ರಾಮಗರ: ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟಿಸಿದ ಕೆಂಪೇಗೌಡನ ದೊಡ್ಡಿ ಗ್ರಾಮಸ್ಥರು
ರಾಮನಗರ, ಸೆಪ್ಟೆಂಬರ್, 09: ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ, ರಸ್ತೆಯನ್ನು ಸರಿಪಡಿಸಿ ಎಂದು ಕೆಂಪೇಗೌಡನ ದೊಡ್ಡಿಯಲ್ಲಿ ಪ್ರತಿಭಟನೆ ನಡೆಸಿ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ಕೈಳ್ಳುವಂತೆ ಆಗ್ರಹಿಸಿ, ರಸ್ತೆಯಲ್ಲಿಯೇ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ರಾಮನಗರ ಮತ್ತು ಮಾಗಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕೆಂಪೇಗೌಡನ ದೊಡ್ಡಿಯಲ್ಲಿ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಅವಾಂತರಗಳಯ ಸೃಷ್ಟಿ ಆಗಿವೆ. ಇಷ್ಟೆಲ್ಲ ಅವಾಂತರಗಳು ಆದರೂ ಕೂಡ ಅಧಿಕಾರಿಗಳು ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಕೆಂಪೇಗೌಡನ ದೊಡ್ಡಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದಷ್ಟೇ ಅಲ್ಲದೇ, ರಸ್ತೆ ಗುಂಡಿ ಸರಿಪಡಿಸದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದಲ್ಲಿ ಅಬ್ಬರಿಸುತ್ತಿರುವ ವರುಣ, ಸಾರ್ವಜನಿಕರಿಗೆ ಮತ್ತೆ ಜಲಾಘಾತದ ಭೀತಿ
ತಾಲೂಕಿನ ಕೆಂಪೇಗೌಡನ ದೊಡ್ಡಿ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿಸುಮಾರು ಎರಡು ಅಡಿಯಷ್ಟು ಆಳದ ಗುಂಡಿಗಳು ನಿರ್ಮಾಣ ಆಗಿವೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ವಾಹನ ಸವಾರರು ಹರಸಾಹಸಪಟ್ಟು ಮುಂದೆ ಸಾಗುತ್ತಿದ್ದಾರೆ. ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಎಷ್ಟೇ ಮನವರಿಕೆ ಮಾಡಿದರು ಕೂಡ ಅವರು ಎಚ್ಚೆತ್ತುಕೊಳ್ಳುತ್ತಿದ್ದ ಎಂದು ಜನರು ಕಿಡಿಕಾರಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅನಾಹುತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕೆರೆಯಂತಾದ
ರಸ್ತೆಗಳು,
ಜನಾಕ್ರೋಶ:
ರಾಜ್ಯ
ಹೆದ್ದಾರಿಯಲ್ಲಿ
ಸೃಷ್ಟಿ
ಆಗಿರು
ಗುಂಡಿಗಳಿಂದ
ವಾಹನ
ಸವಾರರು
ಪ್ರತಿನಿತ್ಯವೂ
ಪರದಾಡುವಂತಾಗಿದೆ.
ತಾಲೂಕು
ಕೇಂದ್ರದಿಂದ
ಕೇವಲ
3
ಕಿಲೋ
ಮೀಟರ್
ಇರುವ
ಈ
ರಸ್ತೆಯೂ,
ಕೆಂಪೇಗೌಡನ
ದೊಡ್ಡಿ
ಗ್ರಾಮದಿಂದ
ನಗರ
ತಲುಪಲು
ಸಾಕಷ್ಟು
ಸಮಯವನ್ನು
ತೆಗೆದುಕೊಳ್ಳುತ್ತಿದೆ.
ಪ್ರಯಾಣಿಕರು
ಹರಸಾಹಸ
ಪಟ್ಟು
ವಾಹನಗಳಲ್ಲಿ
ಸಾಗಬೇಕಿದೆ.
ಅಲ್ಲದೇ
ಇದೇ
ರಸ್ತೆ
ಧಶಪಥ
ರಾಷ್ಟ್ರೀಯ
ಹೆದ್ದಾರಿಯನ್ನು
ಸಂಪರ್ಕಿಸುವ
ಹಿನ್ನೆಲೆಯಲ್ಲಿ
ವಾಹನ
ದಟ್ಟಣೆಯೂ
ಹೆಚ್ಚಾಗಿದೆ.
ಇನ್ನೂ
ಸಂಗಬಸವನ
ದೊಡ್ಡಿ
ಬಳಿ
ನೂತನವಾಗಿ
ನಿರ್ಮಾಣ
ಆಗಿರುವ
ದಶಪಥ
ಹೆದ್ದಾರಿಯ
ಅಂಡರ್
ಪಾಸ್ನಲ್ಲಿ
ಕಳೆದ
ವಾರದಿಂದಲೂ
ಮಳೆ
ನೀರು
ನಿಂತಿದೆ.
ಅಂಡರ್ಪಾಸ್ನಲ್ಲಿ
ಕರೆಯಂತಾಗಿರುವ
ಹಿನ್ನೆಲೆಯಲ್ಲಿ
ಬೆಂಗಳೂರು
ಹಾಗೂ
ಮೈಸೂರಿಗೆ
ತೆರಳುವ
ಕೆಎಸ್ಆರ್ಟಿಸಿ
ಬಸ್ಗಳು,
ರಾಮನಗರ
ಬಸ್
ನಿಲ್ದಾಣ
ಪ್ರವೇಶ
ಮಾಡಲು
ಇದೇ
ರಾಜ್ಯ
ಹೆದ್ದಾರಿ
ಬಳಸುತ್ತಿರುವುದರಿಂದ
ವಾಹನಗಳ
ಸಂಚಾರ
ಹೆಚ್ಚಾಗಿದೆ.
ಇದೇ
ಕಾರಣದಿಂದ
ರಸ್ತೆಗಳಲ್ಲಿ
ಗುಂಡಿಗಳು
ಬಿದ್ದಿವೆ
ಎಂದು
ಜನರು
ಆಕ್ರೋಶ
ವ್ಯಕ್ತಪಡಿಸಿದ್ದಾರೆ.
"ಮಳೆಯಿಂದಾಗಿ ಹೆದ್ದಾರಿ ಹಾನಿ ಆಗಿದೆ. ಇಡೀ ರಸ್ತೆಯುದ್ದಕ್ಕೂ ಮಳೆ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ತೊಂದರೆ ಆಗಿದೆ. ನಾನು ಆ ಭಾಗದ ಜನಪ್ರತಿನಿಧಿ ಆಗಿದ್ದೇನೆ. ನಾವು ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ತಲುಪಿದೆ," ಎಂದು ಹೆದ್ದಾರಿ ಕಾಮಗಾರಿ ಬಗ್ಗೆ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಮನಗರವನ್ನು ಸತತ ಮಳೆಯಿಂದ ಕಾಡುತ್ತಲೇ ಇದ್ದು, ಧಾರಾಕಾರ ಮಳೆಯಿಂದಾಗಿ ಭಾರಿ ಅನಾಹುತಗಳಾಗಿದೆ. ರಾಮನಗರ ಸಮೀಪ ರಾಷ್ಟ್ರೀಯ ಹೆದ್ದಾರಿ ಮುಳುಗಡೆಯೂ ಆಗಿತ್ತು. ಕಾರಣ ಮನೆಗಳಿಗೆ ನೀರು ನುಗ್ಗಿದ್ದು, ಮಳೆ ನೀರನ್ನು ಮನೆಯಿಂದ ಹೊರಹಾಕಲು ಜನರು ಹರಸಾಹಸ ಪಟ್ಟಿದ್ದರು.