ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಆಫರ್ ಕೊಟ್ಟಿತ್ತಂತೆ ಬಿಜೆಪಿ
ಶಿವಮೊಗ್ಗ, ನವೆಂಬರ್ 03: ಕಾಂಗ್ರೆಸ್ನ ಹಿರಿಯ ಶಾಸಕ ಮಾಜಿ ಮಂತ್ರಿ ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿಯು ಉಪಮುಖ್ಯಮಂತ್ರಿ ಮಾಡುವುದಾಗಿ ಆಮಿಷ ಒಡ್ಡಿತ್ತಂತೆ.
ಹೀಗೆಂದು ಅವರೇ ಸುದ್ದಿಗಾರರ ಬಳಿ ಹೇಳಿದ್ದಾರೆ, ಬಿಜೆಪಿಗೆ ಬರುವಂತೆ ಕರೆದಿದ್ದರು ಡಿಸಿಎಂ ಮಾಡುವುದಾಗಿಯೂ ಹೇಳಿದ್ದರು ಎಂದು ಶಿವಶಂಕರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ನೂ ಕರೀದರು, ಮತ್ತೊಬ್ಬರೂ ಕರೆದರು ಆದರೆ ನಮ್ಮ ಪಕ್ಷ ಸಿದ್ಧಾಂತ ಬಿಟ್ಟು ಹೋಗೋಕಾಗಲ್ಲ, ಅವರು ಕರೆದ ತಕ್ಷಣ ಹೋಗಿ ಬಿಡೋಕೆ ಯಾರೂ ಇಲ್ಲ ಇಲ್ಲಿ ಎಂದು ಅವರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಮುಗಿದು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದೇ ಇದ್ದಾಗ ಯಡಿಯೂರಪ್ಪ ಅವರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿದ್ದರು, ಆ ಸಮಯದಲ್ಲಿ ಶಿವಶಂಕರಪ್ಪ ಅವರು ಬಿಜೆಪಿಗೆ ಸೇರುತ್ತಾರೆ ಎನ್ನಲಾಗಿತ್ತು ಆದರೆ ಹಾಗೆ ಆಗಲಿಲ್ಲ.
ಇನ್ನು ಉಪಚುನಾವಣೆಗಳ ಬಗ್ಗೆ ಮಾತನಾಡಿರುವ ಶಿವಶಂಕರಪ್ಪ ಅವರು, ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ ಎಂದು ಹೇಳಿದರು.












Click it and Unblock the Notifications