KIWG 2026: ಗಣರಾಜ್ಯೋತ್ಸವದ ದಿನವೇ ಐಸ್ ಹಾಕಿಯಲ್ಲಿ ಲಡಾಖ್ ಸ್ಕೌಟ್ಸ್ ಸಾಧನೆ
ಭಾರತ ತನ್ನ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶದ ಗಡಿಗಳ ರಕ್ಷಣೆಯಲ್ಲೇ ಸೀಮಿತವಾಗದೆ ಕ್ರೀಡಾ ಕ್ಷೇತ್ರದಲ್ಲೂ ವಿಶಿಷ್ಟ ಕೊಡುಗೆ ನೀಡುತ್ತಿರುವ ಲಡಾಖ್ ಸ್ಕೌಟ್ಸ್ ಪಡೆಯು ದೇಶದ ಗಮನ ಸೆಳೆಯುತ್ತಿದೆ. ಭಾರತೀಯ ಸೇನೆಯ ವಿಶೇಷ ಪರ್ವತ ಪಡೆಯಾದ ಲಡಾಖ್ ಸ್ಕೌಟ್ಸ್ ಇಂದು ಭಾರತದಲ್ಲಿ ಹಾಕಿ ಕ್ರಾಂತಿಗೆ ಮುನ್ನುಡಿಯಾಗಿ ನಿಂತಿದ್ದು, "ಕಾಲ್ ಆಫ್ ಡ್ಯೂಟಿ"ಗಿಂತಲೂ ಮೀರಿದ ಸೇವಾಭಾವನೆಗೆ ಸಾಕ್ಷಿಯಾಗಿದ್ದಾರೆ.
ಲಡಾಖ್ನ ಲೇಹ್ನಲ್ಲಿ ನಡೆಯುತ್ತಿರುವ 2026ರ ಕೇಲೋ ಇಂಡಿಯಾ ವಿಂಟರ್ ಗೇಮ್ಸ್ (KIWG) ಆರನೇ ಆವೃತ್ತಿಯ ಮೊದಲ ಹಂತದಲ್ಲಿ ಐಸ್ ಹಾಕಿ ಮತ್ತು ಐಸ್ ಸ್ಕೇಟಿಂಗ್ ಸ್ಪರ್ಧೆಗಳು ನಡೆಯುತ್ತಿವೆ. ಈ ಕ್ರೀಡಾಕೂಟದಲ್ಲಿ "ಆರ್ಮಿ" ಎಂಬ ಹೆಸರಿನಲ್ಲಿ ಸ್ಪರ್ಧಿಸುತ್ತಿರುವ ಲಡಾಖ್ ಸ್ಕೌಟ್ಸ್ ತಂಡವು ಎಂದಿನಂತೆ ಶಕ್ತಿಶಾಲಿ ಪ್ರದರ್ಶನ ನೀಡುತ್ತಿದೆ. ಗಣರಾಜ್ಯೋತ್ಸವದ ದಿನವಾದ ಇಂದು ಪುರುಷರ ವಿಭಾಗದ ಫೈನಲ್ನಲ್ಲಿ ಆರ್ಮಿ ತಂಡವು ಅಚ್ಚರಿ ಪ್ರವೇಶ ಪಡೆದ ಚಂಡೀಗಢ ತಂಡವನ್ನು ಎದುರಿಸಲಿದೆ. ಆದರೆ, ಪದಕಗಳಿಗಿಂತಲೂ ಮಿಗಿಲಾಗಿ ಲಡಾಖ್ ಸ್ಕೌಟ್ಸ್ ಮಾಡುತ್ತಿರುವ ಕೆಲಸ ಕ್ರೀಡಾಂಗಣದ ಹೊರಗೇ ಹೆಚ್ಚು ಮಹತ್ವ ಪಡೆದಿದೆ.

ಐಸ್ ಹಾಕಿ ಹಿನ್ನೆಲೆ
ಲಡಾಖ್ ಸ್ಕೌಟ್ಸ್ ಪಡೆ 1970ರ ದಶಕದ ಅಂತ್ಯದಿಂದಲೇ ಮನರಂಜನೆಯ ರೂಪದಲ್ಲಿ ಐಸ್ ಹಾಕಿ ಆಡಲು ಆರಂಭಿಸಿದ್ದು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ಸೂಕ್ತ ಮೈದಾನವೂ ಇಲ್ಲ, ಸರಿಯಾದ ಉಪಕರಣಗಳೂ ಇರಲಿಲ್ಲ. ಹವ್ಯಾಸವಾಗಿ ಶುರುವಾದ ಈ ಆಟವು 1980ರ ದಶಕದ ಅಂತ್ಯದ ವೇಳೆಗೆ ಗಂಭೀರ ಸ್ವರೂಪ ಪಡೆದುಕೊಂಡಿತು. ನೈಸರ್ಗಿಕ ಐಸ್ ರಿಂಕ್ಗಳನ್ನು ನಿರ್ಮಿಸಿ, ದುಬಾರಿ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಯಿತು. ಇಂದಿನ ದಿನಗಳಲ್ಲಿ ಒಬ್ಬ ಐಸ್ ಹಾಕಿ ಆಟಗಾರನ ಸಂಪೂರ್ಣ ಉಪಕರಣಗಳ ವೆಚ್ಚವೇ ಸುಮಾರು 4 ಲಕ್ಷ ರೂಪಾಯಿವರೆಗೆ ಹೋಗುತ್ತದೆ. 2000ನೇ ಇಸವಿಯಲ್ಲಿ ಲಡಾಖ್ ಸ್ಕೌಟ್ಸ್ ಸಂಪೂರ್ಣ ಪಾದಾತಿ ಪಡೆಯಾಗಿ ರೂಪುಗೊಂಡ ಬಳಿಕ, ಕ್ರೀಡೆಯಲ್ಲಿಯೂ ಹೆಚ್ಚಿನ ಶಿಸ್ತು ಮತ್ತು ಬದ್ಧತೆಯೊಂದಿಗೆ ತೊಡಗಿಸಿಕೊಂಡರು.
ಪ್ರಸ್ತುತ ಭಾರತದಲ್ಲಿ ಒಲಿಂಪಿಕ್ ಗಾತ್ರದ ಕೃತಕ ಐಸ್ ರಿಂಕ್ಗಳು ಕೇವಲ ಎರಡು ಮಾತ್ರ ಇದ್ದು, ಒಂದು ಡೆಹ್ರಾಡೂನ್ನಲ್ಲಿ, ಮತ್ತೊಂದು ಲೇಹ್ನ ನವಾಂಗ್ ದೋರಜೆ ಸ್ಟೋಬ್ದಾನ್ ಒಳಾಂಗಣ ಕ್ರೀಡಾಂಗಣದಲ್ಲಿ. "ಐಸ್ ಹಾಕಿಯನ್ನು ನಿಜವಾದ ಜನಪ್ರಿಯ ಕ್ರೀಡೆಯಾಗಿಸಲು ದೇಶದ ವಿವಿಧ ಭಾಗಗಳಲ್ಲಿ ಇನ್ನಷ್ಟು ಐಸ್ ರಿಂಕ್ಗಳು ನಿರ್ಮಾಣವಾಗಬೇಕು. ಈಗ ಈ ಕ್ರೀಡೆ ಬಹುತೇಕ ಲೇಹ್ಗೆ ಮಾತ್ರ ಸೀಮಿತವಾಗಿದೆ. ಇದನ್ನು ಸಮತಟ್ಟು ಪ್ರದೇಶಗಳು ಮತ್ತು ಕರಾವಳಿ ಭಾಗಗಳಿಗೂ ಕೊಂಡೊಯ್ಯಬೇಕಾಗಿದೆ" ಎಂದು 2026ರ ಕೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಭಾಗವಹಿಸಿರುವ ಆರ್ಮಿ ತಂಡದ ಸದಸ್ಯ ಕ್ಯಾಪ್ಟನ್ ಪಾರ್ಥ್ ಜಾಗ್ಟಾಪ್ ಹೇಳಿದ್ದಾರೆ.
ಕಳೆದ ವರ್ಷ ಮುಂಬೈನಲ್ಲಿ ಕ್ರೀಡಾ ಹಾಗೂ ಶೈಕ್ಷಣಿಕ ಸಾಧನೆಗಾಗಿ ಗೌರವ ಪಡೆದಿದ್ದ ಕ್ಯಾಪ್ಟನ್ ಜಾಗ್ಟಾಪ್, ಕೇಲೋ ಇಂಡಿಯಾ ಯೋಜನೆಯ ಪಾತ್ರವನ್ನು ಸಹ ಶ್ಲಾಘಿಸಿದ್ದಾರೆ. "ಮಾಧ್ಯಮಗಳ ಮೂಲಕ ಐಸ್ ಹಾಕಿಗೆ ಹೆಚ್ಚಿನ ಗಮನ ಸಿಕ್ಕಿದೆ. ಈ ಕ್ರೀಡೆಯನ್ನು ದೇಶದಾದ್ಯಂತ ಬೆಳೆಸಲು ಏನು ಬೇಕು ಎಂಬ ಅರಿವು ಕೂಡ ಹೆಚ್ಚಾಗಿದೆ" ಎಂದಿದ್ದಾರೆ.
ಐಸ್ ರಿಂಕ್ ನಿರ್ಮಾಣ ಅತ್ಯಂತ ದುಬಾರಿ ಕಾರ್ಯವಾಗಿದ್ದು, ಸರಳವಾದ ರಿಂಕ್ ನಿರ್ಮಾಣಕ್ಕೂ ಸುಮಾರು 15 ಕೋಟಿ ರೂಪಾಯಿ ವೆಚ್ಚವಾಗುತ್ತದೆ. 5,000 ಜನ ಕುಳಿತುಕೊಳ್ಳಬಹುದಾದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು 40-50 ಕೋಟಿ ರೂಪಾಯಿವರೆಗೂ ಖರ್ಚಾಗುತ್ತದೆ. ಇಂತಹ ದೊಡ್ಡ ಮೊತ್ತಕ್ಕೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ ಅಗತ್ಯವಾಗಿದ್ದು, ರಿಲಯನ್ಸ್, ಅದಾನಿ, ಟಾಟಾ ಮುಂತಾದ ಸಂಸ್ಥೆಗಳು ಮುಂದೆ ಬಂದರೆ, ಭಾರತದಲ್ಲಿ ಐಸ್ ಹಾಕಿಯ ಚಿತ್ರಣವೇ ಬದಲಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಲಡಾಖ್ ಸ್ಕೌಟ್ಸ್ ಪಡೆ ಕೇವಲ ತಮ್ಮ ತಂಡಕ್ಕೆ ಮಾತ್ರವಲ್ಲ, ದೇಶದ ಐಸ್ ಹಾಕಿ ಭವಿಷ್ಯಕ್ಕೂ ಬೆಂಬಲ ನೀಡುತ್ತಿದೆ. ಕಳೆದ ವರ್ಷ ಭಾರತೀಯ ಮಹಿಳಾ ಐಸ್ ಹಾಕಿ ತಂಡಕ್ಕೆ ಕೊನೆಯ ಕ್ಷಣದಲ್ಲಿ ಲಡಾಖ್ ಸ್ಕೌಟ್ಸ್ ನೀಡಿದ ಆರ್ಥಿಕ ನೆರವು ಫಲಕಾರಿಯಾಗಿದ್ದು, ಯುಎಇಯಲ್ಲಿ ನಡೆದ ಐಐಎಚ್ಎಫ್ ವುಮೆನ್ಸ್ ಏಷ್ಯಾ ಕಪ್ನಲ್ಲಿ ಭಾರತ ಮೊದಲ ಬಾರಿಗೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.
'ಸ್ನೋ ಲಿಯೋಪಾರ್ಡ್ಸ್' ಅಥವಾ 'ಸ್ನೋ ವಾರಿಯರ್ಸ್' ಎಂದು ಕರೆಸಿಕೊಳ್ಳುವ ಲಡಾಖ್ ಸ್ಕೌಟ್ಸ್, ಗಡಿಗಳ ರಕ್ಷಣೆಯ ಜೊತೆಗೆ ಕ್ರೀಡಾ ಕ್ರಾಂತಿಗೂ ಮುನ್ನುಡಿಯಾಗಿ ನಿಂತಿದ್ದಾರೆ. ಅವರ ಈ ನಿರಂತರ ಪ್ರಯತ್ನಗಳು, ಭವಿಷ್ಯದಲ್ಲಿ ಭಾರತವನ್ನು ಜಾಗತಿಕ ಐಸ್ ಹಾಕಿ ವೇದಿಕೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ವಿಶ್ವಾಸ ಮೂಡಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications