ಪೆಸಿಫಿಕ್ ಸಾಗರದಂಚಿನಲ್ಲಿ ಕನ್ನಡ,ಕನ್ನಡ

ಇದು ಸಾಹಿತ್ಯ ಗೋಷ್ಠಿಯ 77ನೆಯ ಕಾರ್ಯಕ್ರಮ. ಇದರಲ್ಲಿ ಹಳೆಗನ್ನಡ ಮತ್ತು ಹೊಸಗನ್ನಡದ ಸುಮಧುರ ಮಿಲನವನ್ನು ಕಾಣಬಹುದಾಗಿದೆ: ಕನ್ನಡದ ಪ್ರಥಮ ಗದ್ಯ ಗ್ರಂಥ 'ವಡ್ಡಾರಾಧನೆ". ಇದನ್ನು 10ನೆಯ ಶತಮಾನದಲ್ಲಿ ರಚಿಸಿದವರು ಶಿವಕೋಟ್ಯಾಚಾರ್ಯ. ಇದರಲ್ಲಿನ ಕಥೆಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಲು ಸಿದ್ಧರಾಗಿದ್ದಾರೆ ವಿಜಯ ಕಣೇಕಲ್ ಅವರು.
ಈ ವರ್ಷವಷ್ಟೇ ಬಿಡುಗಡೆಯಾದ ಕನ್ನಡದ ಮಹತ್ವದ ಕಾದಂಬರಿ ವಿವೇಕ ಶಾನಭಾಗರ 'ಒಂದು ಬದಿ ಕಡಲು". ಈ ಕೃತಿ ಕರ್ನಾಟಕದಲ್ಲಿ ಈಗಾಗಲೇ ಬಹಳವಾಗಿ ಚರ್ಚಿಸಲ್ಪಟ್ಟಿದೆ. ಈ ಕಾದಂಬರಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ವಿಶ್ವನಾಥ್ ಹುಲಿಕಲ್. ಸಾಹಿತ್ಯ ಗೋಷ್ಠಿ ತಮಗೆಲ್ಲರಿಗೂ ತನ್ನ ಏಳನೆಯ ವರ್ಷದ ಹುಟ್ಟು ಹಬ್ಬಕ್ಕೆ ಆತ್ಮೀಯ ಸ್ವಾಗತವನ್ನು ಕೋರುತ್ತಿದೆ.
ಕಾರ್ಯಕ್ರಮದ ವಿವರಗಳು ಇಂತಿವೆ:
ಡಿಸೆಂಬರ್ 13, 2008 (ಶನಿವಾರ)
ಮಧ್ಯಾಹ್ನ 1:00 ರಿಂದ 5:30 ರವರೆಗೆ
ಸಾರಟೋಗ ವಾಚನಾಲಯದ ಸಾರ್ವಜನಿಕ ಸಭಾಂಗಣ
13650 ಸಾರಟೋಗ ಅವೆನ್ಯು
ಸಾರಟೋಗ ಕ್ಯಾಲಿಫೋರ್ನಿಯ 95070
ಪ್ರಾರ್ಥನೆ: ಅನ್ನಪೂರ್ಣ ವಿಶ್ವನಾಥ್
ಉಪನ್ಯಾಸ 1: 'ವಡ್ಡಾರಾಧನೆ" ವಿಜಯ ಕಣೇಕಲ್
ಉಪನ್ಯಾಸ 2: ವಿವೇಕ ಶಾನಭಾಗರ 'ಒಂದು ಬದಿ ಕಡಲು" - ವಿಶ್ವನಾಥ್ ಹುಲಿಕಲ್
ವಾರ್ಷಿಕ ವರದಿ: ವಿಶ್ವನಾಥ್ ಹುಲಿಕಲ್
ಕಾರ್ಯಕ್ರಮ ನಿರ್ವಹಣೆ: ಮಧೂಕಾಂತ್ ಕೃಷ್ಣಮೂರ್ತಿ
