ಅರಬಿ ಸಮುದ್ರದಲ್ಲಿ ನಿಗೂಢ 'ನೀರೊಳಗಿನ ದ್ವೀಪ' ಪತ್ತೆ ಹಚ್ಚಿದ ಗೂಗಲ್ ನಕ್ಷೆ
ನವದೆಹಲಿ, ಜೂ. 17: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ಗೂಗಲ್ ನಕ್ಷೆಯಲ್ಲಿ ಇತ್ತೀಚೆಗೆ ಕೇರಳದ ಕೊಚ್ಚಿ ಬಳಿಯ ಅರಬಿ ಸಮುದ್ರದಲ್ಲಿ ಹುರುಳಿ ಆಕಾರದ 'ನೀರೊಳಗಿನ ದ್ವೀಪ' ಪತ್ತೆಯಾಗಿದ್ದು, ಇದು ತಜ್ಞರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನಿಗೂಢ ದ್ವೀಪವನ್ನು ತೋರಿಸುವ ಉಪಗ್ರಹ ಚಿತ್ರವನ್ನು ಮೊದಲು ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ಗಮನಿಸಿದೆ. ಅಧ್ಯಕ್ಷ ವಕೀಲ ಕೆಎಕ್ಸ್ ಜುಲಪ್ಪನ್ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್ಶಾಟ್ ಅನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೊಸೈಟಿಯು ನಂತರ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯಕ್ಕೆ (ಕುಫೋಸ್) ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದೆ.

ಈ ನಡುವೆ ಅನೇಕ ಮಂದಿಯಲ್ಲಿ ಉಂಟಾಗಿರುವ ಗೊಂದಲವೆಂದರೆ, ಸ್ಥಳದಲ್ಲಿ ಯಾವುದೇ ಭೂಮಿ ಅಥವಾ ರಚನೆ ಇಲ್ಲ, ಆದರೆ ಗೂಗಲ್ ನಕ್ಷೆಗಳ ಪ್ರಕಾರ, 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿರುವ ಹುರುಳಿ ಆಕಾರದ ದ್ವೀಪವೊಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಕುಫೋಸ್ನ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಕುಫೋಸ್ನ ಉಪಕುಲಪತಿ ಕೆ ರಿಜಿ ಜಾನ್, ''ಗೂಗಲ್ ನಕ್ಷೆಗಳನ್ನು ನೋಡುವಾಗ, ಇದು ಜಗತ್ತಿನಾದ್ಯಂತ ನಾವು ನೋಡುವ ಸಾಮಾನ್ಯ ನೀರೊಳಗಿನ ದ್ವೀಪದಂತೆ ಕಾಣುತ್ತದೆ. ಈ ಬಗ್ಗೆ ಅವಲೋಕನಗಳು ನಡೆದಿವೆ. ಈ ದ್ವೀಪಕ್ಕೂ ಒಂದು ನಿರ್ದಿಷ್ಟ ಆಕಾರವಿದೆ. ಆದರೆ ಅದು ಮರಳು ಅಥವಾ ಜೇಡಿಮಣ್ಣಿನಿಂದ ಕೂಡಿದೆಯೇ ಮತ್ತು ಎರಡೂ ಕೂಡಾ ಇದೆಯೇ ಎಂಬುದು ನಮಗೆ ತಿಳಿದಿಲ್ಲ. ತನಿಖೆಯಯ ಮೂಲಕ ಮಾತ್ರ ನಾವು ಅದನ್ನು ಕಂಡುಹಿಡಿಯಬಹುದು. ಅದರ ನಂತರವೇ, ನಾವು ಈ ಬಗ್ಗೆ ಮಾಹಿತಿ ನೀಡಬಹುದು,'' ಎಂದು ತಿಳಿಸಿದ್ದಾರೆ.
"ನಾವು ಈ ಸಾಧ್ಯತೆಯನ್ನು ಸಹ ಪರಿಶೀಲಿಸಬೇಕು. ನೀರೊಳಗಿನ ಪ್ರವಾಹ ಅಥವಾ ತೀರ ಸವೆತದಂತಹ ಕಾರಣದಿಂದಾಗಿ ಈ ರೀತಿ ಆಗುತ್ತದೆ. ಕೇರಳದಲ್ಲಿಯೇ, ದಕ್ಷಿಣ ಪ್ರದೇಶದ ಕಡೆಗೆ ಸವೆತದ ಸಮಸ್ಯೆ ಇದೆ. ಆದರೆ ವೈಪೀನ್ (ಎರ್ನಾಕುಲಂ ಜಿಲ್ಲೆಯಲ್ಲಿ) ನಂತಹ ಪ್ರದೇಶಗಳಲ್ಲಿ, ಕಿಲೋಮೀಟರ್ ಉದ್ದದಲ್ಲಿ ಕೆಸರಿನ ಸಂಗ್ರಹ ಗಮನಿಸಲಾಗಿದೆ. ಈ ವಿದ್ಯಮಾನವು ಅದೇ ಕಾರಣದಿಂದ ಉಂಟಾಗಿದೆಯೆ ಎಂದು ನಾವು ನಿಖರವಾಗಿ ಹೇಳಲು ಸಾಧ್ಯವಿಲ್ಲ,'' ಎಂದು ಹೇಳಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications