ಮೂರು ವರ್ಷದ ಮಗುವಿಗೆ ಆ ಅನಾಮಿಕ ನೀಡಿದ ದಾನ 14 ಲಕ್ಷ ರುಪಾಯಿ
ಎಲ್ಲ ಧರ್ಮಗಳಲ್ಲೂ ಒಂದಲ್ಲಾ ಒಂದು ಹಬ್ಬದಲ್ಲಿ ದಾನ-ಧರ್ಮದ ಬಗ್ಗೆ ಹೇಳಲಾಗಿದೆ. ಕ್ರಿಶ್ಚಿಯನ್ನರಿಗೆ ಕ್ರಿಸ್ ಮಸ್ ಅಂಥದ್ದೇ ದೊಡ್ಡ ಆಚರಣೆ. ಇಂಥ ಹಬ್ಬದ ಸಂದರ್ಭದಲ್ಲಿ ಅಮೆರಿಕ ನ್ಯೂಯಾರ್ಕ್ ನಿವಾಸಿಯೊಬ್ಬರು ತಮ್ಮ ಗುರುತನ್ನು ಬಯಲು ಮಾಡದಂತೆ, ಮೂರು ವರ್ಷದ ಹೆಣ್ಣುಮಗುವಿಗೆ ಒಂದು ತಿಂಗಳಿಗೆ ಬೇಕಾದಂಥ ಔಷಧಿಗೆ 20 ಸಾವಿರ ಡಾಲರ್ ನೀಡಿದ್ದಾರೆ.
ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 14 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತವಿದು. ಬ್ರೂಕ್ಲಿನ್ ನ ಬಾಲಕಿ ಸಿಸ್ಟಿಕ್ ಫೈಬ್ರೋಸಿಸ್ ನಿಂದ ನರಳುತ್ತಿದ್ದಾಳೆ. ಔಷಧ ತಯಾರಕರು ಆ ಕಾಯಿಲೆಯ ಔಷಧದ ಖರ್ಚು ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಆ ಮಗು ಕ್ರಿಸ್ ಮಸ್ ರಜಾಗೆ ಮನೆಯಲ್ಲಿ ಇರಲು ಸಾಧ್ಯವಿಲ್ಲ, ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂಬ ಪರಿಸ್ಥಿತಿ ಬಂದಿದೆ.
ಈ ಬಗ್ಗೆ ವೆಬ್ ಸೈಟ್ ವೊಂದರಲ್ಲಿ ಈ ಮಾಹಿತಿ ಪ್ರಕಟವಾಗಿತ್ತು. ಮೂರು ವರ್ಷದ ಕ್ಲಿಯೋ ಕೆನಡಿ ಆಸ್ಪತ್ರೆಯಲ್ಲಿದ್ದು, ಆಕೆಗೆ ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ. ಆ ಬಾಲಕಿಯ ತಂದೆ ಮಾಡಿಸಿದ ಹೆಲ್ತ್ ಇನ್ಷೂರೆನ್ಸ್ ನಿಂದ ಒರ್ಕಂಬಿ ಎಂಬ ಔಷಧ (ವರ್ಷಕ್ಕೆ ಅದಕ್ಕೆ 2,72,000 ಅಮೆರಿಕನ್ ಡಾಲರ್ ಆಗುತ್ತದೆ) ಕವರ್ ಆಗುವುದಿಲ್ಲ ಎಂದು ಗೊತ್ತಾಗಿದೆ.

ವರದಿ ಬಂದ ಒಂದು ಗಂಟೆಯೊಳಗೆ ಸ್ಪಂದನೆ
ಆ ತಕ್ಷಣವೇ ಅಂದರೆ ವರದಿ ಪ್ರಕಟವಾದ ಒಂದು ಗಂಟೆಯೊಳಗೆ ವರದಿಗಾರರನ್ನು ಸಂಪರ್ಕಿಸಿದ ದಾನಿಯು ತನ್ನ ಹೆಸರನ್ನು ಬಯಲು ಮಾಡದಂತೆ ಮನವಿ ಮಾಡಿದ್ದಾರೆ. ಆ ಬಾಲಕಿಯ ಔಷಧಿಗೆ 20 ಸಾವಿರ ಡಾಲರ್ ನೀಡಿದ್ದಾರೆ. ಆತ ದಾನಿ ತನ್ನನ್ನು ಕ್ರಿಸ್ ಮಸ್ ಸಾಂಟಾ ಎಂದು ಗುರುತಿಸಿ ಸಾಕು ಎಂದು ಹೇಳಿದ್ದಾರೆ.

ಸಿಸ್ಟಿಕ್ ಫೈಬ್ರೋಸಿಸ್ ಕಾಯಿಲೆಯ ಪರಿಣಾಮ
ಕ್ಲಿಯೋ ವಯಸ್ಸಿನವರಿಗೆ ಸಿಸ್ಟಿಕ್ ಫೈಬ್ರೋಸಿಸ್ ಕಾಯಿಲೆಗೆ ಇರುವ ಏಕೈಕ ಔಷಧ ಒರ್ಕಂಬಿ. ಕಾಯಿಲೆಯ ಪರಿಣಾಮವಾಗಿ ಕ್ಲಿಯೋಳ ತೂಕವು 13 ಕೇಜಿಗೆ ಇಳಿದು ಹೋಗಿದೆ. ಸಿಸ್ಟಿಕ್ ಫೈಬ್ರೋಸಿಸ್ ಇರುವವರಿಗೆ ಶ್ವಾಸಕೋಶದ ಮೇಲೆ ದಾಳಿ ಆಗುತ್ತದೆ. ದೇಹವು ಪೌಷ್ಟಿಕಾಂಶವನ್ನು ತೆಗೆದುಕೊಳ್ಳಲು ಅವಕಾಶ ಆಗಲ್ಲ. ದಿನದಿನಕ್ಕೂ ಇದು ಹೆಚ್ಚಾಗುತ್ತಾ ಹೋಗುತ್ತದೆ. ಒರ್ಕಂಬಿ ಔಷಧಿ ತೆಗೆದುಕೊಳ್ಳುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಕ್ಯಾಲೋರಿ ದೊರೆಯುತ್ತದೆ. ಆಸ್ಪತ್ರೆಗೆ ಸೇರುವ ಅಗತ್ಯ ಇರುವುದಿಲ್ಲ.
Image Credit: Mathew McDermott

ಇತರರು ಕೂಡ ನೆರವು ನೀಡಲು ಮುಂದೆ ಬಂದಿದ್ದಾರೆ
ಯಾವಾಗ ಈ ಸುದ್ದಿ ಗೊತ್ತಾಯಿತೋ ಅಲ್ಲಿನ ಕೆಲ ಸ್ಥಳೀಯರು, ಅದರಲ್ಲಿ ಇದೇ ಕಾಯಿಲೆ ಹದಿಮೂರು ವರ್ಷದ ಹಿಂದೆ ತಮ್ಮ ಮಗಳನ್ನು ಕಳೆದುಕೊಂಡ ವೈದ್ಯರೊಬ್ಬರು ಆ ಕುಟುಂಬಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಅಂದ ಹಾಗೆ ಕ್ಲಿಯೋ ಕುಟುಂಬದವರ ಹತ್ತಿರ ಇನ್ಷೂರೆನ್ಸ್ ಇದೆ. ಆದರೆ ಅದರಲ್ಲಿ ಈ ಔಷಧ ಕವರ್ ಆಗುವುದಿಲ್ಲ.
Image Credit: Mathew McDermott

ಮನಸಾರೆ ಸ್ಮರಿಸುತ್ತಾರೆ ಕ್ಲಿಯೋಳ ಪೋಷಕರು
ಇಲ್ಲಿ ಇನ್ನೊಂದು ಸಂತೋಷದ ವಿಚಾರವೂ ಇದೆ. ಮುಂದಿನ ವರ್ಷದ ಜನವರಿಯಿಂದ ಹೊಸ ಯೋಜನೆ ಅನ್ವಯ ಇನ್ಷೂರೆನ್ಸ್ ಪ್ಲಾನ್ ಒರ್ಕಂಬಿಗೂ ಅನ್ವಯಿಸುತ್ತದೆ. ಅದರಿಂದ ಆ ಕುಟುಂಬದ ಮೇಲಿನ ಹೆಚ್ಚಿನ ಒತ್ತಡ ಇಳಿಯುತ್ತದೆ. ಈ ಒಂದು ತಿಂಗಳ ಔಷಧಕ್ಕೆ ಅಷ್ಟು ದೊಡ್ಡ ಮೊತ್ತವನ್ನು ದಾನ ಮಾಡಿದ ಆ ಅಗೋಚರ ಸಾಂಟಾ ಕ್ಲಾಸ್ ನನ್ನು ಕ್ಲಿಯೋಳ ಪೋಷಕರು ಮನಸಾರೆ ನೆನಪಿಸಿಕೊಳ್ಳುತ್ತಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications