'ಕನ್ನಡ ಸಾಹಿತ್ಯ ರಂಗ'ದ ಸಾಹಿತ್ಯಗೋಷ್ಠಿಗೆ ಆಹ್ವಾನ
ಇದೀಗ ಅಮೆರಿಕೆಯಲ್ಲಿ ವಸಂತ ಕಾಲಿಟ್ಟಿದೆ! ಜೊತೆಗೇ ಕನ್ನಡ ಸಾಹಿತ್ಯ ರಂಗ'ದ ನಾಲ್ಕನೆಯ ವಸಂತ ಸಾಹಿತ್ಯೋತ್ಸವ' ಸಾಹಿತ್ಯ ಪ್ರೇಮಿಗಳಿಗೆ ಮತ್ತೊಂದು ರಸದೌತಣ ನೀಡುವ ಸಲುವಾಗಿ ನಮ್ಮೆಡೆಗೆ ಧಾವಿಸಿ ಬರುತ್ತಿದೆ. ನಿಮಗೆ ಗೊತ್ತಿರುವಂತೆ ಮೇ ತಿಂಗಳು 30 ಮತ್ತು 31ರಂದು ಮೇರಿಲ್ಯಾಂಡಿನ ರಾಕ್ವಿಲ್ ಎಂಬ ಸ್ಥಳದಲ್ಲಿ ಶೇಡಿ ಗ್ರೊವ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಈ ಸಮಾರಂಭ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಅಂತರ್ಜಾಲ ತಾಣದಲ್ಲಿ ಪಡೆಯಬಹುದು. ಸಾಹಿತ್ಯೋತ್ಸವ ಅಂದ ಮೇಲೆ ಸಾಹಿತ್ಯ ಗೋಷ್ಠಿ' ಇರಲೇಬೇಕು ಅಂತ ನೀವು ಯೋಚಿಸುತ್ತಿದ್ದರೆ ..."ಕರೆಕ್ಟ್". ಊಟ ಅಂದ ಮೇಲೆ ಅನ್ನ ಇರಲೇಬೇಕು ಅಂದ ಹಾಗಾಯಿತು ಇದು. (ಅಮೆರಿಕೆಯಂತಹ ದೇಶದಲ್ಲಿ ಅನ್ನ ಇಲ್ಲದೆ ಇರುವ ಊಟವೂ ಕಾಮನ್, ಬಿಡಿ!)
ಕನ್ನಡ ಪ್ರೇಮಿಗಳಿಗೆ, ಅದರಲ್ಲೂ ಬರವಣಿಗೆ ಎಂಬ ಹವ್ಯಾಸವನ್ನು ರೂಢಿಸಿಕೊಂಡಿರುವವರಿಗೆ ಇದೊಂದು ಸುವರ್ಣಾವಕಾಶ. ನಿಮ್ಮ ಕವನ, ಪ್ರಬಂಧ ಅಥವಾ ಬೇರೆ ಯಾವುದೇ ಕೃತಿಯನ್ನು ಸಹೃದಯಿ ಪ್ರೇಕ್ಷಕರ ಸಮಕ್ಷಮದಲ್ಲಿ ಓದಿ, ಇತರ ಸಾಹಿತ್ಯ ಪ್ರೇಮಿಗಳ ವಾಚನವನ್ನು ಕೇಳಿ ಸಂತೋಷಿಸುವ ಈ ಅಮೋಘ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂಬ ಕಳಕಳಿಯ ಕೋರಿಕೆ ನಮ್ಮದು.
ಪ್ರತಿಯೊಬ್ಬರಿಗೂ ಏಳು ನಿಮಿಷಗಳ ಕಾಲಾವಕಾಶ ಕೊಡಲಾಗುತ್ತದೆ. ಭಾಗವಹಿಸುತ್ತಿರುವವರು ತಮ್ಮ ಸ್ವಂತ ಕೃತಿಯನ್ನು ಮಾತ್ರ ಓದಬಹುದು. ದಯವಿಟ್ಟು ಮೇ 15ರ ಒಳಗೆ ನೀವು ಓದಬೇಕೆಂದಿರುವ ಕೃತಿಯನ್ನು ನಮಗೆ ಈಮೇಲ್ ಮೂಲಕ ಕಳಿಸಿ ಕೊಡಿ. ಸಾಹಿತ್ಯ ಗೋಷ್ಠಿಯಲ್ಲಿ ವಾಚಿಸಲಿರುವ ಕೃತಿಗಳ ಆಯ್ಕೆ ಪ್ರಾಯೋಜಕರಿಗೆ ಸೇರಿದ್ದು.
ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:
ನಳಿನಿ ಮೈಯ : [email protected]
ಮಧುಕಾಂತ್ ಕೃಷ್ಣಮೂರ್ತಿ : [email protected]
ಇನ್ನಷ್ಟು ಮಾಹಿತಿ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications