ಕೊರೊನಾ ಅಬ್ಬರದ ನಡುವೆ ವಿಜಯಪುರದಲ್ಲಿ ಟಗರು ಕಾಳಗ

ವಿಜಯಪುರ, ಜೂನ್ 30: ಒಂದು ಕಡೆ ಕೊರೊನಾ ತನ್ನ ಅಬ್ಬರವನ್ನು ದಿನೇ ದಿನೇ ಹೆಚ್ಚು ಮಾಡಿ ಮುನ್ನುಗುತ್ತಿದೆ. ಆದರೆ, ಅನೇಕ ಕಡೆ ಜನರು ಇನ್ನು ಎಚ್ಚೆತ್ತುಕೊಳ್ಳದೆ ನಿರ್ಲಕ್ಷಾವಾಗಿಯೇ ಇದ್ದಾರೆ.

Recommended Video

      ಶಿಷ್ಯವೇತನಕ್ಕೆ ಕೊರೋನಾ ವಾರಿಯರ್ಸ್ ಪರದಾಟ , ಇವರ ಕಷ್ಟ ಕೇಳೋರ್ಯಾರು| Oneindia Kannada

      ಕೊರೊನಾ ಸೋಂಕಿನ ನಡುವೆ ವಿಜಯಪುರದಲ್ಲಿ ಟಗರಿನ ಕಾಳಗ ನಡೆಸಿದ್ದಾರೆ. ಮುದ್ದೇಬಿಹಾಳ ಪಟ್ಟಣದ ವೀರೇಶನಗರದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದರಲ್ಲಿ ನೂರಾರೂ ಜನರು ಭಾಗಿಯಾಗಿದ್ದು, ಅನೇಕ ಸ್ಥಳಿಯರಿಂದ ವಿರೋಧ ವ್ಯಕ್ತವಾಗಿದೆ.

      ವೀರೇಶನಗರ ಗೆಳೆಯರ ಬಳಗದ ವತಿಯಿಂದ ಬೃಹತ್ ಟಗರಿನ ಕಾಳಗವನ್ನು ಏರ್ಪಾಡು ಮಾಡಲಾಗಿತ್ತು. ಟಗರುಗಳ ಕಾಳಗ ನೋಡಲು ನೂರಾರೂ ಸಂಖ್ಯೆಯ ಜನರು ಸೇರಿದ್ದು, ಯಾರು ಸುರಕ್ಷತ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ.

      Sheep Fight Program Was Organised In Vijayapura

      ಜನರು ಮಾಸ್ಕ್‌ ಧರಿಸಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು, ಕಂಡುಬರಲಿಲ್ಲ. ಕೊರೊನಾ ನಡುವೆ ಮನರಂಜನೆಗಾಗಿ ಈ ಕಾರ್ಯಕ್ರಮ ಮಾಡಿದ್ದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಕಾರ್ಯಕ್ರಮ ನಡೆಸಲು ವೀರೇಶನಗರ ಗೆಳೆಯರ ಬಳಗ ಜಿಲ್ಲಾಡಳಿತದ ಅನುಮತಿ ಕೂಡ ಪಡೆದಿರಲಿಲ್ಲವಂತೆ.

      ಕರ್ನಾಟಕದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಇದೇ ರೀತಿ ಜನರು ನಿರ್ಲಕ್ಷಾ ಮಾಡಿದರೆ, ಕೊರೊನಾ ಕರ್ನಾಟಕ ಬಿಟ್ಟು ಹೋಗುವುದು ದೂರದ ಮಾತಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+