ತಮಗೆಲ್ಲರಿಗೂ ಸಾಹಿತ್ಯ ಗೋಷ್ಠಿಯ ಏಳನೆಯ ವಾರ್ಷಿಕೋತ್ಸವಕ್ಕೆ ಮತ್ತೊಮ್ಮೆ ಸ್ವಾಗತವನ್ನು ಬಯಸುತ್ತಿದ್ದೇವೆ. ದಯವಿಟ್ಟು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಈ ಸಂಭ್ರಮದಲ್ಲಿ ಪಾಲ್ಗೊಳ್ಳಿರಿ. ಸಾಹಿತ್ಯ ಗೋಷ್ಠಿಯು ಈ ವರ್ಷದಲ್ಲಿ ಆಯೋಜಿಸಿದ ಕೆಲವು ಉಪನ್ಯಾಸಗಳು / ಕಾರ್ಯಕ್ರಮಗಳು ಹೀಗಿವೆ:
* ಶ್ರಾವಣ ಮತ್ತು ಬೇಂದ್ರೆ - ಸುಶೀಲ ವೈದ್ಯ
* ಕರ್ನಾಟಕದ ಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯ - ಉದಯ ಶಂಕರ್
* ಇತಿಹಾಸ ಮತ್ತು ಕನ್ನಡ ಸಾಹಿತ್ಯ - ಪ್ರೊ. ಜಿ. ವಸಂತರಾವ್
* ಭೈರಪನವರ 'ಆವರಣ" - ಪ್ರಕಾಶ್ ನಾಯಕ್
* ಭೈರಪ್ಪನವರ 'ಮಂದ್ರ" - ಡಾ. ತುಳಸಿ ರಾಮಚಂದ್ರ
* ಕವಿ ಮತ್ತು ಸಾಹಿತ್ಯ ಗೋಷ್ಠಿ - 'ಸಾಹಿತ್ಯ ಗೋಷ್ಠಿ"ಯ ಸದಸ್ಯರಿಂದ ಸ್ವರಚಿತ ಕೃತಿಗಳ ವಾಚನ
* ರಾಜಕೀಯ ಮುತ್ಸದ್ದಿಯಾಗಿ ಕೃಷ್ಣ - ಕೃಷ್ಣಗಿರಿ ರಾಮಚಂದ್ರ
* ಬೇಂದ್ರೆಯವರ ಕಾವ್ಯದ ಆಯಾಮಗಳು - ಡಾ. ಗುರುಲಿಂಗ ಕಾಪಸೆ
* ಸುಗಮ ಸಂಗೀತ ಮತ್ತು ಸಾಹಿತ್ಯ - ಎಚ್. ಆರ್. ಲೀಲಾವತಿ
* ಗುಂಡೋಪನಿಷತ್ - ವಾಚನ: ಸರಸ್ವತಿ ವಟ್ಟಮ್, ವ್ಯಾಖ್ಯಾನ: ಸುರೇಶ್ ಬಾಬು
* ಅಸಂಬದ್ಧ ಸಾಹಿತ್ಯ - ಕನ್ನಡದಲ್ಲೇನಿದೆ? - ಎಚ್. ಕೆ. ಕೃಷ್ಣಪ್ರಿಯ
* ಪ್ರೊ. ಬಿ.ವಿ.ಅರ್ತಿಕಜ್ಜೆ ಅವರ ಹಾಸೋಲ್ಲಾಸದ ಆಯ್ದ ಬರಹಗಳು - ವಿಜಯಲಕ್ಷ್ಮಿ
* ವಡ್ಡಾರಾಧನೆ - ವಿಜಯ ಕಣೇಕಲ್
* ವಿವೇಕ್ ಶಾನಭಾಗರ 'ಒಂದು ಬದಿ ಕಡಲು" - ವಿಶ್ವನಾಥ್ ಹುಲಿಕಲ್
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವಿಶ್ವನಾಥ್ ಹುಲಿಕಲ್
Email: [email protected]
Web-site: http://www.sahityagoshti.org












Click it and Unblock the Notifications