ಗಂಟೆ ಶೇಷಾದ್ರಿ ಸಂಸಾರಕ್ಕೆ ನೆರವು ಕೊಡಿ
ಆಗಸ್ಟ್ 14. ಅಮೆರಿಕೆಯ ವಾಷಿಂಗ್ಟನ್ ಡಿಸಿಯಲ್ಲಿ ಮುಂಜಾನೆ 7 ಗಂಟೆಗೆ ರಸ್ತೆ ಅಪಘಾತವೊಂದರಲ್ಲಿ ಏನೂ ತಪ್ಪು ಮಾಡದ ಭಾರತೀಯರೊಬ್ಬರು ಮೃತರಾದರು. ಅವರು ಗಂಟೆ ಶೇಷಾದ್ರಿ, 41 ವರ್ಷ ವಯಸ್ಸಿನ ಸಂಸಾ-ರ-ಸ್ಥ-ರು.
ಇದೇನು ಅನ್ಯಾಯ ? : ‘ಇಂಟರ್ಸ್ಟೇಟ್ನ ಸೌತ್ಬೌಂಡ್ 95’ ರಸ್ತೆಯಲ್ಲಿ ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದ ಶೇಷಾದ್ರಿ ‘ಡ್ರೆೃವರ್ ಆಲ್ಟರ್ಕೇಷನ್’ ಎಂಬ ಯಾರದೋ ಹುಚ್ಚಾಟಕ್ಕೆ ಬಲಿಪಶುವಾಗಿದ್ದರು. ಡ್ರೆೃವರ್ ಆಲ್ಟರ್ಕೇಷನ್ ಅಂದರೆ ಚಾಲಕರ ನಡುವಿನ ಕೆರಳಿಕೆ, ತಿಕ್ಕಾಟ. ಎರಡು ಕಾರುಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಒಂದು ಕಾರಿನ ಚಾಲಕ ಮತ್ತೊಂದು ಕಾರನ್ನು ಓವರ್ಟೇಕ್ ಮಾಡಿ, ನಿಧಾನ ಚಲಿಸತೊಡಗಿದ. ಹಿಂದೆ ಬಿದ್ದ ಕಾರಿನ ಚಾಲಕನಲ್ಲಿ ಕಿಚ್ಚು ಹುಟ್ಟಿತು. ತಾನೂ ಓವರ್ಟೇಕ್ ಮಾಡಿ, ಮೊದಲ ಕಾರಿನ ಚಾಲಕನಂತೆಯೇ ನಿಧಾನ ಚಲಿಸತೊಡಗಿದ. ಇಬ್ಬರೂ ಈ ನಡಾವಳಿಯನ್ನು ಪುನರಾವರ್ತಿಸಿದರು. ಇದು ಹೀಗೇ ಮುಂದುವರೆದು, ಒಂದು ಹಂತದಲ್ಲಿ ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಇಬ್ಬರೂ ಅಕ್ಕ- ಪಕ್ಕಕ್ಕೆ ಬಂದು ಕಾರುಗಳನ್ನು ನಿಲ್ಲಿಸಿದರು. ಹಿಂದೆ ಭರೋ ಅಂತ ಬರುತ್ತಿದ್ದ ಪಿಕ್ಅಪ್ ಟ್ರಕ್ ಚಾಲಕ ಕಷ್ಟಪಟ್ಟು ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದ. ಆದರೆ ಅದರ ಬೆನ್ನಿಗೇ ಇದ್ದ ಟ್ರಾಕ್ಟರ್ ಟ್ರೇಲರ್ ಚಾಲಕ ಹಠಾತ್ ಬ್ರೇಕ್ ಹಾಕಲು ಆಗಲಿಲ್ಲ. ಕ್ಷಣಾರ್ಧದಲ್ಲೇ ಪಿಕ್ಅಪ್ ಟ್ರಕ್ ನುಜ್ಜುಗುಜ್ಜಾಗಿತ್ತು. ಅದರಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರೇ ಗಂಟೆ ಶೇಷಾದ್ರಿ !
ಡ್ರೆೃವರ್ ಆಲ್ಟರ್ಕೇಷನ್ ಎಂಬುದು ಒಂದು ಹುಚ್ಚಾಟ. ಇದು ಇಂದು- ನಿನ್ನೆಯದಲ್ಲ. ಆದರೆ ಇದರಿಂದ ಒಬ್ಬ ಅಮಾಯಕ ಪ್ರಾಣ ಕಳೆದುಕೊಂಡಿರುವುದು ಸಲ್ಲ. ಮೇರಿಲ್ಯಾಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರಾಕ್ಟರ್ ಟ್ರೇಲರ್ನ ಚಾಲಕ ಆರಾಮಾಗಿದ್ದಾನೆ. ಡ್ರೆೃವರ್ ಆಲ್ಟರ್ಕೇಷನ್ನಲ್ಲಿ ತೊಡಗಿದ್ದ ಒಬ್ಬ ಚಾಲಕ ಬಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೊಬ್ಬ ನಾಪತ್ತೆ. ಪೊಲೀಸರು ಆತನ ತಲಾಷಿನಲ್ಲಿದ್ದಾರೆ.
ಹೆಂಡತಿ- ಮಕ್ಕಳಿಗೆ ನೆರವು ಕೊಡಿ : ಈ ಹುಡುಗಾಟ ದೊಡ್ಡಾಟವಾದ ಪರಿಣಾಮ ಸಂಸಾರದ ದೊಡ್ಡ ನೊಗ ಹೊತ್ತಿದ್ದ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಇಲ್ಲವಾಗಿದ್ದಾರೆ. ಶೇಷಾದ್ರಿ ಅವರಿಗೆ 3 ಹಾಗೂ 12 ವರ್ಷ ವಯಸ್ಸಿನ ಮಕ್ಕಳಿದ್ದಾರೆ. ಅವರ ಹೆಂಡತಿಗೆ ದಿಕ್ಕು ತೋಚದಂತಾಗಿದೆ. ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ತಂದೆಯನ್ನು ಕಂಡು, ಇತ್ತೀಚೆಗೆ ಭಾರತದಿಂದ ವಾಪಸ್ಸಾಗಿದ್ದ ಶೇಷಾದ್ರಿ ಎರಡು ತಿಂಗಳ ಹಿಂದಷ್ಟೇ ಲಾರೆಲ್ನಲ್ಲಿ ಮನೆಯಾಂದನ್ನು ಕೊಂಡು, ಕನಸಿನ ಬುತ್ತಿ ಕಟ್ಟಿಕೊಂಡಿದ್ದರು.
ಗಂಡನ ಕಳಕೊಂಡ ಹೆಂಡತಿ, ತಂದೆ ಇಲ್ಲದ ಮಕ್ಕಳ ಮುಂದಿನ ಜೀವನಕ್ಕೆ ಹಣ- ಕಾಸಿನ ಅವಶ್ಯಕತೆಯಿದೆ. ಇದಕ್ಕೆಂದೇ ಒಂದು ವೆಬ್ಸೈಟ್ ಉಂಟು. ನೆರವು ಮಾಡುವ ದೊಡ್ಡ ಮನಸ್ಸು ನಿಮ್ಮದಾಗಿದ್ದಲ್ಲಿ http://pages.ivillage.com/ghante/ghantesheshadri/ ಸಂಪರ್ಕಿಸಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications