ಇಲಿನಾಯ್ನಲ್ಲಿ ಸಂಭ್ರಮದ ಗಣೇಶೋತ್ಸವ

ಅಂದು ಆಗಸ್ಟ್ 25, ಶನಿವಾರ. ಚೌತಿ ಹೋಗಿ ಸಪ್ತಮಿ ಬಂದಿತ್ತೆಂಬುದು ಯಾರ ಉತ್ಸಾಹಕ್ಕೂ ಭಂಗ ತಂದಿರಲಿಲ್ಲ . ಎಲ್ಲೆಲ್ಲೂ ಸ್ನೇಹಿತರ ವಿಶ್ವಾಸ ಪೂರ್ವಕ ಉಭಯಕುಶಲೋಪರಿ- 'ಏನ್ರೀ? ಚೆನ್ನಾಗಿದ್ದೀರಾ?" ಎಂದಾಗ ಪ್ರೀತಿಪೂರ್ವಕ ಮುಗುಳ್ನಗೆ.
ದೇವಸ್ಥಾನದ ಅರ್ಚಕರಿಂದ ಗಣೇಶನ ಪೂಜೆ ನಡೆದ ಮೇಲೆ ನಾಗಮಣಿ ವಿದ್ಯಾಸಾಗರ್ ಅವರ ಪ್ರಾರ್ಥನೆಯಾಂದಿಗೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು. ಮಕ್ಕಳಿಂದ ಭಾರತ, ಅಮೆರಿಕಾ ಎರಡೂ ದೇಶಗಳ ರಾಷ್ಟ್ರಗೀತೆ, ರೋಹಿಣಿ ಉಡುಪ, ಕಲ್ಯಾಣಿ ಪ್ರಸಾದ್ ಮತ್ತು ಸಂಗಡಿಗರಿಂದ ಭಜನೆ, ಹಾಗೂ ಸಾವಿತ್ರಿ ಬಸವಯ್ಯ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳಿದ್ದವು. ಸ್ಥಳೀಯ ಕನ್ನಡಿಗರಾದ ಸಾವಿತ್ರಿ ಅವರಿಗೆ ಹಿಮ್ಮೇಳದ ವಾದ್ಯಕ್ಕೆ ನುರಿತ ಕಲಾವಿದರಾದ ಹಿತೇಶ್ ದೇಸಾಯಿ (ಕೀ ಬೋರ್ಡ್) ಮತ್ತು ಪೂರನ್ ವ್ಯಾಸ್ (ತಬಲಾ) ಜೊತೆ ನೀಡಿದ್ದರು. ಸಾವಿತ್ರಿ ಅವರ ಪತಿ ಜಯರಾಮ್ ಅವರು ಬಾಂಗೊ ಡ್ರಮ್ ನುಡಿಸಿದರು.
ಕಾರ್ಯಕಾರಿ ಸಮಿತಿಯ ಯುವ ಸದಸ್ಯರು ಏರ್ಪಡಿಸಿದ್ದ ಗಣೇಶ ಕ್ವಿಜ್ ಎಳೆಯರಿಗೆಲ್ಲ ತಮಗೆ ಗಣೇಶನ ಬಗ್ಗೆ ಇರುವ ಜ್ಞಾನವನ್ನು ಒರೆ ಹಚ್ಚುವಂತೆ ಮಾಡಿತು. ಹಬ್ಬದೌತಣವಾದ ಮೇಲೆ ಕೊನೆಯಲ್ಲಿ ಜಯಶ್ರೀ ಅವರ ವೀಣಾವಾದನವಿತ್ತು . ಜೊತೆಗೆ ವಿನೋದ್ ಗೋಪಿನಾಥ್ ಅವರು ಮೃದಂಗ ನುಡಿಸಿದರು.
ಕನ್ನಡಿಗರೊಡನೆ ಒಡನಾಡಿ, ಕನ್ನಡ ಕಾರ್ಯಕ್ರಮಗಳನ್ನು ನೋಡಿ, ಕನ್ನಡದೂಟವನ್ನು ಮಾಡಿದ ಪ್ರತಿಯಾಬ್ಬ ಕನ್ನಡಿಗನ ಹೃದಯವೂ ಏನೋ ಸಂತೃಪ್ತ ಭಾವವನ್ನು ತಾಳಿತ್ತು. ಅಮೆರಿಕಾದ ನೆಲದಲ್ಲಿ ಮತ್ತೊಮ್ಮೆ ಕರ್ನಾಟಕದ ಕಂಪನ್ನು ಪಸರಿಸಿದ ಕನ್ನಡ ಕೂಟ ಸಾರ್ಥಕತೆಯನ್ನು ಪಡೆದಿತ್ತು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications