ಮಳೆಗೆ ಕಮರಿದ ಸೊಪ್ಪು, ತರಕಾರಿ; ಗ್ರಾಹಕರ ಜೇಬಿಗೆ ಕತ್ತರಿ: ಸಂಕಷ್ಟದಲ್ಲಿ ರೈತರು
ರಾಯಚೂರು, ಅಕ್ಟೋಬರ್ 6: ಸತತ ಸುರಿದ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯ ಮತ್ತು ಶೀತಗಾಳಿ ಪ್ರಮಾಣ ಹೆಚ್ಚಾಗಿ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದರಿಂದ ರಾಯಚೂರು ಜಿಲ್ಲೆಯ ರೈತರು ಕಂಲಾಗಿದ್ದಾರೆ.
ಜಿಲ್ಲಾದ್ಯಂತ ಅಂದಾಜು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ತರಕಾರಿ ಬೆಳೆದಿದ್ದು, ಮೆಣಸಿನಕಾಯಿ, ದಾಳಿಂಬೆ, ಹೂ ಕೋಸು, ಈರುಳ್ಳಿ ಸಹ ಬೆಳೆದಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಸಂಪೂರ್ಣ ಕೊಳೆತಿದೆ. ಜಿಲ್ಲಾದ್ಯಂತ ಅಂದಾಜು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾಳಾಗಿವೆ. ಮಳೆಯಿಂದ ಹೂ ಕೋಸು, ಟೊಮೇಟೊ, ಈರುಳ್ಳಿ ಬೆಳೆಗೆ ಬಾರಿ ಪೆಟ್ಟು ಬಿದ್ದಿದೆ.
ಮಳೆಯಿಂದ ಬೆಳೆಗಳು ಕೊಳೆಯುವ ಪರಿಸ್ಥಿತಿ ಬಂದಿದೆ. ಹೂ ಕೋಸು ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಬೆಳೆಯೆಲ್ಲ ಹಿಂತಿರುಗಿ ರೈತರ ಮನೆಗೆ ಸೇರಿದ್ದರಿಂದ ರೈತರು ಸಂಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ.
ಇದು ರೈತರ ಪಾಡಾದರೆ ಉತ್ತಮ ಹೆಚ್ಚಿನ ಪ್ರಮಾಣದ ತರಕಾರಿ ಮಾರುಕಟ್ಟೆಯಲ್ಲಿಲ್ಲದ ಕಾರಣ ಕೆಜಿಗೆ 20-30 ರೂ. ಇದ್ದ ಟೊಮೇಟೊ ಈಗ 70 ರೂ. ಆಗಿದೆ. ಕೆಜಿಗೆ 40 ಇದ್ದ ಬೀನ್ಸ್ ಈಗ 70-80 ರೂ. ಏರಿಕೆಯಾಗಿದೆ. ಸೌತೆಕಾಯಿ, ಹೂ ಕೋಸು ಬೆಲೆಯೂ ಹೆಚ್ಚಾಗಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ತರಕಾರಿ ಕೊಳ್ಳುವುದೇ ದುಸ್ತರವಾಗಿದೆ. ಅದರಲ್ಲೂ ಬಡ, ಮಧ್ಯಮ ವರ್ಗದವರಂತೂ ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ರೈತರಿಗೆ ನಷ್ಟ, ಗ್ರಾಹಕರಿಗೆ ಹೊರೆ
ಈರುಳ್ಳಿ 40-50 ರೂ. ಆಗಿದೆ. ಕ್ಯಾರೆಟ್ ಕೆಜಿಗೆ 30 ರೂ. ಇದ್ದಿದ್ದು ಈಗ 50 ರೂ. , ಹಿರೇಕಾಯಿ ಬೆಲೆ ದುಪ್ಪಟ್ಟಾಗಿದ್ದು, ಕೆಜಿಗೆ 60 ರೂ. ಆಗಿದೆ. ಬೆಂಡೆಕಾಯಿ 50 ರೂ.ಗೆ ಏರಿಕೆಯಾಗಿದೆ. ಚವಳಿಕಾಯಿ ಕೆಜಿಗೆ 40 ಇದ್ದಿದ್ದು 60-70 ರೂ.ಗೆ ಏರಿಕೆ ಕಂಡಿದೆ. ಹಾಗಲಕಾಯಿ 50 ರೂ., ಕ್ಯಾಪ್ಸಿಕಮ್ 70 ರೂ. ಗಡಿದಾಟಿದ್ದು, ಕೊಂಡುಕೊಳ್ಳುವುದೇ ಕಷ್ಟವಾಗಿ ಪರಿಣಮಿಸಿದೆ. ಅದರಲ್ಲೂ ಟೊಮೇಟೊ ಬೆಲೆ ಕೇಳಿ ಗ್ರಾಹಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಕೆಜಿ ಖರೀದಿಸುತ್ತಿದ್ದ ಗ್ರಾಹಕರು ಅರ್ಧ ಕೆಜಿ ಖರೀದಿಸುತ್ತಿದ್ದಾರೆ. ಬೆಲೆ ಏರಿಕೆಗೆ ತತ್ತರಿಸಿರುವ ಕೆಲವರು ಟೊಮೇಟೊ ಖರೀದಿಸುವುದನ್ನೇ ಬಿಟ್ಟು ಹುಣಿಸೆ ಹಣ್ಣನ್ನೇ ಪರ್ಯಾಯವಾಗಿ ಬಳಸುತ್ತಿದ್ದಾರೆ.

ಮಳೆಯಿಂದ ಕೊಳೆಯುತ್ತಿರುವ ತರಕಾರಿ
ಕೊತ್ತಂಬರಿ, ಪಾಲಕ್, ಮೆಂತೆ ಸೇರಿ ಮುಂತಾದ ಸೊಪ್ಪುಗಳ ಮಳೆಯಿಂದ ಹಾಳಾಗಿದ್ದು, ಇವುಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾಳಾಗಿರುವುದರಿಂದ ದೂರದ ಜಿಲ್ಲೆಗಳಿಂದ ಹಾಗೂ ಆಂಧ್ರ ಹಾಗೂ ತೆಲಂಗಾಣದಿಂದ ತರಕಾರಿ, ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಜಿಟಿ ಜಿಟಿ ಮಳೆಯಿಂದ ತೇವಾಂಶ ಹೆಚ್ಚಿ ಈರುಳ್ಳಿ ಹಾಳಾಗುತ್ತಿದೆ. ತಾಡಪತ್ರಿ ಹೊದಿಸಿದರೆ, ಗಾಳಿಯಾಡದೇ ದುರ್ನಾತ ಬೀರುತ್ತಿದೆ. ಹೀಗಾಗಿ ಈರುಳ್ಳಿ, ಹೂ ಕೋಸು ಬೆಳೆದವರು ಚಿಂತೆಗೀಡಾಗಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗದ ಬೆಲೆ
ಮಳೆ ಸ್ವಲ್ಪವೂ ಬಿಡುವು ಕೊಡುತ್ತಿಲ್ಲ. ಕೆಲವೆಡೆ ಈರುಳ್ಳಿ ಹಾಕಿದಲ್ಲೇ ಕೆಡುತ್ತಿವೆ. ಹೂ ಕೋಸು ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ಕೈಗೆ ಬಂದ ಬೆಳೆ ತಿಪ್ಪೆ ಪಾಲಾಗುತ್ತಿದೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೂ ಕೋಸು ಸಂಪೂರ್ಣ ಹಾಳಾಗಿದೆ. ಮಾರುಕಟ್ಟೆಗೆ ಕಳುಹಿಸಿದರೂ ಬೆಲೆ ಇಲ್ಲದ್ದರಿಂದ ಹಿಂತಿರುಗಿ ಮನೆಗೆ ಬಂದಿದ್ದು, ಕಷ್ಟಪಟ್ಟು ಬೆಳೆಸಿದ ಬೆಳೆ ಹಾಳಾಗಿದೆ ಎಂದು ರೈತ ತಮ್ಮ ನೋವು ತೋಡಿ ಕೊಂಡಿದ್ದಾರೆ.

ಮುಂದುವರೆಗೆ ಬೆಳೆಹಾನಿ ಸಮೀಕ್ಷೆ
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆಯಿಂದಾಗಿರುವ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದಾರೆ. 150 ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಮತ್ತೆ ಸಮೀಕ್ಷೆ ಮುಂದುವರಿದಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಮಹಮ್ಮದ್ ಅಲಿ ಹೇಳಿದರು.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications