಕೆಲವು ಕವಿತೆಗಳನ್ನು ಉದಾಹರಿಸಿ ಉತ್ತಮ ಸಾಹಿತ್ಯಕ್ಕೆ ಇರುವ ಶಕ್ತಿಯ ಬಗ್ಗೆ ಮಾತನಾಡಿದರು. ಜನರನ್ನು ಒಳ್ಳೆಯ ಕನ್ನಡ ಸಾಹಿತ್ಯದ ಕಡೆ ಸೆಳೆಯುವ ಬಗ್ಗೆ ಅವರ ಆಸಕ್ತಿ ಇದೆಯೆಂದು ಇದರಿಂದ ತಿಳಿಯುತ್ತದೆ. ಅವರೇ ರಾಗ ಸಂಯೋಜಿಸಿದ ಜೋ ಜೋ ಶ್ರೀ ಕೃಷ್ಣ ಹಾಡಿದಾಗ ಜನರೆಲ್ಲ ಸಮ್ಮೋಹಶಕ್ತಿಗೆ ಒಳಗಾದವರಂತೆ ತಲೆಯಾಡಿಸುತ್ತಿದ್ದರು. ಸಭೆಯಲ್ಲಿದ್ದ ಕೆಲವು ಮಕ್ಕಳು ನಿಜವಾಗಿಯೂ ನಿದ್ದೆ ಹೋದರು. ಚಕೋರಂಗೆ ಚಂದ್ರಮನ ವಚನ ಮತ್ತು ಎದೆ ತುಂಬಿ ಹಾಡುವೆನು ಹಾಡಿನ ಮೂಲಕ ಕಾರ್ಯಕ್ರಮ ಮುಗಿಸಿದರು. ಆದರೆ ಕೇಳುಗರು ಯಾರಿಗೂ ತಮ್ಮ ಕುರ್ಚಿ ಬಿಟ್ಟೇಳುವ ಮನಸ್ಸೇ ಇರಲಿಲ್ಲ.
ಗಣೇಶ್ ದೇಸಾಯಿಯವರಿಗೆ ಅಮೋಘವಾಗಿ ತಬಲಾ ಸಾಥ್ ನೀಡಿದ ಆಂಜನೇಯ ಶಾಸ್ತ್ರಿಯವರನ್ನೂ ಇಲ್ಲಿ ಸ್ಮರಿಸಲೇ ಬೇಕು. ಜೊತೆಗೆ ತ್ರಿಶೂಲ್ ಮಲ್ಲಿಕಾರ್ಜುನರವರ ರಿದಮ್ಪ್ಯಾಡ್ ಮತ್ತು ಶ್ರೇಯಸ್ ಶ್ರೀನಿವಾಸ್ ತಬಲಾ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ವಂದನಾರ್ಪಣೆಯ ನಂತರ ಆಯೋಜಿಸಿದ್ದ ಊಟದ ಕಡೆಯೂ ಸಾಗದೇ ಎಲ್ಲರೂ ವೇದಿಕೆಯ ಮೇಲೆ ಬಂದು ಕಲಾವಿದರನ್ನು ಅಭಿನಂದಿಸುವುದರಲ್ಲೇ ಮಗ್ನರಾಗಿದ್ದರು. ಅಂತೂ ಅಟ್ಲಾಂಟಾ ನೃಪತುಂಗ ಕನ್ನಡ ಕೂಟದ ವತಿಯಿಂದ ನಡೆದ ಈ ರಸಸಂಜೆಗೆ ಬಂದವರೆಲ್ಲ ಒಂದು ವಿಭಿನ್ನ ಅನುಭವಕ್ಕೆ ಸಿಕ್ಕಿ ಮೋಡಿಗೆ ಒಳಗಾದವರಂತೆ ಹಿಂದಿರುಗಿದರು.
ಈ ದೇಸಾಯಿ ದಂಪತಿಗಳು ಇನ್ನೂ ಡಿಸೆಂಬರ್ನವರೆಗೂ ಅಮೇರಿಕಾ ಪ್ರವಾಸದಲ್ಲಿರುತ್ತಾರೆ. ನಿಮ್ಮ ನಿಮ್ಮ ಊರುಗಳಿಗೂ ಕರೆಸಿ ಕಾರ್ಯಕ್ರಮ ಆಯೋಜಿಸಿ. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಉತ್ತಮ ಜ್ಞಾನ, ಅದ್ಭುತವಾದ ಕಂಠ ಇವೆರಡರ ಜೊತೆ ಸಾಹಿತ್ಯದ ಒಲವು ಸೇರಿದರೆ ಹೇಗಿರಬಹುದೆಂಬ ಒಂದು ಉದಾಹರಣೆಯನ್ನು ನೋಡಬಹುದು. ನಿಮಗೆ ಖಂಡಿತಾ ನಿರಾಸೆಯಾಗುವುದಿಲ್ಲ. ಅವರ ಬಗ್ಗೆ ಮತ್ತು ಅವರ ಮುಂದಿನ ಕಾರ್ಯಕ್ರಮಗಳ ಬಗೆಗಿನ ವಿವರಕ್ಕೆ ಅವರ ಬ್ಲಾಗ್ http://namitaganesh.blogspot.com/ಗೆ ಭೇಟಿ ನೀಡಿ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications