Breaking: ರಾಮನಗರ ಜಿಲ್ಲಾದ್ಯಂತ ಈ ಎರಡು ದಿನ ಮದ್ಯ ಮಾರಾಟ ನಿಷೇಧ
ರಾಮನಗರ, ಸೆಪ್ಟೆಂಬರ್ 2: ಕಳೆದೆರಡು ವರ್ಷ ಕೋವಿಡ್ ಹಾವಳಿಯ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಗಣೇಶೋತ್ಸವ ಈ ಬಾರಿ ಕೋವಿಡ್ ಭೀತಿ ಕಡಿಮೆಯಾದ ಕಾರಣ ಜಿಲ್ಲಾದ್ಯಂತ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮೆರವಣಿಗೆ ಮಾಡಿ ವಿಸರ್ಜನೆ ಮಾಡಲು ಸಜ್ಜಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಎರಡು ದಿನ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ.
ಜಿಲ್ಲೆಯಲ್ಲಿ ಒಟ್ಟು 1492 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಬಹುತೇಕ ಗಣೇಶ ಮೂರ್ತಿಗಳನ್ನು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಶುಕ್ರವಾರ ಹಾಗೂ ಭಾನುವಾರ ವಿಸರ್ಜನೆ ಮಾಡಲು ಗಣೇಶೋತ್ಸವ ಸಮಿತಿಗಳು ಸಜ್ಜಾಗಿವೆ. ಅಲ್ಲದೇ ಜಿಲ್ಲೆಯು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಕಾರಣ ಸೆಪ್ಟೆಂಬರ್ 2 ಹಾಗೂ 04 ರ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಇಳಕಲ್ನಲ್ಲಿ ಗಮನ ಸೆಳೆದ 20 ಅಡಿ ವಾಟರ್ ಬಾಟಲ್ ಗಣೇಶ ಮೂರ್ತಿ
ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವಂತಹ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ದಿನಾಂಕ 02-09-2022 ರಂದು ಬೆಳಿಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಮತ್ತು ದಿನಾಂಕ 04-09-2022 ರಂದು ಬೆಳಿಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯು
ಮತೀಯವಾಗಿ
ಅತ್ಯಂತ
ಸೂಕ್ಷ್ಮ
ಪ್ರದೇಶವಾದ
ಕಾರಣ
ಎರಡು
ದಿನಗಳ
ಕಾಲ
ಮದ್ಯ
ಮಾರಾಟ
ನಿಷೇಧ
ಮಾಡುವಂತೆ
ಜಿಲ್ಲಾ
ಪೋಲಿಸ್
ವರಿಷ್ಠಾಧಿಕಾರಿ
ಸಂತೋಷ
ಬಾಬು
ವರದಿ
ನೀಡಿ
ಮನವಿ
ಮಾಡಿದ್ದರು.
ವರದಿ
ಹಿನ್ನಲೆಯಲ್ಲಿ
ಕರ್ನಾಟಕ
ಅಬಕಾರಿ
ಕಾಯಿದೆ
1965
ರ
ಕಲಂ
21ರಡಿಯಲ್ಲಿ
ಪ್ರದತ್ತವಾಗಿರುವ
ಅಧಿಕಾರವನ್ನು
ಚಲಾಯಿಸಿ,
ಕರ್ನಾಟಕ
ಅಬಕಾರಿ
ನಿಯಮಗಳು,
1968ರ
ನಿಯಮ
3
ರ
ಅನ್ವಯ
ರಾಮನಗರ
ಜಿಲ್ಲಾ
ವ್ಯಾಪ್ತಿಯಲ್ಲಿ
ಮದ್ಯ
ಮಾರಾಟ
ನಿಷೇಧ
ಮಾಡಿರುವುದಾಗಿ
ಜಿಲ್ಲಾಧಿಕಾರಿ
ಪ್ರಕಟಣೆಯಲ್ಲಿ
ಹೊರಡಿಸಿದ್ದಾರೆ.