ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ದಿನದ ಮೌನವ್ರತ ಮುರಿದ ಡಿ. ಕೆ. ಶಿವಕುಮಾರ್ ಹೇಳಿದ್ದೇನು?

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 13; ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಭಾನುವಾರ ಆರಂಭಗೊಂಡಿದ್ದ 11 ದಿನದ ಪಾದಯಾತ್ರೆ 4ನೇ ದಿನ ರಾಮನಗರಕ್ಕೆ ಬಂದು ತಲುಪಿತ್ತು.

ಗುರುವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

Breaking; ಮೇಕೆದಾಟು ಪಾದಯಾತ್ರೆ ಸ್ಥಗಿತಗೊಳಿಸಿದ ಕಾಂಗ್ರೆಸ್ Breaking; ಮೇಕೆದಾಟು ಪಾದಯಾತ್ರೆ ಸ್ಥಗಿತಗೊಳಿಸಿದ ಕಾಂಗ್ರೆಸ್

"ನಾನು ಮೂರು ದಿನ ಮೌನ" ಎಂದಿದ್ದ ಡಿ. ಕೆ. ಶಿವಕುಮಾರ್ ಗುರುವಾರ ಅನಿವಾರ್ಯವಾಗಿ ಮೌನ ಮುರಿದರು. ರಾಮನಗರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರ ಜೊತೆಗೆ ಮಾಧ್ಯಮಗಳ ಜೊತೆ ಮಾತನಾಡಿದರು.

ಮೇಕೆದಾಟು ಪಾದಯಾತ್ರೆ: ಡಿಕೆಶಿ ರಾಜಕೀಯ ಗುರು ಎಸ್.ಎಂ. ಕೃಷ್ಣ ಬರೆದ ಪತ್ರದಲ್ಲೇನಿದೆ?ಮೇಕೆದಾಟು ಪಾದಯಾತ್ರೆ: ಡಿಕೆಶಿ ರಾಜಕೀಯ ಗುರು ಎಸ್.ಎಂ. ಕೃಷ್ಣ ಬರೆದ ಪತ್ರದಲ್ಲೇನಿದೆ?

Mekedatu Padayatra Called off DK Shivakumar Press Conference

ಡಿ. ಕೆ. ಶಿವಕುಮಾರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

* ನಾನು ರಾತ್ರಿ ಮಲಗಿದ್ದ ವೇಳೆ ಎಸಿ ಮನೆಗೆ ಬಂದಿದ್ದರು. ಹೆಚ್ಚು ಪೊಲೀಸರು ಹಾಗೂ ಹಲವು ಜೀಪುಗಳಲ್ಲಿ ಬಂದು ಪಾದಯಾತ್ರೆ ನಿಲ್ಲಿಸಲು ನೋಟಿಸ್ ನೀಡಿದರು. ಜಿಲ್ಲಾಧಿಕಾರಿ ಸಹಿ‌ ಇರುವ ನೋಟಿಸ್ ನೀಡಿದ್ದರು. ಆದರೆ ಡಿಸಿಗೆ ಕೋವಿಡ್ ಇದೆ. ಹೀಗಾಗಿ ನಾನು ಅವರನ್ನು ವಾಪಸ್ಸು ಕಳುಹಿಸಿದೆ.

ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿ ಮಾಡುವುದು ಅಸಾಧ್ಯ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿ ಮಾಡುವುದು ಅಸಾಧ್ಯ

* ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರಂತೆ. ಬೆಳಗ್ಗೆ ಅವರೇ ಹರಿದು ಬಿಸಾಕಿದ್ದರು. ಬಿಬಿಎಂಪಿ‌ ಸಹ ನಮಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದಾರೆ. ಪಾದಯಾತ್ರೆಯನ್ನು ನಿಲ್ಲಿಸಿ ಎಂದು ನೋಟಿಸ್‌ನಲ್ಲಿ ತಿಳಿಸಿದ್ದರಂತೆ.‌

* ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ನೀಡಿ, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಅಂಬುಲೆನ್ಸ್ ಅನ್ನು ನಿಯೋಜಿಸಿ ಎಂದು ಹೇಳಿದ್ದಾರೆ. ಸರಕಾರದವರಿಗೂ ಸಹ ನಾವು ಪಾದಯಾತ್ರೆ ಮಾಡಲಿ ಎಂಬುದೇ ಆಸೆ. ನಮ್ಮ ಬಳಿ ಒಂದು, ಮಾಧ್ಯಮಗಳ ಬಳಿ ಇನ್ನೊಂದು ಹೇಳಿಕೆ ನೀಡುವಲ್ಲಿ ಸರಕಾರ ನಿರತವಾಗಿದೆ.

* ನಮಗೆ ನ್ಯಾಯಾಲಯ ಈ ವರೆಗೂ ಪಾದಯಾತ್ರೆ ನಿಲ್ಲಿಸಿ ಎಂದು ಹೇಳಿಲ್ಲ‌. ಆದರೆ ಇಂದಿನ ಪರಿಸ್ಥಿತಿ ಅವಲೋಕಿಸಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದೇವೆ. ನ್ಯಾಯಾಲಯಕ್ಕೆ ಗೌರವ ನೀಡುವುದು, ನಮ್ಮ ದೇವರಾದ ಜನರ ಬಳಿ ತಪ್ಪಿತಸ್ಥರಾಗಬಾರದು ಎಂಬುದು ನಮ್ಮ ಉದ್ದೇಶ.

* ಡಿಸಿ ಬಸ್‌ಗಳನ್ನು‌ ತಡೆಯುವಂತೆ ಆರ್‌ಟಿಒಗೆ ಒಂದು ಲೇಟರ್ ನೀಡಿದ್ದಾರೆ. ಕೊನೆಗೆ ನಾವು ಇಬ್ಬರೇ ನಡೆಯಬೇಕು ಎಂದುಕೊಂಡಿದ್ದೆವು‌. ಜನರು ಸುತ್ತ ಸುತ್ತಿಕೊಳ್ಳುತ್ತಾರೆ ಎಂಬ ಭಯ ಅಷ್ಟೇ. ನಾವು ಕೋರ್ಟು, ಜೈಲು, ಬೇಲು ಇಂತಹವಕ್ಕೆಲ್ಲ ಹೆದರಿಕೊಳ್ಳುವುದಿಲ್ಲ.

* ಬಿಬಿಎಂಪಿ ಸಹ ಇಂದು ಬೆಳಗ್ಗೆ ನೋಟಿಸ್ ನೀಡಿ, ಅನುಮತಿ ನಿರಾಕರಿಸಿದ್ದಾರೆ. ಈ ಯಾತ್ರೆ ಇಲ್ಲಿಗೆ ಮುಕ್ತಾಯ ಎನ್ನುವಂತಿಲ್ಲ. ಮತ್ತೆ ಇಲ್ಲಿಂದಲೇ ಯಾತ್ರೆ ಮುಂದುವರಿಯಲಿದೆ. ಎಲ್ಲರನ್ನು‌ಒಂದೇ ರೀತಿ ಕಾಣುವ ಗುಣ ಸರಕಾರಕ್ಕಿದ್ದರೆ, ಅವರ ಶಾಸಕರು, ಅಧಿಕಾರಿಗಳ ಮೇಲೂ ಕೇಸ್ ಹಾಕಬೇಕಿತ್ತು. ಪ್ರಚೋಧನಕಾರಿ‌ ಹೇಳಿಕೆ ನೀಡಿದ್ದವರ ಮೇಲೆ ಇಂದಾದರೂ‌ ಕೇಸ್ ಹಾಕಿ, ಸರಕಾರ ತಮ್ಮ ದೈರ್ಯ ಪ್ರದರ್ಶಿಸಬೇಕು.

* ನಾವು ಕೋವಿಡ್ ಸಮಯದಲ್ಲಿ ಜನರೊಟ್ಟೊಗೆ ನಿಂತಿದ್ದೇವೆ. ಸಾವಿರಕ್ಕೂ ಹೆಚ್ಚು ಅಂಬುಲೆನ್ಸ್ ಅನ್ನು ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿದ್ದೆವು. ಈ ಸೇವೆ ಹೀಗೆ ಮುಂದುವರಿಯಲಿದೆ. ನಮ್ಮ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಅಷ್ಟೆ.

Recommended Video

Karnataka : 11 ದಿನದ ಮೇಕೆದಾಟು ಪಾದಯಾತ್ರೆ 5 ದಿನಗಳಿಗೆ ಅಂತ್ಯಗೊಳಿಸಿದ ಕಾಂಗ್ರೆಸ್ | Oneindia Kannada

* ಇಷ್ಟು ಸಾವಿರಾರು ಜನ ನಮಗೆ ಪ್ರೀತಿ ತೋರಿಸಿದ್ದಾರೆ. ಅವರ ಋಣ ಹೇಗೆ ತೀರಿಸಬೇಕು‌? ಎಂದು ಗೊತ್ತಾಗುತ್ತಿಲ್ಲ. ಮೊದಲು ತಮಿಳುನಾಡಿನ ಮೇಲೆ ಹೋರಾಟ ಮಾಡುತ್ತಿದ್ದೆವು.‌ ಈಗ ತಮಿಳುನಾಡಿನೊಂದಿಗೆ ರಾಜ್ಯದ ಇನ್ನೆರೆಡು ಪಾರ್ಟಿ ವಿರುದ್ದವು ಹೋರಾಟ ಮಾಡಬೇಕಿದೆ.

English summary
Karnataka Congress leaders decided to stop Mekedatu padayatra. KPCC president D. K. Shivakumar press conference highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X