ಶಿವಮೊಗ್ಗದಲ್ಲಿ ನೆಟ್ವರ್ಕ್ ಸಮಸ್ಯೆ: BSNL ಟವರ್ಗಾಗಿ ಕೇಂದ್ರ ಸಚಿವರಿಗೆ ಸಂಸದ ರಾಘವೇಂದ್ರ ಮನವಿ
ಶಿವಮೊಗ್ಗ, ಆಗಸ್ಟ್ 4: ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ಉಂಟಾಗಿರುವ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು.
ದೆಹಲಿಯಲ್ಲಿ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದರು. ಜಿಲ್ಲೆಯ 80 ಗ್ರಾಮಗಳು ಸೇರಿದಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 96 ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಇಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
ಅಮಿತ್ ಶಾ ಕಾರ್ಯಕ್ರಮದಲ್ಲಿ ರಾರಾಜಿಸಿದ 'ಹಿಂದಿ': ಕನ್ನಡ ಕಡೆಗಣನೆಗೆ ಆಕ್ರೋಶ
ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 96 ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದ ಕಾರಣ, ಈ ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಉಂಟಾಗಿದೆ. ಈ ಗ್ರಾಮಗಳಲ್ಲಿ ಟವರ್ ನಿರ್ಮಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಪೂರೈಕೆಗೆ ಅನುಕೂಲವಾಗುವಂತೆ ದೂರ ಸಂಪರ್ಕ ಸಾಧನಗಳ ಮೇಲಿನ ತೆರಿಗೆ ಕಡಿತ ಮಾಡಬೇಕು. ಇದರಿಂದ ಸೇವೆ ಒದಗಿಸುವ ಕಂಪನಿಗಳಿಗೂ ಅನೂಕಲವಾಗಲಿದೆ. ಇನ್ನು, ಶಿವಮೊಗ್ಗ ಜಿಲ್ಲೆಯ ಶೇ.40ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ ನೆಟ್ ಸಂಪರ್ಕ ಸಮರ್ಪಕವಾಗಿಲ್ಲ. ಇದರಿಂದ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ 80 ಗ್ರಾಮಗಳು, ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಉಡುಪಿ ಜಿಲ್ಲೆಯ 16 ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಈ ಗ್ರಾಮಗಳ ಪಟ್ಟಿಯನ್ನು ದೂರ ಸಂಪರ್ಕ ಸಚಿವರಿಗೆ ಸಂಸದ ರಾಘವೇಂದ್ರ ಹಸ್ತಾಂತರ ಮಾಡಿದರು.
ಹೊಸನಗರ
ತಾಲೂಕು
ಅಂದಗೊಳಿ,
ಬಸವಾಪುರ,
ಬೇಗದಳ್ಳಿ,
ಬೇಳೂರು,
ಬ್ರಾಹ್ಮಣತರುವೆ,
ಬೈದೂರು,
ದೊಬ್ಯಾಳು,
ಗಿಣಿಕಲ್,
ಗುಬ್ಬಿಗ,
ಗುಡೋಡಿ,
ಹಳೆ
ತೋಟ,
ಹೊಳಗೋಡು,
ಹೊರೊಯತಿಗೆ,
ಕಳಸೆ,
ಕಾನಗೋಡು,
ಕರಿಗಲ್ಲು,
ಕಟ್ಟೆಕೊಪ್ಪ,
ಕಟ್ಟಿನಹೊಳೆ,
ಕೆ.ಹೊನ್ನೆಕೊಪ್ಪ,
ಕಿಲಂದೂರು
ಜಂಗಲ್,
ಕೊಳವಾಡಿ,
ಕೊರನಕೋಟೆ,
ಮಾಗೋಡಿ,
ಮಳಲಿ,
ಮನಸೆಟ್ಟೆ,
ಮಸ್ಕಾನಿ,
ನೀಲಕಂಠನ
ತೋಟ,
ನೆಲಗಳಲೆ,
ಪಿ.ಕಲ್ಲುಕೊಪ್ಪ,
ರಾವೆ,
ತೋಟದ
ಕೊಪ್ಪ,
ಉಳ್ತಿಗ.
ಸಾಗರ
ತಾಲೂಕು
ಬಾಳಿಗೆ,
ಬರುವೆ,
ಬೊಬ್ಬಿಗೆ,
ಬ್ರಾಹ್ಮಣ
ಇಳಕಳಲೆ,
ಚದರವಳ್ಳಿ,
ಚಿಮ್ಲೆ,
ಹೆದಾತ್ರಿ,
ಹೊನಗಲ್ಲು,
ಕಗರಸು,
ಕಲ್ಲೂರು,
ಕನಪಗಾರು,
ಕಣ್ಣೂರು,
ಕಾರಣಿ,
ಕಟ್ಟಿನಕಾರು,
ಕಿರುವಾಸೆ,
ಕೊಪ್ಪರಿಗೆ,
ಮಾಳೂರು,
ಮರಾಟಿ,
ಮುಳ್ಳಕೆರೆ,
ಮುಪ್ಪಾನೆ,
ನಾಡಕೆಪ್ಪಿಗೆ,
ನೆಲಹರಿ,
ಶಿರಗಳಲೆ
ಅವಡೆ,
ತಳಗೋಡು,
ಉರುಳಗಲ್ಲು,
ವಾಲೂರು.
ಶಿವಮೊಗ್ಗ ತಾಲೂಕಿನಲ್ಲಿ ಚಿತ್ರಶೆಟ್ಟಿ ಹಳ್ಳಿ, ಕೋಣೆ ಹೊಸೂರು, ಕುಡಗಲ ಮನೆ, ಮಲೆ ಶಂಕರ, ಶೆಟ್ಟಿ ಹಳ್ಳಿ, ಸಿದ್ದಮ್ಮಾಜಿ ಹೊಸೂರು ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಅಲಸೆ, ಬಸವನಗದ್ದೆ, ಬೊಮ್ಮನಹಳ್ಳಿ, ಚಕ್ಕೊಡಬೈಲು, ಗರಗ, ಹೆಗಲತ್ತಿ, ಹಿರೇಬೈಲು, ಹುರುಳಿ, ಕಿಕ್ಕೇರಿ, ಕೊಂಬಿನಕೈ, ನೇರಲಮನೆ, ಶುಂಠಿಹಕ್ಲು, ಟೆಂಕಬೈಲು, ತೋಟದಕೊಪ್ಪ, ಯೋಗಿಮಳಲಿ ನೆಟ್ವರ್ಕರ್ ಸಮಸ್ಯೆವಿದೆ.
ಈ ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಒದಗಿಸುವಂತೆ ಸಂಸದ ರಾಘವೇಂದ್ರ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಸಚಿವ ಅಶ್ವಿನಿ ವೈಷ್ಣವ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ.