ಮಾರ್ಚ್ 28ರಂದು ರೆಡಿಂಗ್ನಲ್ಲಿ ಯುಗಾದಿ
ಪ್ರತಿ ವರ್ಷದಂತೆ ಕನ್ನಡಿಗರು ಯುಕೆ ಸಂಘ ಸಂಭ್ರಮದಿಂದ ಹಿಂದೂಗಳ ಹೊಸವರ್ಷದಾಚರಣೆ ಯುಗಾದಿಯನ್ನು ಆಚಸಿಸುತ್ತಿದೆ. ಮಾರ್ಚ್ 28ರಂದು ನಡೆಯಲಿರುವ ಹಬ್ಬಕ್ಕಾಗಿ ಆಗಮಿಸುವವರು ಮೊದಲೇ ಸ್ಥಳ ಕಾದಿರಿಸಿ, ಸಮಯಕ್ಕೆ ಸರಿಯಾಗಿ ಬರಬೇಕೆಂದು ಸಂಘ ಕೇಳಿಕೊಂಡಿದೆ.
ಪ್ರಿಯ ಕನ್ನಡ ಸಹೋದರ ಸಹೋದರಿಯರೇ,
ಆಂಗ್ಲ ನಾಡಿನಲ್ಲಿ, ಪ್ರತೀ ವರ್ಷದಂತೆ ಕನ್ನಡಿಗರು ಯು.ಕೆ ಹಮ್ಮಿಕೊಂಡಿರುವ ಯುಗಾದಿ ಹಬ್ಬಕ್ಕೆ ನಿಮ್ಮೆಲರಿಗೂ ಸ್ವಾಗತ ಸುಸ್ವಾಗತ. ಮಾರ್ಚ್ 28ರಂದು ರೆಡಿಂಗ್ ಹಿಂದೂ ದೇವಾಲಯದ ಆವರಣದಲ್ಲಿ ಜರುಗಲಿರುವ ಈ ಯುಗಾದಿ ಹಬ್ಬಕ್ಕೆ ಈಗಾಗಲೇ ಉತ್ತಮವಾದ ಪ್ರತಿಕ್ರಿಯೆ ಬರುತ್ತಿವೆ.
ವಿರೋಧಿ ನಾಮ ಸಂವತ್ಸರ ನಮಗೆಲ್ಲ ಅವಿರೋಧ ಅಭಿವೃದ್ದಿಯನ್ನು ಮತ್ತು ಸುಖ ಶಾಂತಿಗಳನ್ನು ತರಲೆಂದು ಶ್ರೀಸತ್ಯನಾರಯಣ ದೇವರ ಪೂಜೆಯ ಮೂಲಕ ದೇವರನ್ನು ಪ್ರಾರ್ಥಿಸೋಣ. ಪೂಜೆಯನ್ನು ವಿಳಂಬ ಮಾಡಲು ದುಸ್ತರವಾಗಿರುವದರಿಂದ, ಈ ಬಾರಿ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುತ್ತಿದೆ. ನಾವೆಲ್ಲರೂ ಸರಿಯಾದ ಸಮಯಕ್ಕೆ ಹಾಜರಿದ್ದು, ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳೋಣ, ಅಲ್ಲವೇ?
ಸಾಂಸ್ಕೃತಿಕ ಕಾರ್ಯಕ್ರಮಗಳು : ಪ್ರತೀ ಬಾರಿಯೂ, ಕನ್ನಡಿಗರು ಯು.ಕೆ ಉತ್ತಮ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಮಗಾಗಿ ಸ್ಥಳೀಯ ಕಲಾವಿದರ ಮೂಲಕ ಪ್ರಸ್ತುತ ಪಡಿಸುತ್ತದೆ. ಈ ಬಾರಿ ಪುಟ್ಟ ಮಕ್ಕಳಿಂದ ನೃತ್ಯ, ವೇಷ-ಭೂಷಣ ಮತ್ತು ಹಿರಿಯ ಕಲಾವಿದರಿಂದ ನೃತ್ಯ ಮತ್ತು ಗಾಯನಗಳು ಮೂಡಿಬರಲಿವೆ. ಉತ್ತಮವಾದ ಭೊಜನದ ವ್ಯವಸ್ಥೆಯ ನಕ್ಷೆ ಈಗಾಗಲೇ ಸಿದ್ದವಾಗುತ್ತಿದೆ. ಈ ಹಬ್ಬದಲ್ಲಿ ನಾವೆಲ್ಲ ಸಂತೋಷದ ಸಾಗರದಲ್ಲಿ ಮುಳುಗಲು ಕೆಲವು ರಸಭರಿತ ಆಟಗಳನ್ನು ಆಯ್ದುಕೊಂಡಿದ್ದೇವೆ. ನಾವೆಲ್ಲರೂ ಈ ಆಟಗಳನ್ನು ಆಡಿ, ಕುಣಿದು, ದಣಿದು ಮೈಮರೆಯೋಣ. ಏನಂತೀರ?
ವಿನಮ್ರ ಮನವಿ : ದಯವಿಟ್ಟು ಈ ಬಾರಿ, ನಿಮ್ಮ ಸ್ಥಳಗಳನ್ನು ಮೊದಲೇ ಕಾದಿರಿಸಿರಿ. ನಾವೆಲ್ಲರೂ ಮೊದಲೇ ನಮ್ಮ ಆಗಮನದ ವ್ಯವಸ್ಥೆ ಮಾಡಿಕೊಂಡರೆ, ಭೋಜನದ ಮತ್ತು ಕೂಡಲು ಅನುಕೂಲವಾಗುತ್ತದೆ. ಇದರಿಂದ ಸಮಯ ಪಾಲನೆಗೂ ನೆರವಾಗುತ್ತದೆ ಎಂಬ ನಂಬಿಕೆಯಿದೆ. ಇಂದೇ, ನಿಮ್ಮ ಸ್ಥಳಗಳನ್ನು ಕಾದಿರಿಸಿರಿ. ಕೆಳಗಿನ ಅಂತರ್ಜಾಲದ ಪುಟವನ್ನು ಕ್ಲಿಕ್ಕಿಸಿ, http://www.kannadigaruuk.com/calendar/Register.htm
ದಿನಾಂಕ ಮತ್ತು ಸ್ಥಳದ ವಿವರಗಳು
ದಿನಾಂಕ ಮತ್ತು ಸಮಯ : 28ನೇ ಮಾರ್ಚ್, 2009, ಬೆಳಿಗ್ಗೆ 11 ಗಂಟೆಗೆ
ಸ್ಥಳ : Reading Hindu Temple Hall, 112, Whitley Street, Reading, RG2 0EQ
ದೂರವಾಣಿ : ಪವನ್ : 07782324462, ರಮೇಶ್ : 07815287819
ಹೆಚ್ಚಿನ ವಿವರಗಳಿಗಾಗಿ : http://www.kannadigaruuk.com/yugadi09faq.htm
ಮತ್ತೆ, ನಿಮ್ಮೆಲ್ಲರಿಗೂ ಕನ್ನಡಿಗರು ಯು.ಕೆ ಪರವಾಗಿ ಯುಗಾದಿ ಹಬ್ಬದ ಶುಭಾಶಯಗಳು. ನೀವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಈ ಪ್ರಾಮಾಣಿಕ ಶ್ರಮವನ್ನು ಸಾರ್ಥಕಗೊಳಿಸುತ್ತೀರೆಂದು ನಂಬಿದ್ದೇವೆ.
ಪವನ್ ಮೈಸೂರ್, ಕನ್ನಡಿಗರು ಯು.ಕೆ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications