ವಾವ್.. ಸುಂದರ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡಕ್ಕೆ ಪಾಠ?
ಭಾರತದ ಅತಿ ಸುಂದರ ಕ್ರೀಡಾಂಗಣಗಳ ಪೈಕಿ ಧರ್ಮಶಾಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ ಎನ್ನಬಹುದು. ಯಾಕಂದ್ರೆ ಹಿಮವನ್ನೇ ಹೊದ್ದಿರುವ ಪ್ರದೇಶದ ಮಧ್ಯೆ ಹರಡಿಕೊಂಡಿರುವ ಈ ಕ್ರಿಕೆಟ್ ಮೈದಾನ ಕಂಡರೆ ಭಾರತೀಯರು ಮಾತ್ರವಲ್ಲ ವಿದೇಶಿಯರಿಗು ಪ್ರೀತಿ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಥೇಟ್ ಸ್ವರ್ಗದಂತೆ ಕಾಣುತ್ತದೆ ಧರ್ಮಶಾಲಾದ ಕ್ರಿಕೆಟ್ ಮೈದಾನ. ಇದೇ ಕ್ರೀಡಾಂಗಣವನ್ನ ಹೊಗಳಿದ್ದ ಇಂಗ್ಲೆಂಡ್ ತಂಡ ಈಗ ಸೋಲಿನ ಸುಳಿಗೆ ಸಿಲುಕುತ್ತಿದೆ!
ಇಂಗ್ಲೆಂಡ್ ತಂಡ ಈ ಮೊದಲಿನ ಖದರ್ ಕಳೆದುಕೊಂಡು ಸಾಲು ಸಾಲು ಸೋಲು ಕಂಡು ನರಳಿ ಹೋಗುತ್ತಿದೆ. ಅದರಲ್ಲೂ ಭಾರತದ ಪ್ರವಾಸದಲ್ಲಿ ಬರೋಬ್ಬರಿ 5 ಟೆಸ್ಟ್ ಪಂದ್ಯಗಳ ಸರಣಿ ಆಡಿರುವ ಇಂಗ್ಲೆಂಡ್ ಈಗಾಗಲೇ ಸತತವಾಗಿ 3 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ ನಡುವೆ 5ನೇ ಟೆಸ್ಟ್ ಪಂದ್ಯದಲ್ಲೂ ಸೋತು ಸುಣ್ಣವಾಗುವ ಲಕ್ಷಣ ಕಾಣುತ್ತಿದೆ. ಹೀಗಿದ್ದಾಗ ಧರ್ಮಶಾಲಾ ಮೈದಾನದ ಬಗ್ಗೆ ಹೊಗಳಿಕೆ ಮಾತು ಆಡಿದ್ದ ಇಂಗ್ಲೆಂಡ್ ತಂಡದ ಆಟಗಾರ ಪಡೆ ಈಗ ತಮಗೆ ಇಷ್ಟವಾದ ಮೈದಾನದಲ್ಲೇ ಹೀನಾಯ ಸೋಲು ಕಾಣುವ ಸನಿಹದಲ್ಲಿದೆ.

ಹೊಗಳಿದ್ದ ಜಾಗದಲ್ಲೇ ಹೀನಾಯ ಸೋಲು?
5ನೇ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಇಂಗ್ಲೆಂಡ್ ತಂಡ ಕೇವಲ 218 ರನ್ಗೆ ತನ್ನ ಮೊದಲನೇ ಇನ್ನಿಂಗ್ಸ್ ಮುಗಿಸಿದೆ. ಇದೀಗ ಬ್ಯಾಟಿಂಗ್ ಶುರು ಮಾಡಿರುವ ಭಾರತ ತಂಡ ಭರ್ಜರಿ ಶುರು ಪಡೆದಿದೆ. ಆರಂಭದಲ್ಲೇ ಭಾರತ ತಂಡದ ಬ್ಯಾಟಿಂಗ್ ಅಬ್ಬರ ನೋಡಿದ ಇಂಗ್ಲೆಂಡ್ ತಂಡ ನಲುಗಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೇನು ಒಂದೆರಡು ದಿನದಲ್ಲಿ ಮತ್ತೆ ಭಾರತ ಇತಿಹಾಸ ನಿರ್ಮಾಣ ಮಾಡುವುದು ಗ್ಯಾರಂಟಿ. ಹಾಗೇ ಇಂಗ್ಲೆಂಡ್ ತಂಡಕ್ಕೆ ಮತ್ತೆ ಹೀನಾಯ ಸೋಲು ಎದುರಾಗುವುದು ಬಹುತೇಕ ಪಕ್ಕಾ. ಈ ಮೂಲಕ ಇಂಗ್ಲೆಂಡ್ ತಂಡ, ತಾವು ಹೊಗಳಿದ್ದ ಜಾಗದಲ್ಲೇ ಹೀನಾಯವಾದ ಸೋಲು ಕಾಣುವ ಪರಿಸ್ಥಿತಿಗೆ ಸಿಲುಕಿದೆ.
2ನೇ ಇನ್ನಿಂಗ್ಸ್ ಇಂಗ್ಲೆಂಡ್ಗೆ ಕಷ್ಟ
ಈಗಿನ ಲೆಕ್ಕಾಚಾರ ನೋಡುವುದಾದರೆ ಭಾರತ ತಂಡ ಕಡಿಮೆ ಕಡಿಮೆ ಎಂದರೂ 300ಕ್ಕೂ ಹೆಚ್ಚು ರನ್ ಗಳಿಸಲಿದೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ 400 ರನ್ ಗಡಿಯನ್ನು ದಾಟಿದರೂ ಅಚ್ಚರಿ ಇಲ್ಲ. ಹೀಗೆ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 400 ರನ್ ಗಳಿಸಿದ್ದೇ ಆದರೆ ಮುಂದೆ ಇಂಗ್ಲೆಂಡ್ ತಂಡಕ್ಕೆ 2ನೇ ಇನ್ನಿಂಗ್ಸ್ ಸಿಕ್ಕಾಪಟ್ಟೆ ಕಷ್ಟವಾಗಲಿದೆ. ಹಾಗೇ ಭಾರತದ ವಿರುದ್ಧ ಇನ್ನಿಂಗ್ಸ್ ಸೋಲು ಅನುಭವಿಸುವ ಭಯವೂ ಇಂಗ್ಲೆಂಡ್ ಟೀಂಗೆ ಕಾಡಲಿದೆ. ಸ್ಪಿನ್ ದಾಳಿ ಎದುರಿಸಲು ಆಗದ ಇಂಗ್ಲೆಂಡ್ಗೆ ಸಂಕಷ್ಟಗಳ ಮೇಲೆ ಸಂಕಷ್ಟವು ಎದುರಾಗುತ್ತಿದೆ.

ಭಾರತ ತಂಡ ಇದೀಗ ತನ್ನ ಗಮನವನ್ನು ಸಂಪೂರ್ಣವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲೆ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಇರುವ ಗೆಲುವನ್ನು ಕೂಡ ಸಾಧಿಸುತ್ತಿದೆ. ಅತ್ತ ಇಂಗ್ಲೆಂಡ್ ಪಡೆ ತನ್ನ ಮರ್ಯಾದಿ ಉಳಿಸಿಕೊಳ್ಳಲು ಭಾರತದ ವಿರುದ್ಧ 5ನೇ ಟೆಸ್ಟ್ ಪಂದ್ಯ ಗೆಲ್ಲಲು ಪರದಾಡುತ್ತಿದೆ. ಆದರೆ ಭಾರತ ತಂಡದ ಆಟಗಾರರು ಇಂಗ್ಲೆಂಡ್ ಸೋಲಿಗಾಗಿ ಈ ಮೂಲಕ ಗೆಲುವಿನ ಬಲೆ ಎಣೆದಿದ್ದಾರೆ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications