ಮಾರ್ಚ್ 28ರಂದು ರೆಡಿಂಗ್ನಲ್ಲಿ ಯುಗಾದಿ
ಪ್ರತಿ ವರ್ಷದಂತೆ ಕನ್ನಡಿಗರು ಯುಕೆ ಸಂಘ ಸಂಭ್ರಮದಿಂದ ಹಿಂದೂಗಳ ಹೊಸವರ್ಷದಾಚರಣೆ ಯುಗಾದಿಯನ್ನು ಆಚಸಿಸುತ್ತಿದೆ. ಮಾರ್ಚ್ 28ರಂದು ನಡೆಯಲಿರುವ ಹಬ್ಬಕ್ಕಾಗಿ ಆಗಮಿಸುವವರು ಮೊದಲೇ ಸ್ಥಳ ಕಾದಿರಿಸಿ, ಸಮಯಕ್ಕೆ ಸರಿಯಾಗಿ ಬರಬೇಕೆಂದು ಸಂಘ ಕೇಳಿಕೊಂಡಿದೆ.
ಪ್ರಿಯ ಕನ್ನಡ ಸಹೋದರ ಸಹೋದರಿಯರೇ,
ಆಂಗ್ಲ ನಾಡಿನಲ್ಲಿ, ಪ್ರತೀ ವರ್ಷದಂತೆ ಕನ್ನಡಿಗರು ಯು.ಕೆ ಹಮ್ಮಿಕೊಂಡಿರುವ ಯುಗಾದಿ ಹಬ್ಬಕ್ಕೆ ನಿಮ್ಮೆಲರಿಗೂ ಸ್ವಾಗತ ಸುಸ್ವಾಗತ. ಮಾರ್ಚ್ 28ರಂದು ರೆಡಿಂಗ್ ಹಿಂದೂ ದೇವಾಲಯದ ಆವರಣದಲ್ಲಿ ಜರುಗಲಿರುವ ಈ ಯುಗಾದಿ ಹಬ್ಬಕ್ಕೆ ಈಗಾಗಲೇ ಉತ್ತಮವಾದ ಪ್ರತಿಕ್ರಿಯೆ ಬರುತ್ತಿವೆ.
ವಿರೋಧಿ ನಾಮ ಸಂವತ್ಸರ ನಮಗೆಲ್ಲ ಅವಿರೋಧ ಅಭಿವೃದ್ದಿಯನ್ನು ಮತ್ತು ಸುಖ ಶಾಂತಿಗಳನ್ನು ತರಲೆಂದು ಶ್ರೀಸತ್ಯನಾರಯಣ ದೇವರ ಪೂಜೆಯ ಮೂಲಕ ದೇವರನ್ನು ಪ್ರಾರ್ಥಿಸೋಣ. ಪೂಜೆಯನ್ನು ವಿಳಂಬ ಮಾಡಲು ದುಸ್ತರವಾಗಿರುವದರಿಂದ, ಈ ಬಾರಿ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುತ್ತಿದೆ. ನಾವೆಲ್ಲರೂ ಸರಿಯಾದ ಸಮಯಕ್ಕೆ ಹಾಜರಿದ್ದು, ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳೋಣ, ಅಲ್ಲವೇ?
ಸಾಂಸ್ಕೃತಿಕ ಕಾರ್ಯಕ್ರಮಗಳು : ಪ್ರತೀ ಬಾರಿಯೂ, ಕನ್ನಡಿಗರು ಯು.ಕೆ ಉತ್ತಮ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಮಗಾಗಿ ಸ್ಥಳೀಯ ಕಲಾವಿದರ ಮೂಲಕ ಪ್ರಸ್ತುತ ಪಡಿಸುತ್ತದೆ. ಈ ಬಾರಿ ಪುಟ್ಟ ಮಕ್ಕಳಿಂದ ನೃತ್ಯ, ವೇಷ-ಭೂಷಣ ಮತ್ತು ಹಿರಿಯ ಕಲಾವಿದರಿಂದ ನೃತ್ಯ ಮತ್ತು ಗಾಯನಗಳು ಮೂಡಿಬರಲಿವೆ. ಉತ್ತಮವಾದ ಭೊಜನದ ವ್ಯವಸ್ಥೆಯ ನಕ್ಷೆ ಈಗಾಗಲೇ ಸಿದ್ದವಾಗುತ್ತಿದೆ. ಈ ಹಬ್ಬದಲ್ಲಿ ನಾವೆಲ್ಲ ಸಂತೋಷದ ಸಾಗರದಲ್ಲಿ ಮುಳುಗಲು ಕೆಲವು ರಸಭರಿತ ಆಟಗಳನ್ನು ಆಯ್ದುಕೊಂಡಿದ್ದೇವೆ. ನಾವೆಲ್ಲರೂ ಈ ಆಟಗಳನ್ನು ಆಡಿ, ಕುಣಿದು, ದಣಿದು ಮೈಮರೆಯೋಣ. ಏನಂತೀರ?
ವಿನಮ್ರ ಮನವಿ : ದಯವಿಟ್ಟು ಈ ಬಾರಿ, ನಿಮ್ಮ ಸ್ಥಳಗಳನ್ನು ಮೊದಲೇ ಕಾದಿರಿಸಿರಿ. ನಾವೆಲ್ಲರೂ ಮೊದಲೇ ನಮ್ಮ ಆಗಮನದ ವ್ಯವಸ್ಥೆ ಮಾಡಿಕೊಂಡರೆ, ಭೋಜನದ ಮತ್ತು ಕೂಡಲು ಅನುಕೂಲವಾಗುತ್ತದೆ. ಇದರಿಂದ ಸಮಯ ಪಾಲನೆಗೂ ನೆರವಾಗುತ್ತದೆ ಎಂಬ ನಂಬಿಕೆಯಿದೆ. ಇಂದೇ, ನಿಮ್ಮ ಸ್ಥಳಗಳನ್ನು ಕಾದಿರಿಸಿರಿ. ಕೆಳಗಿನ ಅಂತರ್ಜಾಲದ ಪುಟವನ್ನು ಕ್ಲಿಕ್ಕಿಸಿ, http://www.kannadigaruuk.com/calendar/Register.htm
ದಿನಾಂಕ ಮತ್ತು ಸ್ಥಳದ ವಿವರಗಳು
ದಿನಾಂಕ ಮತ್ತು ಸಮಯ : 28ನೇ ಮಾರ್ಚ್, 2009, ಬೆಳಿಗ್ಗೆ 11 ಗಂಟೆಗೆ
ಸ್ಥಳ : Reading Hindu Temple Hall, 112, Whitley Street, Reading, RG2 0EQ
ದೂರವಾಣಿ : ಪವನ್ : 07782324462, ರಮೇಶ್ : 07815287819
ಹೆಚ್ಚಿನ ವಿವರಗಳಿಗಾಗಿ : http://www.kannadigaruuk.com/yugadi09faq.htm
ಮತ್ತೆ, ನಿಮ್ಮೆಲ್ಲರಿಗೂ ಕನ್ನಡಿಗರು ಯು.ಕೆ ಪರವಾಗಿ ಯುಗಾದಿ ಹಬ್ಬದ ಶುಭಾಶಯಗಳು. ನೀವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಈ ಪ್ರಾಮಾಣಿಕ ಶ್ರಮವನ್ನು ಸಾರ್ಥಕಗೊಳಿಸುತ್ತೀರೆಂದು ನಂಬಿದ್ದೇವೆ.
ಪವನ್ ಮೈಸೂರ್, ಕನ್ನಡಿಗರು ಯು.ಕೆ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications