Get Updates
Get notified of breaking news, exclusive insights, and must-see stories!

Raichur airport: ಒಂದೂವರೆ ವರ್ಷ ಕಳೆದರೂ ಶುರುವಾಗದ ಕಾಮಗಾರಿ: ರಾಯಚೂರಿನಲ್ಲಿ ವಿಮಾನ ಹಾರಾಟಕ್ಕೆ ನೂರಾರು ವಿಘ್ನ!

ರಾಯಚೂರು ಜುಲೈ 3: ರಾಯಚೂರಿನಲ್ಲಿ ವಿಮಾನ ಹಾರಾಟಕ್ಕೆ ಕಾಲ ಕೂಡಿ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ದೇವದುರ್ಗ ವಿಧಾನಸಭಾ ಕ್ಷೇತ್ರದ ನಾನಾ ಅಭಿವೃದ್ಧಿ ಕಾಮಗಾರಿ ಚಾಲನೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದ್ದಾಗ ಅಡಿಗಲ್ಲು ಸಮಾರಂಭ ನೆರವೇರಿತ್ತು.

ಒಂದೂವರೆ ವರ್ಷ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಕೇವಲ ಕಾಂಪೌಂಡ್‌ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿರುವುದು ಅನುಮಾನಕ್ಕೆಡೆ ಮಾಡಿದೆ. ವಿಮಾನ ಪ್ರಾಧಿಕಾರ ಅನುಮತಿ ಸೇರಿ ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆಯದೇ ಇರುವುದು ನಿಲ್ದಾಣ ಕಾಮಗಾರಿ ಪ್ರಾರಂಭಕ್ಕೆ ಅಡ್ಡಿಯಾಗಿದೆ.

There are hundreds of problems for flights in Raichur

ವಿಜಯಪುರ ಮೂಲದ ಕೆಎಂವಿ ಲಿಮಿಡೆಟ್‌ ಎಂಬುವವರಿಗೆ ವಿಮಾನ ನಿಲ್ದಾಣ ಗುತ್ತಿಗೆ ಕಾಮಗಾರಿ ವಹಿಸಲಾಗಿದೆ. ಆದರೆ, ಸಂಬಂಧಿಸಿದ ಇಲಾಖೆಗಳ ಅನುಮೋದನೆ ಇಲ್ಲದೇ ಕಾಮಗಾರಿ ನಿರ್ವಹಿಸಲು ಸಾಧ್ಯವಾಗದೇ ವರ್ಷಗಳು ಉರುಳುವಂತಾಗಿದೆ.

ಕಳೆದ ಬಾರಿ ವಿಮಾನ ನಿಲ್ದಾಣ ಪ್ರಾಧಿಕಾರದ ಆರು ಜನ ಅಧಿಕಾರಿಗಳ ತಂಡ, ಯರಮರಸ್‌ ವಿಮಾನ ನಿಲ್ದಾಣ ಸ್ಥಳಕ್ಕೆ ಭೇಟಿ ನೀಡಿ ಎಲ್ಲಆಯಾಮಗಳಲ್ಲಿ ಅಧ್ಯಯನ ನಡೆಸಿತ್ತು. ಯರಮರಸ್‌ ಶಾಖೋತ್ಪನ್ನ ಕೇಂದ್ರಗಳ ಚಿಮಣಿಯಿಂದ ಭವಿಷ್ಯದಲ್ಲಿ ವಿಮಾನ ಹಾರಾಟಕ್ಕೆ ತೊಂದರೆಯಾಗುವ ಕುರಿತು ಆಕ್ಷೇಪಣೆ ಸಲ್ಲಿಸಿತ್ತು.

72 ಸೀಟುಗಳು ವಿಮಾನ ಹಾರಾಟಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ, ಹೆಚ್ಚುವರಿ ಸೀಟುಗಳು ವಿಮಾನ ಹಾರಾಟ, ನಿಲ್ದಾಣ ವಿಸ್ತರಣೆಯಾದರೆ ವೈಟಿಪಿಎಸ್‌ ಚಿಮಣಿಯಿಂದ ಸಮಸ್ಯೆ ಎದುರಾಗುವ ಸಾಧ್ಯತೆಗಳನ್ನು ಉಲ್ಲೇಖಿಸಿತ್ತು ಎಂದು ಹೇಳಲಾಗಿದೆ.

ಸರಕಾರದಿಂದ 180 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ರೈಟ್ಸ್‌ ಸಂಸ್ಥೆ ನೀಡಿದ್ದ 216 ಕೋಟಿ ರೂ ಅಂದಾಜು ವಿಸ್ತೃತ ಯೋಜನೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಸರಕಾರಗಳು ಅನುಮೋದನೆ ನೀಡಿ ಬಜೆಟ್‌ನಲ್ಲಿ ಘೋಷಣೆ ಮಾಡಿವೆ. ಆದರೆ, ರನ್‌ ವೇ ನಿರ್ಮಾಣ ಒಳಗೊಂಡಂತೆ ಇತರೆ ಷರತ್ತು ಪೂರೈಸಲು ಇನ್ನಷ್ಟು ಆರ್ಥಿಕ ನೆರವಿನೆ ಅವಶ್ಯಕತೆಯಿದೆ.

ಈಗಾಗಲೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಜಿಲ್ಲಾ ಖನಿಜ ನಿ, ಕೆಎಸ್‌ಐಡಿಇಎಲ್‌ನ ಅನುದಾನ ಸೇರಿ ಅನುದಾನ ಹೊಂದಾಣಿಕೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ಆಗುವ ವೆಚ್ಚಕ್ಕೆ ಸರಕಾರ ಪರಿಷ್ಕೃತ ಅನುದಾನ ಬಿಡುಗಡೆ ಮಾಡಬೇಕಾದ ಅವಶ್ಯಕತೆಯಿದೆ.

ವಿಮಾನ ನಿಲ್ದಾಣ ಕಾಮಗಾರಿಗೆ ಟೆಂಡರ್‌ ಪೂರ್ಣಗೊಳ್ಳುವ ಮುಂಚೆಯೇ ವಿಮಾನ ನಿಲ್ದಾಣಕ್ಕೆ ಬೇಕಿರುವ ಭೂಮಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿಕೊಂಡಿರುವುದನ್ನು ಖಾತ್ರಿಪಡಿಸಿದ ನಂತರವೇ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ ಸ್ಥಳದಲ್ಲಿ 23 ಎಕರೆ ಭೂಮಿ ಒತ್ತುವರಿಯಾಗಿದೆ.

ಯರಮರಸ್‌ ಸೇರಿ 108 ಮನೆಗಳ ತೆರವು ಕಾರ್ಯವೂ ಅಪೂರ್ಣವಾಗಿದೆ. ತೆರವಿಗೆ ಜಿಲ್ಲಾಡಳಿತ ನಡೆಸಿದ ಪ್ರಯತ್ನ ಸಾಕಾರಗೊಂಡಿಲ್ಲ. ವಿಮಾನ ನಿಲ್ದಾಣಕ್ಕೆ ಎದುರಾಗಿರುವ ಕಗ್ಗಂಟು ನಿವಾರಣೆಗೆ ಆರ್ಥಿಕ ಸಮಸ್ಯೆಯೊಂದಿಗೆ ಆಡಳಿತಾತ್ಮಕವಾಗಿರುವ ಗೊಂದಲ ನಿವಾರಿಸಿಕೊಳ್ಳಬೇಕಿದೆ.

ಜಿಲ್ಲೆಯ ನೂತನ ಸಂಸದ ಜಿ.ಕುಮಾರ ನಾಯಕ ಸಹ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ವಿಮಾನ ನಿಲ್ದಾಣಕ್ಕೆ ಎದುರಾಗಿರುವ ಅಡ್ಡಿ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳು ಬೆಂಬಲ ನೀಡದ ಹೊರತು ಕಾಮಗಾರಿ ಮುಂದುವರಿಸುವಂತಿಲ್ಲ. ಬಿಡುವಂತೂ ಇಲ್ಲ. ಈ ಮಧ್ಯೆ ಕಾಮಗಾರಿಗೆ ಇರುವ ಅಡ್ಡಿ, ಪರವಾನಗಿ ಪಡೆಯಲು ಕೆಎಸ್‌ಐಡಿಸಿ ಸಂಸ್ಥೆಗೆ ರಾಜ್ಯ ಸರಕಾರ ಜವಬ್ದಾರಿ ವಹಿಸಿದೆ.

ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿದ್ದು, ವಿಮಾನ ನಿಲ್ದಾಣಕ್ಕೆ ಯಾವುದೇ ಅಡಚಣೆ ಬಾರದಂತೆ ಕಾಮಗಾರಿ ಪ್ರಾರಂಭದ ಜತೆಗೆ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಲಾಗಿದೆ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ ಹೇಳಿದರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+