2 ದಿನ ವಿಳಂಬ: ಜೂನ್ 3ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶ
ನವದೆಹಲಿ,
ಮೇ
30:
ಭಾರತದಲ್ಲಿ
ನೈಋತ್ಯ
ಮಾನ್ಸೂನ್
ಮಳೆಯು
ಎರಡು
ದಿನ
ವಿಳಂಬವಾಗಲಿದೆ.
ಮೇ
31ರ
ಬದಲಿಗೆ
ಜೂನ್
3ರಂದು
ಕರಾವಳಿಗೆ
ಮಾನ್ಸೂನ್
ಅಪ್ಪಳಿಸಲಿದೆ
ಎಂದು
ಭಾರತೀಯ
ಹವಾಮಾನ
ಇಲಾಖೆ
ತಿಳಿಸಿದೆ.
ಯಾಸ್
ಮತ್ತು
ತೌಕ್ತೆ
ಚಂಡಮಾರುತದ
ಪ್ರಭಾವದಿಂದ
ಮೇ
31ರಂದು
ಕರಾವಳಿಗೆ
ಮಾನ್ಸೂನ್
ಪ್ರವೇಶಿಸಲಿದೆ
ಎಂದು
ಈ
ಮೊದಲು
ಹವಾಮಾನ
ಇಲಖೆ
ತಿಳಿಸಿತ್ತು.
ಇತ್ತೀಚಿನ
ಹವಾಮಾನ
ಸೂಚನೆಗಳ
ಪ್ರಕಾರ,
ಜೂನ್
1
ರಿಂದ
ನೈಋತ್ಯ
ಮಾರುತಗಳು
ಕ್ರಮೇಣ
ಮತ್ತಷ್ಟು
ಪ್ರಬಲಗೊಳ್ಳುವ
ಸಾಧ್ಯತೆಯಿದೆ.
ಇದರ
ಪರಿಣಾಮವಾಗಿ
ಜೂನ್
3ರಂದು
ಕೇರಳಕ್ಕೆ
ಮಾನ್ಸೂನ್
ಪ್ರವೇಶಿಸಲಿದ್ದು,
ಭಾರಿ
ಮಳೆಯಾಗುವ
ಸಾಧ್ಯತೆಯಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.
ಮೇ
31ರಂದು
ಕೇರಳಕ್ಕೆ
ಮುಂಗಾರು
ಆಗಮನ
ಸಮುದ್ರ
ಮಟ್ಟದಿಂದ
1.5
ಕಿಲೋ
ಮೀಟರ್
ವೇಗದಲ್ಲಿ
ಪಂಜಾಬ್
ಮತ್ತು
ನೆರೆಹೊರೆ
ರಾಜ್ಯಗಳಲ್ಲಿ
ಚಂಡ
ಮಾರುತ
ಬೀಸಿದೆ.
ಅರಬ್ಬಿ
ಸಮುದ್ರದ
ಪೂರ್ವ
ಕೇಂದ್ರದಿಂದ
ಕರ್ನಾಟಕದ
ಕರಾವಳಿ
ಪ್ರದೇಶದಿಂದ
ಚಂಡ
ಮಾರುತ
3.1
ಕಿಲೋ
ಮೀಟರ್
ದೂರದಲ್ಲಿದೆ
ಎಂದು
ಸರ್ಕಾರದ
ಪ್ರಕಟಣೆಯಲ್ಲಿ
ಉಲ್ಲೇಖಿಸಲಾಗಿದೆ.
ದಕ್ಷಿಣ ಪಶ್ಚಿಮ ಮಾರುತಗಳು ಪ್ರಬಲಗೊಂಡಿರುವ ಹಿನ್ನೆಲೆ ಮಾನ್ಸೂನ್ ಪ್ರವೇಶದಲ್ಲಿ ವಿಳಂಬವಾಗಿದೆ. ಜೂನ್ 1ರಿಂದಲೇ ಕೇರಳದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಎಂ ಮೋಹಪಾತ್ರ ತಿಳಿಸಿದ್ದಾರೆ.
ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇ.70ರಷ್ಟು ಮಳೆ ಮಾನ್ಸೂನ್ ಮಾರುತಗಳಿಂದಲೇ ಬೀಳುತ್ತದೆ. ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುವ ಬಹುಪಾಲು ರೈತರು ಈ ಮಾನ್ಸೂನ್ ಮಳೆಯನ್ನೇ ಅವಲಂಬಿತರಾಗಿದ್ದಾರೆ. ಬೇಸಿಗೆಯ ಬೆಳೆಗಳಿಗೆ ಈ ಮಾನ್ಸೂನ್ ಮಳೆಯೇ ನಿರ್ಣಾಯಕವಾಗಿರುತ್ತದೆ. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆ, ಕೃಷಿ, ಉದ್ಯೋಗ, ಕೈಗಾರಿಕೆಗಳು ಹೀಗೆ ಪ್ರತಿಯೊಂದು ರಂಗದ ಮೇಲೂ ಈ ಮಾನ್ಸೂನ್ ಮಳೆಯು ಪರಿಣಾಮ ಬೀರಲಿದೆ.