ಭಾರತೀಯ-ಅಮೆರಿಕನ್ ಆರೋಗ್ಯ ನೀತಿ ತಜ್ಞೆ ಮೀನಾ ಶೇಷಮಣಿ ಮೆಡಿಕೇರ್ ನಿರ್ದೇಶಕಿಯಾಗಿ ನೇಮಕ
ವಾಷಿಂಗ್ಟನ್, ಜು.09: ಅಮೆರಿಕದ ಬೈಡನ್-ಹ್ಯಾರಿಸ್ ಆಡಳಿತದಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ (ಎಚ್ಎಚ್ಎಸ್) ಏಜೆನ್ಸಿ ಪರಿಶೀಲನಾ ತಂಡದ ನಾಯಕತ್ವದಲ್ಲಿ ಸೇವೆ ಸಲ್ಲಿಸಿದ ಭಾರತೀಯ-ಅಮೆರಿಕನ್ ಆರೋಗ್ಯ ನೀತಿ ತಜ್ಞೆ ಡಾ. ಮೀನಾ ಶೇಷಮಣಿರನ್ನು ಯುಎಸ್ ಸೆಂಟರ್ ಫಾರ್ ಮೆಡಿಕೇರ್ನ ನಿರ್ದೇಶಕರಾಗಿ ನೇಮಿಸಲಾಗಿದೆ.
43 ರ ಹರೆಯದ ಶೇಷಮಣಿ, 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ, ವಿಕಲಾಂಗರಿಗೆ ಮತ್ತು ಮೆಡಿಕೇರ್ ವ್ಯಾಪ್ತಿಯನ್ನು ಅವಲಂಬಿಸಿರುವ ಮೂತ್ರಪಿಂಡ ಕಾಯಿಲೆಯ ಕೊನೆಯ ಹಂತದಲ್ಲಿರುವ ಜನರಿಗೆ ಸೇವೆ ಸಲ್ಲಿಸುವ ಕೇಂದ್ರದ ಪ್ರಯತ್ನವನ್ನು ಮುನ್ನಡೆಸಲಿದ್ದಾರೆ.
ಡಾ. ಶೇಷಮಣಿ ಉಪ ಆಡಳಿತಾಧಿಕಾರಿ ಮತ್ತು ಸೆಂಟರ್ ಫಾರ್ ಮೆಡಿಕೇರ್ ನಿರ್ದೇಶಕರಾಗಿ ಜುಲೈ 6 ರಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಿಎಂಎಸ್ (ಮೆಡಿಕೇರ್ ಮತ್ತು ಮೆಡಿಕೈಡ್ ಸೇವೆಗಳ ಕೇಂದ್ರಗಳು) ಆಡಳಿತಾಧಿಕಾರಿ ಚಿಕ್ವಿಟಾ ಬ್ರೂಕ್ಸ್-ಲಾಸೂರ್, "ಡಾ. ಮೀನಾ ಶೇಷಮಣಿ ಆರೋಗ್ಯ ರಕ್ಷಣಾ ಕಾರ್ಯನಿರ್ವಾಹಕಿ, ಆರೋಗ್ಯ ಅರ್ಥಶಾಸ್ತ್ರಜ್ಞೆ, ವೈದ್ಯೆ ಮತ್ತು ಆರೋಗ್ಯ ನೀತಿ ತಜ್ಞೆಯಾಗಿ ಮೆಡಿಕೇರ್ಗೆ ಉನ್ನತ ಸೇವೆ ನೀಡಲಿದ್ದಾರೆ" ಎಂದು ಹೇಳಿದ್ದಾರೆ.
"ಮೆಡಿಕೇರ್ ಅನ್ನು ಅವಲಂಬಿಸಿರುವ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು. ಹಾಗೆಯೇ ಆರೋಗ್ಯ ಸಮಾನತೆಯನ್ನು ಮುಂದುವರಿಸುವುದು ಸಿಎಂಎಸ್ನ ಆದ್ಯತೆಯಾಗಿದೆ. ಆರೋಗ್ಯ ನೀತಿಯು ರೋಗಿಗಳ ನೈಜ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಡಾ. ಶೇಷಮಣಿ ವಿಶಿಷ್ಟ ದೃಷ್ಟಿಕೋನವನ್ನು ತರಲಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಡೆಪ್ಯೂಟಿ ಅಡ್ಮಿನಿಸ್ಟ್ರೇಟರ್ ಮತ್ತು ಸೆಂಟರ್ ಫಾರ್ ಮೆಡಿಕೇರ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ," ಎಂದು ತಿಳಿಸಿದ್ದಾರೆ.
ಶೇಷಮಣಿ ಇತ್ತೀಚೆಗೆ ಮೆಡ್ಸ್ಟಾರ್ ಹೆಲ್ತ್ನಲ್ಲಿ ಕ್ಲಿನಿಕಲ್ ಕೇರ್ ಟ್ರಾನ್ಸ್ಫರ್ಮೇಷನ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಜನಸಂಖ್ಯೆಯ ಆರೋಗ್ಯ ಮತ್ತು ಮೌಲ್ಯ ಆಧಾರಿತ ಆರೈಕೆಗಾಗಿ 10 ಆಸ್ಪತ್ರೆಯ ಹಿರಿಯ ನಾಯಕತ್ವದಲ್ಲಿ, 300+ ಹೊರರೋಗಿ ಆರೈಕೆ ಸೈಟ್ ಆರೋಗ್ಯ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಸಮುದಾಯ ಆರೋಗ್ಯ, ಜೆರಿಯಾಟ್ರಿಕ್ಸ್ ಮತ್ತು ಉಪಶಾಮಕ ಆರೈಕೆ ಸೇರಿದಂತೆ ಮೀನಾ ಆರೋಗ್ಯ ಸುಧಾರಣಾ ಸಂಸ್ಥೆಯಲ್ಲಿ ರಾಷ್ಟ್ರೀಯವಾಗಿ ಗುರುತಿಸಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications