ಉಗ್ರ ಬುರ್ಹಾನ್ ವನಿ ಊರಲ್ಲಿ ಶೂನ್ಯ ಮತದಾನ
ಶ್ರೀನಗರ, ಮೇ 07: ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವನಿ ಗ್ಯಾಂಗಿನ ಕೊನೆ ಸದಸ್ಯ ಲತೀಫ್ ಟೈಗರ್ ಹತ್ಯೆಯಾದ ಬಳಿಕ ಶಾಂತಿ ವಾತಾವರಣ ಕಂಡು ಬಂದಿತ್ತು. ಆದರೆ, ವನಿ ಊರಲ್ಲಿ ಮತದಾನ ಮಾಡಲು ಯಾರು ಮುಂದೆ ಬಂದಿಲ್ಲ.
ಇನ್ನು ಆತ್ಮಾಹುತಿ ದಾಳಿಯನ್ನು ಕಂಡ ಪುಲ್ವಾಮಾದಲ್ಲಿ ಮತದಾನ ಪ್ರಮಾಣ ಶೇ 15 ದಾಟಿಲ್ಲ. ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.
ತ್ರಾಲ್ ಪ್ರದೇಶದಲ್ಲಿ ವನಿಯ ಊರಾದ ಶರೀಫಾಬಾದ್ ಗ್ರಾಮದಲ್ಲಿ ಯಾರೊಬ್ಬರು ಮತದಾನ ಮಾಡುವ ಸಾಹಸ ಮಾಡಿಲ್ಲ. ಗುಂಡಿಬಾಗ್ ನಲ್ಲಿ 350 ಮತದಾರರಿದ್ದು, 15 ಮಂದಿ ಮಾತ್ರ ಧೈರ್ಯ ಮಾಡಿ ಮತದಾನ ಮಾಡಿದ್ದಾರೆ.

ಜೈಷ್ ಎ ಮೊಹಮ್ಮದ್ ಉಗ್ರ, ಗುಂಡಿಬಾಗ್ ನ ಆದಿಲ್ ದರ್ ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ದಾಳಿಯಿಂದ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 14ರಂದು ನಡೆದ ವಿಧ್ವಂಸಕ ಕೃತ್ಯದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು.
ಅನ್ಸರ್ ಗಜಾವರ್ ಉಲ್ ಹಿಂದ್ ಉಗ್ರ ಸಂಘಟನೆಯ ಜಾಕೀರ್ ಮೂಸಾನ ಗ್ರಾಮವಾದ ನೂರಾಬಾದ್ ನಲ್ಲೂ ಶೂನ್ಯ ಮತದಾನವಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ರಿಯಾಜ್ ನಾಯ್ಕ್ ನ ಗ್ರಾಮ ಬೈಗ್ ಪೂರ್, ಮುದಾಸಿರ್ ಖಾನ್ ನ ಶೇಖ್ ಪೂರ್ ನಲ್ಲೂ ಯಾರೂ ಮತದಾನ ಮಾಡಿಲ್ಲ.
ವನಿ ಗ್ಯಾಂಗಿನ ಸದಸ್ಯರಿದ್ದ ಗ್ರೂಪ್ ಫೋಟೋದಲ್ಲಿದ್ದ 11 ಮಂದಿ ಪೈಕಿ ಒಬ್ಬನನ್ನು ಬಂಧಿಸಿ, ಮಿಕ್ಕವರನ್ನು ಕೊಂದು ಹಾಕಲಾಗಿದೆ.
2017ರಲ್ಲಿ ಗ್ಯಾಂಗಿನ ಪ್ರಮುಖ ಸದಸ್ಯ ಯಾಸೀನ್ ಯತ್ತೋ, ಘಜ್ನವಿಯನ್ನು ಬಲಿ ಪಡೆದಿದ್ದ ಭಾರತೀಯ ಯೋಧರು, ಈಗ ಲತೀಫ್ ಟೈಗರ್ ನನ್ನು ಮುಗಿಸುವ ಮೂಲಕ ಇಡೀ ಗ್ಯಾಂಗ್ ಧ್ವಂಸಗೊಳಿಸಿದ್ದರು. ಇದಾದ ಬಳಿಕ ಕಣಿವೆ ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಹಂತದಲ್ಲಿ ನಡೆಸಲು ಉದ್ದೇಶಿಸಲಾಯಿತು. ಭಾರಿ ಬಿಗಿ ಭದ್ರತೆ ಒದಗಿಸಲಾಯಿತು. ಆದರೆ, ಮತದಾನ ಪ್ರಮಾಣ ಮಾತ್ರ ಏರಿಕೆಯಾಗಿಲ್ಲ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications