ಟ್ರಂಪ್ ರಿಂದ ಅಂತಿಮ ಗೌರವ: ಬುಷ್ ಮೃತದೇಹ ಕರೆತರಲು ಏರ್ ಫೋರ್ಸ್ ಒನ್
ವಾಷಿಂಗ್ಟನ್, ಡಿಸೆಂಬರ್ 02: ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್ ಎಚ್ ಡಬ್ಲ್ಯೂ ಬುಷ್(94) ಅವರಿಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮದೇ ಆದ ರೀತಿಯಲ್ಲಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಬುಷ್ ಅವರ ಮೃತದೇಹವನ್ನು ಕರೆತರಲು ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನವನ್ನು ಕಳಿಸಿದ್ದಾರೆ.
ಬುಷ್ ಅವರ ದೇಹವನ್ನು ಟೆಕ್ಸಾಸ್ ನಿಂದ ವಾಷಿಂಗ್ಟನ್ ಗೆ ಕರೆ ತರಲು ವಿಮಾನವನ್ನು ಕಳಿಸಲು ಸೂಚಿಸಿದ್ದಾರೆ. ನ್ಯಾಷನಲ್ ಕ್ಯಾಥೆಡ್ರಲ್ ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮೆಲನಿಯಾ ಅವರು ಈ ಅಂತಿಮ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
1989 ರಿಂದ 1993 ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಅವರು, ಕಳೆದ ಕೆಲವು ವರ್ಷಳಿಂದ ವ್ಹೀಲ್ ಚೇರ್ ನಲ್ಲೇ ಬದುಕು ಸವೆಸುತ್ತಿದ್ದರು. ಅವರು ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ಅಗಲಿಕೆಗೆ ವಿಶ್ವದ ಗಣ್ಯರು ಕಂಬನಿ ಮಿಡಿದಿದ್ದಾರೆ.

1924ರ ಜೂನ್ 12ರಂದು ಮೆಸಾಚ್ಯುಸೆಟ್ಸ್ ನ ಮಿಲ್ಟನ್ ನಲ್ಲಿ ಜನಿಸಿದ ಬುಷ್ ಅವರು 1945ರಲ್ಲಿ ಬರ್ಬಾರಾ ಪಿಯರ್ಸ್ ಅವರನ್ನು ಮದುವೆಯಾದರು. ದಂಪತಿಗೆ 6 ಮಂದಿ ಮಕ್ಕಳು.
18ನೇ ವಯಸ್ಸಿನಲ್ಲಿ ನೌಕಾದಳ ಸೇರಿದ ಬುಷ್ ಅವರು ಯುದ್ಧ ವಿಮಾನ ಪೈಲಟ್ ಆಗಿ 58 ಸಮರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಹಾಗೂ ಸಿಐಎ ಮಾಜಿ ಮುಖ್ಯಸ್ಥರಾಗಿದ್ದರು. ನವೆಂಬರ್ 08, 1988ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಜನವರಿ 1993ರವರೆಗೂ ಅಧಿಕಾರದಲ್ಲಿದ್ದರು.
ಸೋವಿಯೆಟ್ ಯೂನಿಯನ್ ವಿದಳನ, ಜರ್ಮನ್ ಗೋಡೆ ಕುಸಿತ, ಏಕೀಕರಣ, ನ್ಯಾಟೋಗೆ ಸೇರ್ಪಡೆ, ಲ್ಯಾಟಿನ್ ಅಮೆರಿಕದವರೆಗೂ ಸರ್ವಾಧಿಕಾರಿಗಳಿದ್ದ ಸರ್ಕಾರಗಳು ಪತನಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಗಿದ್ದನ್ನು ತಮ್ಮ ಅವಧಿಯಲ್ಲಿ ಕಂಡವರು.
1990ರ ವೇಳೆ ಇರಾಕಿನ ಪಡೆಗಳು ಸರ್ವಾಧಿಕಾರಿ ಸದ್ದಾಂ ಹುಸೇನ್ ನೇತೃತ್ವದಲ್ಲಿ ನೆರೆಯ ಕುವೈತ್ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 32ಕ್ಕೂ ಅಧಿಕ ದೇಶಗಳ ಮೈತ್ರಿಕೂಟ ರಚನೆಗೆ ಕಾರಣರಾದ ಬುಷ್, ಸದ್ದಾಂ ಹುಟ್ಟಡಗಿಸಿ, ಕುವೈತ್ ರಕ್ಷಿಸಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications